ಅಮೆರಿಕದ ವಲಸೆ ನೀತಿ, ಕಾಗ್ನಿಜೆಂಟ್ ಪ್ರಗತಿಗೆ ಕೊಕ್ಕೆ
ಬೆಂಗಳೂರು, ಜೂ.13: ಅಮೆರಿಕದ ಪ್ರಸ್ತಾವಿತ ಸುಧಾರಿತ ವಲಸೆ ನೀತಿ ಜಾರಿಗೆ ಬಂದರೆ ಕಾಗ್ನಿಜೆಂಟ್ ಸೇರಿದಂತೆ ಐಟಿ ಕಂಪನಿಗಳ ಪ್ರಗತಿ ಮಾರಕವಾಗಲಿದೆ ಎಂಬ ಸುದ್ದಿ ಬಂದಿದೆ. ಕಾಗ್ನಿಜೆಂಟ್ ಸಂಸ್ಥೆ ಅಮೆರಿಕದ ಮೂಲದ ಕಂಪನಿಯಾದರೂ ಭಾರತದಲ್ಲೂ ತನ್ನ ಮುಖ್ಯ ಕಾರ್ಯ ನಿರ್ವಹಣೆ ಹೊಂದಿದೆ.
ಇತ್ತೀಚೆಗೆ ಭಾರತದಲ್ಲಿ ಅತಿ ಹೆಚ್ಚು ಸಾಫ್ಟ್ ವೇರ್ ರಫ್ತುದಾರರ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿದ್ದ ಇನ್ಫೋಸಿಸ್ ಸಂಸ್ಥೆ ಹಿಂದಿಕ್ಕಿ ಮೇಲಕ್ಕೇರಿದ ಕಾಗ್ನಿಜೆಂಟ್ ಸಂಸ್ಥೆ ನಾಸ್ಡಾಕ್ ನಲ್ಲೂ ಇನ್ಫೋಸಿಸ್ ಗೆ ಹೊಡೆತ ನೀಡಿತ್ತ್ತು.
ಆದರೆ, ಜಾಗತಿಕ ಈಕ್ವಿಟಿ ವಿಶ್ಲೇಷಕ ಸಂಸ್ಥೆ ಜೆಪಿ ಮಾರ್ಗನ್ ವರದಿ ಪ್ರಕಾರ ಕಾಗ್ನಿಜೆಂಟ್ ಏಳಿಗೆಗೆ ಯುಎಸ್ ವಲಸೆ ನೀತಿ ಭಾರಿ ಪ್ರತಿರೋಧ ಒಡ್ಡಲಿದೆ ಎಂದು ಎಚ್ಚರಿಸಲಿದೆ.ಅಮೆರಿಕದಲ್ಲಿ ಆರ್ಥಿಕ ಸುಧಾರಣೆ ಅಳವಡಿಕೆ ನಂತರ ಕಾಗ್ನಿಜೆಂಟ್ ಸಂಸ್ಥೆಯ ಪ್ರತಿ ಷೇರಿಗೆ ಸಿಗುವ ಆದಾಯ(EPS) ಶೇ 25ರಷ್ಟು ಕುಸಿಯಲಿದೆ ಇದರಿಂದ ಸಂಸ್ಥೆಯ ಲಾಭಕ್ಕೆ ಕುತ್ತುಂಟಾಗಲಿದೆ.

ಅಮೆರಿಕದಲ್ಲಿ ಕಾಗ್ನಿಜೆಂಟ್ ಆದಾಯ ಹಾಗೂ ಕಾರ್ಯ ನಿರ್ವಹಣೆ ವೆಚ್ಚ ಆಧಾರಿಸಿ ಜೆಪಿ ಮಾರ್ಗನ್ ಈ ವರದಿ ನೀಡಿದೆ. ಕಾಗ್ನಿಜೆಂಟ್ ಜೊತೆಗೆ ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆಗಳ ಸ್ಥಿತಿಗತಿಗಳನ್ನು ತುಲನೆ ಮಾಡಲಾಗಿದೆ.
ಸದ್ಯಕ್ಕೆ ಅಮೆರಿಕದ ಸೆನೆಟ್ ನಲ್ಲಿ ಚರ್ಚೆಗೊಳಗಾಗುತ್ತಿರುವ ವಲಸೆ ನೀತಿಗೆ ಸುಮಾರು 100ಕ್ಕೂ ತಿದ್ದುಪಡಿ ಅವಶ್ಯವಿದೆ ಎಂದು ಸೆನೆಟ್ ಬಯಸಿದೆ.
ಕಾಗ್ನಿಜೆಂಟ್ ಸಂಸ್ಥೆಯ ಕಾರ್ಯ ನಿರ್ವಹಣಾ ವೆಚ್ಚ ಅಂತರ ಶೇ 19-20 ರಷ್ಟಿರುವುದರಿಂದ ಸಂಸ್ಥೆ ಲಾಭದತ್ತ ಮುಖ ಮಾಡಿದೆ. ಭಾರತದಲ್ಲಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದರೂ ಹೆಚ್ಚಿನ ಅದಾಯಕ್ಕೆ ಯುಎಸ್ ಆರ್ಥಿಕತೆಯನ್ನು ಕಾಗ್ನಿಜೆಂಟ್ ನಂಬಿದೆ. ಸುಮಾರು ಶೇ 80 ರಷ್ಟು ಆದಾಯ ಅಮೆರಿಕದಲ್ಲೇ ಉತ್ಪನ್ನವಾಗುತ್ತಿದೆ. ಹೀಗಾಗಿ, ವಲಸೆ ನೀತಿ, ಯುಎಸ್ ವಿದೇಶಾಂಗ ನೀತಿ ಬದಲಾವಣೆ ಕಂಡರೆ ಕಾಗ್ನಿಜೆಂಟ್ ಗೆ ಕಷ್ಟ ಕಷ್ಟ.
ಕಾಗ್ನಿಜೆಂಟ್ ನಂತರದ ಸ್ಥಾನದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತೊಂದರೆ ಅನುಭವಿಸಲಿದ್ದು, ಟಿಸಿಎಸ್ ನ ಇಪಿಎಸ್ ದರ ಶೇ 18ರಷ್ಟಿದೆ. ನಂತರ ಇನ್ಫೋಸಿಸ್ ಇಪಿಎಸ್ ದರ ಶೇ 15 ರಷ್ಟಿದ್ದು, ಇರುವುದರಲ್ಲಿ ಎಚ್ ಸಿಎಲ್ ಟೆಕ್ನಾಲಜೀಸ್ ಸ್ವಲ್ಪಮಟ್ಟಿಗೆ ಸೇಫ್ ಆಗಿದೆ.
ಸ್ಥಳೀಯರಿಗೆ ಉದ್ಯೋಗ, ಸ್ಥಳೀಯ ಸಂಸ್ಥೆಗಳಿಗೆ ಸಬ್ಸಿಡಿ, ಆಫ್ ಶೋರ್ ಐಟಿ ಸರ್ವೀಸ್ ಸಂಸ್ಥೆಗಳಿಗೆ ಕಡಿವಾಣ, ವೀಸಾ ದರ ಹೆಚ್ಚಳ ಮುಂತಾದ ವಿಷಯಗಳನ್ನು ವಲಸೆ ನೀತಿ ಹೊಂದಿದೆ.
ಪರಿಣಾಮ, ಕ್ಲೈಂಟ್ ಸ್ಥಳಕ್ಕೆ (ಅಮೆರಿಕ) ಭಾರತದಿಂದ ಉದ್ಯೋಗಿಗಳನ್ನು ಸಲೀಸಾಗಿ ಕಳಿಸಲು ಸಾಧ್ಯವಾಗುವುದಿಲ್ಲ. ಸ್ಥಳೀಯರನ್ನೇ ಆಯ್ಕೆ ಮಾಡಬೇಕಾಗುತ್ತದೆ. ಸ್ಥಳೀಯರು ಕಡಿಮೆ ಮೊತ್ತಕ್ಕೆ ದುಡಿಯುವುದಂತೂ ಇಲ್ಲ. ಇದರಿಂದ ಸಂಸ್ಥೆಗಳು ಯೋಜನೆ ಮೇಲೆ ಹಾಕಿದ ಮೊತ್ತ ದುಪ್ಪಟ್ಟಾಗುತ್ತದೆ. ಒಟ್ಟಾರೆ, ಅಮೆರಿಕದ ವಲಸೆ ನೀತಿ, ವೀಸಾ ನಿಯಮಗಳು ಕಾಗ್ನಿಜೆಂಟ್ ಸಂಸ್ಥೆಗಷ್ಟೇ ಅಲ್ಲ ಹೊರಗುತ್ತಿಗೆ ನಂಬಿಕೊಂಡಿರುವ ಭಾರತದ ಪ್ರಮುಖ ಸಂಸ್ಥೆಗಳಿಗೆ ಸರಿಯಾದ ಪಾಠ ಕಲಿಸಲಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications