ದೇವೇಗೌಡರು 'ರಾಜ್'ಕೀಯಕ್ಕೆ ಯತ್ನಿಸಿದ್ದರಂತೆ!

ಆದರೆ ರಾಜಕೀಯದ ಬಗ್ಗೆ ಅದಾಗಲೇ ಚಿಕ್ಕಮನಸು ಮಾಡಿದ್ದ ವರನಟ, ದೊಡ್ಡಗೌಡರ ಒತ್ತಾಯಕ್ಕೆ ಮಣಿಯಲಿಲ್ಲ ಎಂಬುದು ಈಗ ಇತಿಹಾಸ. ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಡಾ. ಲೀಲಾವತಿ, ಬಿವಿ ರಾಧಾ ಸೇರಿದಂತೆ 13 ಹಿರಿಯ ಕಲಾವಿದರಿಗೆ ಡಿಎಸ್-ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ದೇವೇಗೌಡರು ಈ ವಿಷಯ ಹೊರಹಾಕಿದರು.
ನಟರಾಗಿ ಡಾ. ರಾಜ್ ಕುಮಾರ್ ಅವರು ತುಂಬಾ ಎತ್ತರಕ್ಕೆ ಬೆಳೆದವರು. ಅಂಥ ವ್ಯಕ್ತಿಯನ್ನು ರಾಜಕೀಯಕ್ಕೆ ಕರೆತರುವುದು ಸಮಂಯಸವಲ್ಲ' ಎಂದು ಆಗ ತಮಿಳಿನ ಖ್ಯಾತ ನಟರಾಗಿದ್ದ ಎಂಜಿ ರಾಮಚಂದ್ರನ್ ನನಗೆ ಕಿವಿಮಾತು ಹೇಳಿದರು. ಆದ್ದರಿಂದ ನಾನೂ ಆ ಪ್ರಯತ್ನವನ್ನು ಅಲ್ಲಿಗೇ ಬಿಟ್ಟೆ ಎಂದು ಗೌಡರು ಹೇಳಿದರು.
ಕಲಾವಿದರನ್ನು ಗೌರವಿಸುವುದು ಜತೆಗೆ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದು ಸರಕಾರದ ಕರ್ತವ್ಯ. ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಪಂಡರೀಭಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದ ವಿಷಯ ತಿಳಿದು ಸಹಾಯ ಮಾಡಿದ್ದನ್ನು ಗೌಡರು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.
ಗಿರಿಜಾ ಲೋಕೇಶರ ಔದಾರ್ಯ:
ಹಿರಿಯ ಕಲಾವಿದೆ ಬಿವಿ ರಾಧಾ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದು ಗಿರಿಜಾ ಲೋಕೇಶ್ ಅವರು ಪ್ರಶಸ್ತಿಯ ಭಾಗವಾಗಿ ತಮಗೆ ದೊರೆತ 10 ಸಾವಿರ ರೂ ನಗದನ್ನು ರಾಧಾ ಅವರಿಗೆ ನೀಡುವ ಮೂಲಕ ಮಾನವೀಯತೆ ತೋರಿದರು.












Click it and Unblock the Notifications