Get Updates
Get notified of breaking news, exclusive insights, and must-see stories!

ರಾಜೀನಾಮೆ ಬೇಕಾ, ಬೇಡಿಕೆ ಈಡೇರಿಸಿ : ಶ್ರೀನಿವಾಸನ್

ಮುಂಬೈ, ಜೂ.1: ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸ್ ಅವರ ಪದಚ್ಯುತಿಗೆ ಮಾಧ್ಯಮಗಳು ಕಾಯುತ್ತಿರುವ ಹೊತ್ತಿನಲ್ಲೇ ಬಿಸಿಸಿಐನ ಇಬ್ಬರು ಪ್ರಮುಖ ಅಧಿಕಾರಿಗಳು ಶ್ರೀನಿವಾಸನ್ ಅವರ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಈ ನಡುವೆ ಬಿಸಿಸಿಐ ತುರ್ತು ಸಭೆ ಭಾನುವಾರ(ಜೂ.2) ನಯಲಿದೆ. ಎನ್.ಶ್ರೀನಿವಾಸನ್ ಹೊಸದಾಗಿ ಬೇಡಿಕೆ ಇಟ್ಟಿದ್ದಾರಂತೆ..ಏನದು ಮುಂದೆ ಓದಿ...

ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಹಾಗೂ ಖಜಾಂಚಿ ಅಜಯ್ ಟಿರ್ಕೆ ಅವರು ಶುಕ್ರವಾರ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಬಿಸಿಸಿಐ ಕಾರ್ಯಕಾರಿಣಿ ಸಮಿತಿಯ ತುರ್ತು ಸಭೆ ಜೂ. 8ರಂದು ನಡೆಯಲು ನಿಗದಿಯಾಗಿತ್ತು. ಆದರೆ, ಇಬ್ಬರು ಹಿರಿಯ ಅಧಿಕಾರಿಗಳ ರಾಜೀನಾಮೆ ಹಿನ್ನೆಲೆಯಲ್ಲಿ ತುರ್ತು ಸಭೆ ಮುಂಚಿತವಾಗಿನಡೆಸುವ ಸಾಧ್ಯತೆ ಇದೆ ಎಂದು ಬಿಸಿಸಿಐನ ಸಹ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.

ಬಿಸಿಸಿಐ ಕಾರ್ಯಕಾರಿಣಿ ಸಮಿತಿಯ ತುರ್ತು ಸಭೆ ಕರೆಯದಿದ್ದರೆ ರಾಜೀನಾಮೆ ನೀಡುವುದಾಗಿ ಕಾರ್ಯದರ್ಶಿ ಸಂಜಯ್ ಜಗದಾಳೆ ಹಾಗೂ ಖಜಾಂಚಿ ಶಿರ್ಕೆ ಹಾಗೂ ಸಹ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಶ್ರೀನಿವಾಸನ್ ಬೆದರಿಕೆ ಒಡ್ಡಿದ್ದನ್ನು ಇಲ್ಲಿ ಸ್ಮರಿಸಬಹುದು.

IPL Spot-fixing: BCCI secretary Jagdale, treasurer Shirke resign

ಇನ್ನಷ್ಟು ಅಪ್ಡೇಡ್ ಗಳು ಕಾಲಕಾಲಕ್ಕೆ ಸಿಗಲಿದೆ ಓದುತ್ತಿರಿ

ಸಮಯ 2.50: ಟಿವಿ ಮಾಧ್ಯಮಗಳ ವರದಿ ಪ್ರಕಾರ ಬಿಸಿಸಿಐ ಸದಸ್ಯರ ಒತ್ತಡಕ್ಕೆ ಮಣಿದಿರುವ ಶ್ರೀನಿವಾಸನ್ ಅವರು ರಾಜೀನಾಮೆ ನೀಡುತ್ತೇನೆ ಆದರೆ ನನ್ನ ಮೂರು ಬೇಡಿಕೆ ಈಡೇರಿಸಿ ಎಂದಿದ್ದಾರಂತೆ.
* ಐಸಿಸಿ ಸಮಿತಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ
* ಹುದ್ದೆಯಿಂದ ಕೆಳಗಿಳಿಯುವ ಮುನ್ನ ತಾನು ಸೂಚಿಸಿದವರೇ ಖಜಾಂಚಿ ಹಾಗೂ ಕಾರ್ಯದರ್ಶಿ ಆಗಬೇಕು
* ಬೋರ್ಡ್ ಸದಸ್ಯರಲ್ಲದವರು ಬಿಸಿಸಿಐ ಅಧ್ಯಕ್ಷರಾಗಲೇ ಬಾರದು

ಸಮಯ 1.15: ಬಿಸಿಸಿಐ ಬಿಗ್ ಬಾಸ್ ಹುದ್ದೆಗೆ ಶಶಾಂಕ್ ಮನೋಹರ್ ಕೇಳಿ ಬರುತ್ತಿದ್ದು, ಸಿಎನ್ ಎನ್ ಐಬಿಎನ್ ವಾಹಿನಿ ವರದಿ ಪ್ರಕಾರ ಸ್ಪಾಟ್ ಫಿಕ್ಸಿಂಗ್ ತನಿಖೆ ಮುಗಿಯುವವರೆಗೂ ಶ್ರೀನಿವಾಸನ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ನಂತರ ಮತ್ತೆ ಅಧಿಕಾರ ವಹಿಸಿಕೊಳ್ಳುತ್ತಾರಂತೆ.


ಸಮಯ 12.30:
ಟೈಮ್ಸ್ ನೌ ಪ್ರಕಾರ ಬಿಸಿಸಿಸಿ ತುರ್ತು ಸಭೆಯನ್ನು ಚೆನ್ನೈನಲ್ಲಿ ಭಾನುವಾರ (ಜೂ.2) ಮಧ್ಯಾಹ್ನ 11 ಗಂಟೆಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ದಕ್ಷಿಣ ವಲಯ ಶಿವಲಾಲ್ ಯಾದವ್ ಅವರು ಹೇಳಿದ್ದಾರೆ. ಇದು ಶ್ರೀನಿವಾಸನ್ ಅವರನ್ನು ಹೊರದಬ್ಬಲು ನಡೆಸಲಿರುವ ಕೊನೆ ಪ್ರಯತ್ನ ಎನ್ನಲಾಗಿದೆ. ಆದರೆ, 31 ಜನ ಸದಸ್ಯರಲ್ಲಿ ಶ್ರೀನಿವಾಸನ್ ಔಟ್ ಮಾಡಲು ಬಹುಮತ ಇನ್ನೂ ಸಿಕ್ಕಿಲ್ಲ.

ಸಮಯ 12.15: ಬುಕ್ಕಿಗಳ ಸಂಪರ್ಕ ಹೊಂದಿರುವ ಸಿಎಸ್ ಕೆ ಬಾಸ್ ಗುರುನಾಥ್ ಮೇಯಪ್ಪನ್ ಅವರಿಗೆ ಐಸಿಸಿ ಅಧಿಕಾರಿ ಟೆರಿ ಎಂಬುವರು ಏಪ್ರಿಲ್ ನಲ್ಲಿ ಕರೆ ಮಾಡಿ ಎಚ್ಚರಿಕೆ ನೀಡಿದ್ದರು ಎಂಬ ಮಾಹಿತಿಯನ್ನು ಮುಂಬೈ ಪೊಲೀಸರು ಹೊರ ಹಾಕಿದ್ದಾರೆ.

ಸಮಯ 10.45 : ಬಿಸಿಸಿಐ ಉಪಾಧ್ಯಕ್ಷರಾದ ಅರುಣ್ ಜೇಟ್ಲಿ, ಶಿವಲಾಲ್ ಯಾದವ್, ಚಿತ್ರಾಕ್ ಮಿತ್ರ, ನಿರಂಜನ್ ಶಾ ಹಾಗೂ ಸುಧೀರ್ ದಬಿರ್ ಅವರು ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕು ಅಥವಾ ನಮ್ಮ ರಾಜೀನಾಮೆ ಸ್ವೀಕರಿಸಬೇಕು ಎಂದು ಎಚ್ಚರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+