ಸರಣಿ ಸರಗಳ್ಳತನ, ಬೆಚ್ಚಿಬಿದ್ದ ಬೆಂಗಳೂರು

ಸರಗಳ್ಳತನಗಳು ಆಗಾಗ, ಅಲ್ಲಲ್ಲಿ ನಡೆಯುವುದು ಬೆಂಗಳೂರಿನಲ್ಲಿ ಮಾಮೂಲು. ಆದರೆ, ಒಂದೇ ದಿನ ಅದೂ ನಗರದ ಉತ್ತರ ಭಾಗದಲ್ಲೇ ಹಲವಾರು ಪ್ರಕರಣಗಳು ನಡೆದಿದ್ದು ನಗರವನ್ನು ಬೆಚ್ಚಿ ಬೀಳಿಸಿದೆ.
ಯಶವಂತಪುರದ ತ್ರಿವೇಣಿ ರಸ್ತೆ, ಜಾಲಹಳ್ಳಿಯ ಬಿಇಎಲ್ ರಸ್ತೆ, ವೈಯಾಲಿ ಕಾವಲ್, ಪುಲಿಕೇಶಿ ನಗರ, ಮತ್ತು ಮಲ್ಲೇಶ್ವರಂನಿಂದ ಸರಗಳ್ಳತನಗಳು ರಾಜಾರೋಷವಾಗಿ ನಡೆದ ಘಟನೆಗಳು ವರದಿಯಾಗಿವೆ. ಈ ಸಂಬಂಧದ ಪ್ರಕರಣಗಳು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. (ನಾಲ್ಕು ಕಡೆ ನಕಲಿ ಪೊಲೀಸರ ಕೈ ಚಳಕ)
ಆಭರಣ ಕಳೆದುಕೊಂಡ ವ್ಯಕ್ತಿಗಳ ಹೆಸರುಗಳು ಮತ್ತು ಬಂಗಾರದ ಅಂದಾಜು ತೂಕ ಇಂತಿದೆ. ಕಮಲಮ್ಮ ( 75 ಗ್ರಾಂ), ರಾಣಿ (100 ಗ್ರಾಂ), ಮೂರ್ತಿ (30 ಗ್ರಾಂ), ಸಗಾಯಿ (40 ಗ್ರಾಂ). ಎಂ.ಎಂ.ರಸ್ತೆಯ ಸರಸ್ವತಿ (40 ಗ್ರಾಂ) ಒಂದೇ ಗುಂಪು ಎಲ್ಲಾ ಪ್ರದೇಶಗಳಲ್ಲಿ ಸರಣಿ ಕಳ್ಳತನ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಹಾನಗರದ ಪೊಲೀಸ್ ಆಯುಕ್ತರಾಗಿ ರಾಘವೇಂದ್ರ ಔರಾದ್ ಕರ್ ಅಧಿಕಾರ ಸ್ವೀಕರಿಸಿದ ದಿನದಂದೇ ಸರಣಿ ಸರಗಳ್ಳತನ ನಡೆದಿರುವುದು ಕಾಕತಾಳೀಯವೆನಿಸಿದೆ. ಭಾನುವಾರ ಬೆಳಗ್ಗೆ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಔರಾದ್ ಕರ್ ಗೆ ಅಧಿಕಾರ ಹಸ್ತಾಂತರಿಸಿದರು. ಅಂದಹಾಗೆ ಇಂದಿನ ಚಿನ್ನದ ಬೆಲೆ 10 ಗ್ರಾಂಗೆ 24,300.












Click it and Unblock the Notifications