ಯಡಿಯೂರಪ್ಪ, ಮೋದಿ ಭೇಟಿಗೆ ನಾಗಪುರ ಫಿಕ್ಸ್

ಬೆಂಗಳೂರು, ಜೂನ್ 19: ಕೆಜೆಪಿ ಮತ್ತು ಬಿಜೆಪಿ ಒಂದಾಗಲಿದೆ ಎಂದು ಧನಂಜಯ ಕುಮಾರ್ ಸಾರ್ವಜನಿಕವಾಗಿ ಘೋಷಿಸಲು ಕಾರಣವಾದರೂ ಏನು. ಅದಕ್ಕೆ ಪೂರಕವಾಗಿರುವ ಬೆಳವಣಿಗೆಗಳಾದರೂ ಏನು ಎಂದು ಕೆದಕಿದಾಗ... ಧನಂಜಯ್ ಒಡ್ಡಿರುವ ಷರತ್ತು ಕಣ್ಣಿಗೆ ರಾಚುತ್ತದೆ. ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿದರೆ ಮಾತ್ರ ಕೆಜೆಪಿ ನಾಯಕ ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾಗುತ್ತಾರೆ ಎಂದು ಧನಂಜಯ್ ಹೇಳಿರುವುದು ಇಂಟರೆಸ್ಟಿಂಗ್ ಆಗಿದೆ.

ಬಿಜೆಪಿಗೆ ಮರಳುವ ವಿಷಯದಲ್ಲಿ ಯಡಿಯೂರಪ್ಪ ಆಗಲೇ ಬಹಳಷ್ಟು ಮುಂದುವರಿದಿದ್ದಾರೆ. ಅದೆಲ್ಲಾ ಒಂದು ಹಂತಕ್ಕೆ ಬಂದ ಮೇಲೆಯೇ ತಮ್ಮ ಶಿಷ್ಯ ಧನಂಜಯ್ ಮೂಲಕ ವಿಷಯ ಬಹಿರಂಗಪಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರು ಮುಂದಿನ ವಾರವೇ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಅದೂ ಆರೆಸ್ಸೆಸ್ ನಾಯಕರ ಸಮ್ಮುಖದಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಈ ಭೇಟಿ ಏರ್ಪಟ್ಟಿದೆ.

ನಾಗಪುರದಲ್ಲಿ ಯಡಿಯೂರಪ್ಪ, ಮೋದಿ ಭೇಟಿ :

ನಾಗಪುರದಲ್ಲಿ ಯಡಿಯೂರಪ್ಪ, ಮೋದಿ ಭೇಟಿ :

ಅದೂ ಆರೆಸ್ಸೆಸ್ ನಾಯಕರ ಸಮ್ಮುಖದಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಈ ಭೇಟಿ ಏರ್ಪಟ್ಟಿದೆ. ಆರೆಸ್ಸೆಸ್ ಜತೆ ನಾಲ್ಕು ದಶಕಗಳಿಂದಲೂ ನಿಕಟ ಸಂಪರ್ಕ ಹೊಂದಿದ್ದು ತಮ್ಮಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿ, ಪೋಷಿಸಿಕೊಂಡು ಬಂದಿದ್ದ ಯಡಿಯೂರಪ್ಪ ಆರ್‌ಎಸ್‌ಎಸ್ ಕೇಂದ್ರ ಕಚೇರಿ ನಾಗಪುರವನ್ನು ಆರಿಸಿಕೊಂಡಿರುವುದು ಗಮನಾರ್ಹವಾಗಿದೆ.

ಆರೆಸ್ಸೆಸಿನದೇ ಮೇಲುಗೈ

ಆರೆಸ್ಸೆಸಿನದೇ ಮೇಲುಗೈ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಚುನಾವಣಾ ಚುಕ್ಕಾಣಿ ಹಿಡಿಯುವಲ್ಲಿ ನಾಗಪುರದಲ್ಲಿನ ಆರೆಸ್ಸೆಸ್ ನಾಯಕರ ಕೊಡುಗೆ ಅಪಾರ ಎಂಬುದು ಯಡಿಯೂರಪ್ಪ, ಮೋದಿ ಸೇರಿದಂತೆ ಎಲ್ಲರಿಗೂ ತಿಳಿದ ವಿಷಯವೇ. ಈಗಂತೂ ಬಿಜೆಪಿ ರಾಜಕೀಯದಲ್ಲಿ ಆರೆಸ್ಸೆಸಿನದೇ ಮೇಲುಗೈ ಎಂಬುದು ನಿರ್ವಿವಾದ.

ಆರೆಸ್ಸೆಸ್ ಅಂಗಳದಲ್ಲೇ ತಮ್ಮ ಪುನರ್ಮಿಲನ

ಆರೆಸ್ಸೆಸ್ ಅಂಗಳದಲ್ಲೇ ತಮ್ಮ ಪುನರ್ಮಿಲನ

ಬಿಜೆಪಿಯಿಂದ ಹೊರಬಂದರೂ ಈಗಲೂ ಆರ್‌ಎಸ್‌ಎಸ್ ನಾಯಕರ ಜೊತೆ ಸುಮಧುರ ಬಾಂಧವ್ಯವನ್ನು ಯಡಿಯೂರಪ್ಪ ಹೊಂದಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಿರುವಾಗ ಆರೆಸ್ಸೆಸ್ ಅಂಗಳದಲ್ಲೇ ತಮ್ಮ ಪುನರ್ಮಿಲನ ನಡೆದುಹೋಗಲಿ ಎಂಬುದು ಯಡಿಯೂರಪ್ಪ ಆಶಯ. ರಾಷ್ಟ್ರೀಯ ಸ್ವಯಂಸೇವಕ ಸಂಘವು 1925 ರ ಸೆಪ್ಟೆಂಬರ್ 25ರ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರದಲ್ಲಿನ ಮೊಹಿತೇವಾಡ ಎಂಬಲ್ಲಿ ಸಂಘದ ಮೊದಲ ಶಾಖೆ ಶುಭಾರಂಭವಾಯಿತು.

ಮೋದಿ ಮಾತ್ರ ಯಡಿಯೂರಪ್ಪನನ್ನು ನಿಯಂತ್ರಿಸಬಲ್ಲರು

ಮೋದಿ ಮಾತ್ರ ಯಡಿಯೂರಪ್ಪನನ್ನು ನಿಯಂತ್ರಿಸಬಲ್ಲರು

ಹಠಮಾರಿ ಯಡಿಯೂರಪ್ಪ ನಮ್ಮ ನಿಯಂತ್ರಣಕ್ಕೆ ಬಗ್ಗುವವರಲ್ಲ. ಅವರನ್ನು ಕಟ್ಟಿಹಾಕುವಲ್ಲಿ ಮೋದಿ ಮಾತ್ರ ಯಶಸ್ವಿಯಾಗಬಲ್ಲರು ಎಂಬುದು ರಾಜ್ಯ ಬಿಜೆಪಿ ಮಂದಿಗೂ ಚೆನ್ನಾಗಿ ಮನದಟ್ಟಾಗಿದೆ. (ಯಡಿಯೂರಪ್ಪ ಮತ್ತು ಮೋದಿಗೆ ತುಂಬಾ ನಿಕಟವಾಗಿರುವ ಲೇಹರ್ ಸಿಂಗ್ ಅವರನ್ನು ಚಿತ್ರದಲ್ಲಿ ವಿಶೇಷವಾಗಿ ಗುರುತಿಸಬಹುದು)

ಮೋಹನ್ ಭಾಗವತ್ ಸಮ್ಮುಖದಲ್ಲೇ ಮುಖಾಮುಖಿ

ಮೋಹನ್ ಭಾಗವತ್ ಸಮ್ಮುಖದಲ್ಲೇ ಮುಖಾಮುಖಿ

ಹಾಗಾಗಿ ಯಡಿಯೂರಪ್ಪ+ಮೋದಿ ಸಂಧಾನಕ್ಕೆ ಸ್ವತಃ ಬಿಜೆಪಿ ಮಂದಿಯೂ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಸಮ್ಮುಖದಲ್ಲೇ ಈ ಇಬ್ಬರೂ ನಾಯಕರ ಭೇಟಿಗೆ ಸಮಯಾವಕಾಶ ನಿಗದಿಯಾಗಿದೆ ಎಂದು ಬಿಜೆಪಿ ಮೂಲಗಳೇ ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+