ತೈಲ ಮಾಫಿಯಾದಿಂದ ಮೊಯ್ಲಿಗೆ ಕೊಲೆ ಬೆದರಿಕೆ!

ಇದನ್ನು ಸ್ವತಃ ವೀರಪ್ಪ ಮೊಯ್ಲಿ ಅವರೇ ಶುಕ್ರವಾರ ದೃಢಪಡಿಸಿದ್ದು, "ಯಾವುದೇ ತೈಲ ಲಾಬಿಗಳ ಒತ್ತಡಕ್ಕೆ ಮತ್ತು ಬೆದರಿಕೆಗಳಿಗೆ ಮಣಿಯುವುದಿಲ್ಲ. ತೈಲ ಆಮದು ನೀತಿಯನ್ನು ಬಿಗಿಗೊಳಿಸುವ ಕ್ರಮವನ್ನು ಕೇಂದ್ರ ಸರಕಾರ ಮುಂದುವರಿಸುವುದು. ಅಲ್ಲದೆ, ತೈಲ ಆಮದಿನಿಂದ ದೇಶದ ಹಣವೆಲ್ಲ ಹೊರಹೋಗುತ್ತಿದೆ. ಇದನ್ನು ತಡೆಯುವ ಜವಾಬ್ದಾರಿ ಸರಕಾರದ ಮೇಲಿದೆ" ಎಂದು ಅವರು ಉತ್ತರಿಸಿದ್ದಾರೆ.
"ಇಂಥ ಬೆದರಿಕೆಗಳು ಕೇಂದ್ರ ತೈಲ ಸಚಿವರಿಗೆ ಬಂದಿರುವುದು ಇದು ಮೊದಲೇನಲ್ಲ. ಹಿಂದೆ ಕೂಡ ತೈಲ ಸಚಿವರಿಗೆ ಕೊಲೆ ಬೆದರಿಕೆಗಳು ಬಂದಿವೆ. ಕೆಲ ತೈಲ ಲಾಬಿಗಳಿಗೆ ಆಮದು ತಡೆಯುವುದು ಬೇಕಾಗಿಲ್ಲ. ತೈಲ ಸಚಿವರು ಕೆಲ ಕಠಿಣ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿ ಅಡ್ಡಗಟ್ಟುತ್ತಲೇ ಬಂದಿವೆ. ಇವು ಬೆದರಿಕೆಗಳಷ್ಟೇ. ಇವಕ್ಕೆಲ್ಲ ಬೆದರುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
"ನಾನು ಅಸಹಾಯಕನಲ್ಲ. ಪುಕ್ಕಲ ಮಂತ್ರಿಯಾಗಿದ್ದರೆ ಮುಂದೆ ಹೆಜ್ಜೆ ಇಡುತ್ತಿರಲಿಲ್ಲ. ದೇಶದ ಹಿತಕ್ಕಾಗಿ ನಾನಿಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ರೀತಿ ಹೆದರಿಸುವುದರಿಂದ ನಾನು ನಿರ್ಧಾರ ತೆಗೆದುಕೊಳ್ಳುವುದರಿಂದ ತಡೆಯಬಹುದು ಎಂದಿದ್ದರೆ ಅದು ತಪ್ಪು. ತೈಲ ಆಮದು ದೇಶದ ಹಿತಕ್ಕೆ ಮಾರಕ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ನಮಗೆ ಸವಾಲು ಒಡ್ಡಿದೆ" ಎಂದು ಅವರು ನುಡಿದಿದ್ದಾರೆ.
ದೇಶದಲ್ಲಿಯೇ ನೈಸರ್ಗಿಕವಾಗಿ ತೈಲ ಉತ್ಪಾದಿಸುವ ಕೇಂದ್ರದ ನೀತಿಯನ್ನು ತೈಲವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ತೈಲ ಕಂಪನಿಗಳು ಪ್ರಬಲವಾಗಿ ವಿರೋಧಿಸಿವೆ. ಆದರೆ, ದೇಶವನ್ನು ಸ್ವಾವಲಂಬನೆಯತ್ತ ಒಯ್ಯಬೇಕೆಂದರೆ ಇಂಥ ಕಠಿಣ ಕ್ರಮ ಅಗತ್ಯ ಎಂದು ವೀರಪ್ಪ ಮೊಯ್ಲಿ ಪ್ರತಿವಾದಿಸಿದ್ದಾರೆ. ಆದರೆ, ಯಾರಿಂದ ಬೆದರಿಕೆ ಬರುತ್ತಿದೆ ಎಂಬ ಬಗ್ಗೆ ವಿವರ ನೀಡಿಲ್ಲ.
ದೇಶದ ತೈಲ ನೀತಿಯನ್ನು ರೂಪಿಸುತ್ತಿರುವವರು ತೈಲ ಮಂತ್ರಿಯಲ್ಲ, ಪ್ರಧಾನ ಮಂತ್ರಿಯಲ್ಲ, ಸೋನಿಯಾ ಗಾಂಧಿಯೂ ಅಲ್ಲ. ಆದರೆ, ದೇಶೀಯವಾಗಿ ತೈಲ ಉತ್ಪಾದಿಸಲು ಯತ್ನಿಸುತ್ತಿರುವ ರಿಲಯನ್ಸ್ ಕಂಪನಿಯವರು. ರಿಲಯನ್ಸ್ ಲಾಬಿಗೆ ಮಣಿದು, ತೈಲ ಆಮದು ಕಠಿಣಗೊಳಿಸುವಂಥ ನೀತಿಯನ್ನು ಕೇಂದ್ರ ರೂಪಿಸುತ್ತಿದೆ ಎಂದು ಕೂಡ ಆರೋಪ ಕೇಳಿಬಂದಿದೆ.
ವೀರಪ್ಪ ಮೊಯ್ಲಿ ಅವರು ತಮಗೆ ಕೊಲೆ ಬೆದರಿಕೆ ಬಂದಿದೆ ಎಂದು ನೀಡಿರುವ ಹೇಳಿಕೆಯನ್ನು ಎಡಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ವೀರಪ್ಪ ಮೊಯ್ಲಿ ಒಬ್ಬ 'ಫಸ್ಟ್ ಕ್ಲಾಸ್ ಸುಳ್ಳುಗಾರ' ಅವರು ಕೋರ್ಟಿಗೆ ಬೇಕಿದ್ದರೆ ಹೋಗಲಿ ಎಂದು ಸಿಪಿಐ ನಾಯಕ ಗುರುದಾಸ್ ದಾಸಗುಪ್ತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications