ಯಡಿಯೂರಪ್ಪ, ಮೋದಿ ಭೇಟಿಗೆ ನಾಗಪುರ ಫಿಕ್ಸ್
ಬೆಂಗಳೂರು, ಜೂನ್ 19: ಕೆಜೆಪಿ ಮತ್ತು ಬಿಜೆಪಿ ಒಂದಾಗಲಿದೆ ಎಂದು ಧನಂಜಯ ಕುಮಾರ್ ಸಾರ್ವಜನಿಕವಾಗಿ ಘೋಷಿಸಲು ಕಾರಣವಾದರೂ ಏನು. ಅದಕ್ಕೆ ಪೂರಕವಾಗಿರುವ ಬೆಳವಣಿಗೆಗಳಾದರೂ ಏನು ಎಂದು ಕೆದಕಿದಾಗ... ಧನಂಜಯ್ ಒಡ್ಡಿರುವ ಷರತ್ತು ಕಣ್ಣಿಗೆ ರಾಚುತ್ತದೆ. ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿದರೆ ಮಾತ್ರ ಕೆಜೆಪಿ ನಾಯಕ ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾಗುತ್ತಾರೆ ಎಂದು ಧನಂಜಯ್ ಹೇಳಿರುವುದು ಇಂಟರೆಸ್ಟಿಂಗ್ ಆಗಿದೆ.
ಬಿಜೆಪಿಗೆ ಮರಳುವ ವಿಷಯದಲ್ಲಿ ಯಡಿಯೂರಪ್ಪ ಆಗಲೇ ಬಹಳಷ್ಟು ಮುಂದುವರಿದಿದ್ದಾರೆ. ಅದೆಲ್ಲಾ ಒಂದು ಹಂತಕ್ಕೆ ಬಂದ ಮೇಲೆಯೇ ತಮ್ಮ ಶಿಷ್ಯ ಧನಂಜಯ್ ಮೂಲಕ ವಿಷಯ ಬಹಿರಂಗಪಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರು ಮುಂದಿನ ವಾರವೇ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಅದೂ ಆರೆಸ್ಸೆಸ್ ನಾಯಕರ ಸಮ್ಮುಖದಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಈ ಭೇಟಿ ಏರ್ಪಟ್ಟಿದೆ.

ನಾಗಪುರದಲ್ಲಿ ಯಡಿಯೂರಪ್ಪ, ಮೋದಿ ಭೇಟಿ :
ಅದೂ ಆರೆಸ್ಸೆಸ್ ನಾಯಕರ ಸಮ್ಮುಖದಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಈ ಭೇಟಿ ಏರ್ಪಟ್ಟಿದೆ. ಆರೆಸ್ಸೆಸ್ ಜತೆ ನಾಲ್ಕು ದಶಕಗಳಿಂದಲೂ ನಿಕಟ ಸಂಪರ್ಕ ಹೊಂದಿದ್ದು ತಮ್ಮಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿ, ಪೋಷಿಸಿಕೊಂಡು ಬಂದಿದ್ದ ಯಡಿಯೂರಪ್ಪ ಆರ್ಎಸ್ಎಸ್ ಕೇಂದ್ರ ಕಚೇರಿ ನಾಗಪುರವನ್ನು ಆರಿಸಿಕೊಂಡಿರುವುದು ಗಮನಾರ್ಹವಾಗಿದೆ.

ಆರೆಸ್ಸೆಸಿನದೇ ಮೇಲುಗೈ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಚುನಾವಣಾ ಚುಕ್ಕಾಣಿ ಹಿಡಿಯುವಲ್ಲಿ ನಾಗಪುರದಲ್ಲಿನ ಆರೆಸ್ಸೆಸ್ ನಾಯಕರ ಕೊಡುಗೆ ಅಪಾರ ಎಂಬುದು ಯಡಿಯೂರಪ್ಪ, ಮೋದಿ ಸೇರಿದಂತೆ ಎಲ್ಲರಿಗೂ ತಿಳಿದ ವಿಷಯವೇ. ಈಗಂತೂ ಬಿಜೆಪಿ ರಾಜಕೀಯದಲ್ಲಿ ಆರೆಸ್ಸೆಸಿನದೇ ಮೇಲುಗೈ ಎಂಬುದು ನಿರ್ವಿವಾದ.

ಆರೆಸ್ಸೆಸ್ ಅಂಗಳದಲ್ಲೇ ತಮ್ಮ ಪುನರ್ಮಿಲನ
ಬಿಜೆಪಿಯಿಂದ ಹೊರಬಂದರೂ ಈಗಲೂ ಆರ್ಎಸ್ಎಸ್ ನಾಯಕರ ಜೊತೆ ಸುಮಧುರ ಬಾಂಧವ್ಯವನ್ನು ಯಡಿಯೂರಪ್ಪ ಹೊಂದಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಿರುವಾಗ ಆರೆಸ್ಸೆಸ್ ಅಂಗಳದಲ್ಲೇ ತಮ್ಮ ಪುನರ್ಮಿಲನ ನಡೆದುಹೋಗಲಿ ಎಂಬುದು ಯಡಿಯೂರಪ್ಪ ಆಶಯ. ರಾಷ್ಟ್ರೀಯ ಸ್ವಯಂಸೇವಕ ಸಂಘವು 1925 ರ ಸೆಪ್ಟೆಂಬರ್ 25ರ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರದಲ್ಲಿನ ಮೊಹಿತೇವಾಡ ಎಂಬಲ್ಲಿ ಸಂಘದ ಮೊದಲ ಶಾಖೆ ಶುಭಾರಂಭವಾಯಿತು.

ಮೋದಿ ಮಾತ್ರ ಯಡಿಯೂರಪ್ಪನನ್ನು ನಿಯಂತ್ರಿಸಬಲ್ಲರು
ಹಠಮಾರಿ ಯಡಿಯೂರಪ್ಪ ನಮ್ಮ ನಿಯಂತ್ರಣಕ್ಕೆ ಬಗ್ಗುವವರಲ್ಲ. ಅವರನ್ನು ಕಟ್ಟಿಹಾಕುವಲ್ಲಿ ಮೋದಿ ಮಾತ್ರ ಯಶಸ್ವಿಯಾಗಬಲ್ಲರು ಎಂಬುದು ರಾಜ್ಯ ಬಿಜೆಪಿ ಮಂದಿಗೂ ಚೆನ್ನಾಗಿ ಮನದಟ್ಟಾಗಿದೆ. (ಯಡಿಯೂರಪ್ಪ ಮತ್ತು ಮೋದಿಗೆ ತುಂಬಾ ನಿಕಟವಾಗಿರುವ ಲೇಹರ್ ಸಿಂಗ್ ಅವರನ್ನು ಚಿತ್ರದಲ್ಲಿ ವಿಶೇಷವಾಗಿ ಗುರುತಿಸಬಹುದು)

ಮೋಹನ್ ಭಾಗವತ್ ಸಮ್ಮುಖದಲ್ಲೇ ಮುಖಾಮುಖಿ
ಹಾಗಾಗಿ ಯಡಿಯೂರಪ್ಪ+ಮೋದಿ ಸಂಧಾನಕ್ಕೆ ಸ್ವತಃ ಬಿಜೆಪಿ ಮಂದಿಯೂ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಸಮ್ಮುಖದಲ್ಲೇ ಈ ಇಬ್ಬರೂ ನಾಯಕರ ಭೇಟಿಗೆ ಸಮಯಾವಕಾಶ ನಿಗದಿಯಾಗಿದೆ ಎಂದು ಬಿಜೆಪಿ ಮೂಲಗಳೇ ತಿಳಿಸಿವೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications