ಹನಿಮೂನ್ ಆಗಿದ್ರೆ ಸಾಕು, ಮದ್ವೆ ಊರ್ಜಿತ!

ಮದುವೆಗೆ ಮುನ್ನ ಲಿವ್ ಇನ್ ಸಂಬಂಧ, ಸಂಭೋಗ, ಸಹಮತ ಸೆಕ್ಸ್ ಬಗ್ಗೆ ಇರುವ ಕಾನೂನು, ನಡೆದು ಬಂದಿರುವ ಕ್ರಮ ಎಲ್ಲವನ್ನು ಉಲ್ಟಾ ಪಲ್ಟಾ ಮಾಡುವಂಥ ಆದೇಶವನ್ನು ಮದ್ರಾಸ್ ಹೈಕೋರ್ಟ್ ಹೊರಡಿಸಿದೆ.
ಅವಿವಾಹಿತ ಪುರುಷನಿಗೆ 21 ವರ್ಷ ಹಾಗೂ ಅವಿವಾಹಿತ ಮಹಿಳೆಗೆ 18 ವರ್ಷ ವಯಸ್ಸಾಗಿದ್ದಾರೆ. ಸಂವಿಧಾನ ಪ್ರಕಾರ ಇಬ್ಬರು ಜೊತೆಯಾಗಲು ಯಾವುದೇ ಅಡ್ಡಿಯಿಲ್ಲ.
ಹೀಗೆ ಜೊತೆಯಲ್ಲಿರುವಾಗ ಇಬ್ಬರ ನಡುವೆ ಲೈಂಗಿಕ ಕ್ರಿಯೆ ನಡೆದರೆ ಆಗ ಇಬ್ಬರು ಒಂದು ರೀತಿ ಬಂಧನ(ಕೋರ್ಟ್ ಆದೇಶದಂತೆ committment)ಕ್ಕೆ ಒಳಗಾಗುತ್ತಾರೆ. ಮುಂದಿನ ಎಲ್ಲಾ ಜೀವನ ಬದಲಾವಣೆಗೆ ಇಬ್ಬರು ಹೊಣೆಯಾಗುತ್ತಾರೆ. ಇದು ಮದುವೆಯಾಗಿರುವ ಸಂಕೇತವಾಗುತ್ತದೆ ಹಾಗೂ ಇಂಥ ಸಂಬಂಧದಲ್ಲಿರುವವರನ್ನು ದಂಪತಿಗಳು ಎಂದು ಕರೆಯಬಹುದು ಎಂದು ಕೋರ್ಟ್ ಹೇಳಿದೆ.
ಮಂಗಳಸೂತ್ರ ಹಾಕುವುದು, ಸಪ್ತಪದಿ ತುಳಿಯುವುದು, ಹಾರ ಬದಲಾಯಿಸಿಕೊಳ್ಳುವುದು, ಉಂಗುರ ತೊಡಿಸುವುದು ಅಥವಾ ಮದುವೆ ನೋಂದಾಯಿಸುವುದು ಎಲ್ಲವು ಸಾಂಪ್ರದಾಯಿಕ ವಿಧಿವಿಧಾನವಾಗಿದೆ. ಇದು ಸಮಾಜದ ನಂಬುಗೆಯ ಒಂದು ಭಾಗ ಮಾತ್ರ. ಮೇಲ್ಕಂಡ ರೀತಿಯಲ್ಲಿ ಸಂಬಂಧ ಹೊಂದಿರುವ ದಂಪತಿಗಳನ್ನು ಪತಿ, ಪತ್ನಿ ಎಂದು ಪರಿಗಣಿಸಲು ಅಡ್ಡಿಯಿಲ್ಲ ಎಂದು ಕೋರ್ಟ್ ಹೇಳಿದೆ.
ಇಬ್ಬರ ನಡುವೆ ಸಂಭೋಗ, ಲೈಂಗಿಕ ಕ್ರಿಯೆ ನಡೆದಿರುವುದಕ್ಕೆ ಸಾಕ್ಷಿ ಒದಗಿಸಿ ತಮ್ಮ ಸಂಬಂಧವನ್ನು ಮದುವೆ ಎಂದು ಊರ್ಜಿತಗೊಳಿಸಿಕೊಳ್ಳಬಹುದು. ಸೂಕ್ತ ದಾಖಲೆಗಳಿದ್ದರೆ ಅಂಥ ಮಹಿಳೆ ಇದನ್ನು ಸರ್ಕಾರಿ ದಾಖಲೆಗಳ ಪ್ರಕಾರ ಆತನ ಪತ್ನಿ ಎಂದು ಘೋಷಿಸಿಕೊಳ್ಳಬಹುದು.
ಹಾಲಿ ಚಾಲ್ತಿಯಲ್ಲಿರುವ ಎಲ್ಲಾ ನಿಯಮಗಳ ಪ್ರಕಾರ ಲೈಂಗಿಕ ಸಂಪರ್ಕ ಹೊಂದಿದ ಮಹಿಳೆ ಕೂಡಾ ತನ್ನ ಮದುವೆ ಸ್ಥಿತಿ ಗತಿ ಬಗ್ಗೆ ಕಾನೂನಿನ ಪ್ರಕಾರ ಎಲ್ಲಾ ನಿಯಮಗಳಿಗೂ ಅರ್ಹರಾಗುತ್ತಾರೆ. ಇದೇ ನಿಯಮಗಳು ಮುಂದೆ ವಿಚ್ಛೇದನ ಪಡೆಯುವಾಗಲೂ ಅನ್ವಯಿಸುತ್ತದೆ. ಲೈಂಗಿಕ ಸಂಪರ್ಕ ಹೊಂದಿದ ಮಹಿಳೆ(ಕೋರ್ಟ್ ಪ್ರಕಾರ ಪತ್ನಿ) ಅನುಮತಿ ಇಲ್ಲದೆ ಮತ್ತೊಂದು ಮದುವೆಯಾಗಲು ಪತಿಗೆ ಕಾನೂನು ಅಡ್ಡಿಯಾಗುತ್ತದೆ.
ಈ ರೀತಿ ವಿಶಿಷ್ಟ ಅದೇಶ ಹೊರಡಿಸಿದವರು ಜಸ್ಟೀಸ್ ಸಿ.ಎಸ್ ಕರ್ನಾನ್ 2006ರ ಏಪ್ರಿಲ್ ನ ಕೋಯಮತ್ತೂರು ಕೌಟುಂಬಿಕ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಲ್ಲೇಖದಂತೆ ಈ ರೀತಿ ಆದೇಶ ನೀಡಿದೆ. ಸೂಕ್ತ ದಾಖಲೆ ಒದಗಿಸದ ಕಾರಣ ಪತಿ ತನ್ನ ಪತ್ನಿಗೆ ಜೀವನಾಂಶ ನೀಡುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಹೆಚ್ಚಿನ ಮಾಹಿತಿ, ಪ್ರತಿಕ್ರಿಯೆ
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications