Get Updates
Get notified of breaking news, exclusive insights, and must-see stories!

ಜಲಪ್ರಳಯ: ಸಹಾಯವಾಣಿ ಇಲ್ಲಿದೆ, ಚಿತ್ರ ಮನ ಕಲಕಿದೆ

ಉತ್ತರಾಖಂಡ್, ಜೂ.20: ನೀರಿನ ನಡುಗಡ್ಡೆಯಲ್ಲಿ ಸಿಲುಕಿ ಅತಂತ್ರ ಸ್ಥಿತಿಯಲ್ಲಿರುವ ಸಾವಿರಾರು ಮಂದಿಯನ್ನು ರಕ್ಷಿಸುವ ಹೊಣೆ ಹೊತ್ತ ಭಾರತೀಯ ಸೈನಿಕರಿಗೆ ಮೊದಲ ಬಾರಿಗೆ ಹವಾಮಾನ ಕೂಡಾ ಅನುಕೂಲಕರವಾಗಿದೆ. ವಾಯುಸೇನೆ ಹೆಲಿಕಾಪ್ಟರ್ ಗಳ ನೆರವಿನಿಂದ ಪರಿಹಾರ ಕಾರ್ಯ ಆರಂಭಿಸಲಾಗಿದೆ.

ಐಟಿಬಿಪಿ ಡಿಜಿ ಅಜಯ್ ಛಡ್ಡಾ ಅವರು ಮಾತನಾಡಿ, '10 ಹೆಲಿಕಾಪ್ಟರ್ ಸದ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ರುದ್ರಪ್ರಯಾಗದ ರಸ್ತೆ ಸಂಪೂರ್ಣ ನಾಶವಾಗಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 500 ಜನರನ್ನು ರಕ್ಷಿಸಲಾಗಿದೆ. ಹವಾಮಾನ ಸಾಥ್ ನೀಡಿದರೆ ಶೀಘ್ರದಲ್ಲೇ ಹೆಚ್ಚು ಭಕ್ತಾದಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುವುದು' ಎಂದಿದ್ದಾರೆ.

ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಾರೆ.ಜಲ ಪ್ರಳಯದಿಂದ ತತ್ತರಿಸಿರುವ ಉತ್ತರಾಖಂಡ್ ರಾಜ್ಯಕ್ಕೆ ಸಾವಿರಾರು ಕೋಟಿ ಪರಿಹಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ವಿವಿಧ ರಾಜ್ಯಗಳಿಂದ ತೀರ್ಥಯಾತ್ರೆಗೆ ಬಂದಿರುವ ಭಕ್ತಾದಿಗಳ ಸ್ಥಿತಿ ಗತಿ ತಿಳಿಯಲು ಅನೇಕ ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯದವರಿಗೆ : 080 22253707
ತೆಹ್ರಿ: 01376 233433
ಚಮೋಲಿ : 01372 251437
ಉತ್ತರಕಾಶಿ: 01374 226161
ಭಾರತೀಯ ಸೇನೆ : 1800-180-5558 / 1800 -4190282 ಇನ್ನಷ್ಟು ಹೆಲ್ಪ್ ಲೈನ್ ಸಂಖ್ಯೆಗಳು ಮುಂದೆ ಇದೆ ನೋಡಿ:

ಸಂತ್ರಸ್ತರಿಗೆ ಸೇನೆ ಆಸರೆ

ಸಂತ್ರಸ್ತರಿಗೆ ಸೇನೆ ಆಸರೆ

ಹೇಮಕುಂಡ ಸಾಹಿಬ್-ಬದ್ರಿನಾಥ್-ಚಮೋಲಿ: 01372 251437,01372 253785, 94113 52136
ತೆಹ್ರಿಘರ್ ವಾಲ್: 01376 233433, 94120 76111
ಡೆಹ್ರಾಡೂನ್- ಹೃಷಿಕೇಶ : 01352 726066, 97603 16350, 94129 92363
ಪೌರಿ-ಘರ್ ವಾಲ್ : 01368 221840
ಅಲ್ಮೋರಾ: 05962 237874, 94113 78137
ಪಿಥೋಘರ್: 05964 228050, 94120 79945
ಹರಿದ್ವಾರ: 01334 223999, 98373 52202
ಬಾಗೇಶ್ವರ್: 05963 220197
ನೈನಿತಾಲ್: 05942 231179, 94567 14092
ಉಧಮ್ ಸಿಂಗ್ ನಗರ: 05944 250719, 94103 76808

ಇನ್ನಷ್ಟು ಹೆಲ್ಪ್ ಲೈನ್

ಇನ್ನಷ್ಟು ಹೆಲ್ಪ್ ಲೈನ್

ತೆಹ್ರಿ: 01376 233433
ಚಮೋಲಿ : 01372 251437
ಉತ್ತರಕಾಶಿ: 01374 226161/ 226126
ರುದ್ರಪ್ರಯಾಗ: 01732-1077
ಐಟಿಬಿಪಿ : 011-2436 2892 ಹಾಗೂ 99683 83478.

ಎಲ್ಲ ಬಗೆ ನೆರವು

ಎಲ್ಲ ಬಗೆ ನೆರವು

ತಾತ್ಕಾಲಿಕ ಆಹಾರ, ಊಟ ವ್ಯವಸ್ಥೆ ಎಲ್ಲವನ್ನು ಸೇನೆ ಸಮರ್ಥವಾಗಿ ನಿಭಾಯಿಸುತ್ತಿದೆ.

ಸರ್ಕಾರಿ ಕಟ್ಟಡ ಕುಸಿತ

ಸರ್ಕಾರಿ ಕಟ್ಟಡ ಕುಸಿತ

ಉತ್ತರಾಖಂಡ್ ಜಿಲ್ಲೆಯ ಶ್ರೀನಗರ ಜಿಲ್ಲೆಯಲ್ಲಿ ಗಂಗಾ ನದಿ ಆರ್ಭಟಕ್ಕೆ ಕುಸಿದಿರುವ ಸರ್ಕಾರಿ ಗೆಸ್ಟ್ ಹೌಸ್

ಯಮುನಾ ಪ್ರವಾಹ

ಯಮುನಾ ಪ್ರವಾಹ

ಇತ್ತ ನವದೆಹಲಿಯಲ್ಲಿ ಪ್ರವಾಹ ಭೀತಿ ಆವರಿಸಿದ್ದು, ಆಪಾಯದ ಮಟ್ಟ ಮೀರಿ ಯಮುನಾ ನದಿ ಹರಿಯುತ್ತಿದೆ.

ಎಲ್ಲವೂ ಕೊಚ್ಚಿ ಹೋಯ್ತು

ಎಲ್ಲವೂ ಕೊಚ್ಚಿ ಹೋಯ್ತು

ಉತ್ತರಾಖಂಡ್ : ಹೃಷಿಕೇಶದಲ್ಲಿ ಮನೆಮಠ ಎಲ್ಲವೂ ನೀರು ಪಾಲಾಗಿದೆ

ಹೇಮಕುಂಡ್

ಹೇಮಕುಂಡ್

ಹೇಮಕುಂಡ: ಬೆಟ್ಟದಲ್ಲಿ ಸಿಲುಕಿದ್ದ ಭಕ್ತಾದಿಗಳನ್ನು ರಕ್ಷಿಸುತ್ತಿರುವ ಭಾರತೀಯ ಸೇನೆ ಯೋಧರು

ಉತ್ತರಪ್ರದೇಶದ ದೃಶ್ಯ

ಉತ್ತರಪ್ರದೇಶದ ದೃಶ್ಯ

ಬಿಜ್ನೊರ್: ಸುರಕ್ಷಿತ ಸ್ಥಳಗಳಿಗೆ ಜನರನ್ನು ಸಾಗಿಸುವ ಚಿತ್ರ

ಪರಿಧಾಬಾದ್ ಚಿತ್ರ

ಪರಿಧಾಬಾದ್ ಚಿತ್ರ

ಫರಿದಾಬಾದ್: ಯಮುನಾ ನದಿಯಿಂದ ಉಂಟಾಗಿರುವ ಜಲಪ್ರಳಯದ ನಡುವೆ ಮಂಝಾವಲಿ ಗ್ರಾಮದಲ್ಲಿ ತಲೆ ಮೇಲೆ ಮಂಚ ಹೊತ್ತು ನಡೆದಿರುವ ವೃದ್ಧ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+