ಪೈ, ಶಾ ವಿರುದ್ಧ ತಿರುಗಿಬಿದ್ದ ಎಸ್ಸಾರ್ ಪಾಟೀಲ್

65 ವರ್ಷ ವಯಸ್ಸಿನ ಮಂತ್ರಿಯನ್ನು ಐಟಿ ಬಿಟಿ ಸಚಿವರಾಗಿ ಪಡೆದು ನಾವು ಏನು ಪ್ರಗತಿ ಸಾಧಿಸಲು ಸಾಧ್ಯ ಎಂದು ಈ ಇಬ್ಬರು ಗಣ್ಯರು ಪ್ರಶ್ನೆ ಎತ್ತಿದ್ದರು. ಇದಕ್ಕೆ ಎಸ್ ಆರ್ ಪಾಟೀಲ್ ಅವರು ಖಡಕ್ ಉತ್ತರ ನೀಡಿದ್ದಾರೆ.
ಎಸ್ಸೆಂ ಕೃಷ್ಣ ಅವರು 75 ವರ್ಷದ ಇಳಿ ವಯಸ್ಸಿನಲ್ಲಿ ಬೆಂಗಳೂರನ್ನು ಐಟಿ ರಾಜಧಾನಿ ದರ್ಜೆಗೆ ಏರಿಸ ಬಹುದಾದರೆ ನಾನು 65 ವರ್ಷ ವಯಸ್ಸಿನವ ನಾನು ಏಕೆ ಐಟಿ ಕ್ಷೇತ್ರ ಉದ್ಧಾರ ಮಾಡಲು ಸಾಧ್ಯವಿಲ್ಲ. ವಯಸ್ಸಿಗೂ ಹುದ್ದೆಗೂ ತಾಳೆ ಹಾಕಿ ತೂಗುವ ಪ್ರವೃತ್ತಿ ಬಿಡಿ ನನಗೂ ಐಟಿ ಕ್ಷೇತ್ರದ ಪರಿಚಯವಿದೆ ಎಂದು ಐಟಿ ಬಿಟಿ ಸಚಿವ ಎಸ್ ಆರ್ ಪಾಟೀಲ್ ಅವರು ತರಾಟೆ ತೆಗೆದುಕೊಂಡಿದ್ದಾರೆ.
ಈ ಮುಂಚೆ ಬಿಜೆಪಿ ಸರ್ಕಾರದಲ್ಲಿದ್ದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಐಟಿ ಸಚಿವರಾಗಿದ್ದಾಗ ಈ ಪ್ರಶ್ನೆ ಏಕೆ ಎತ್ತಲಿಲ್ಲ. ಕೈಗಾರಿಕೆ, ಸಕ್ಕರೆ ಉದ್ಯಮ, ಕಾರ್ಪೋರೇಟ್ ಬ್ಯಾಂಕ್ ಅಲ್ಲದೆ ಸರ್ಕಾರಿ ಕಾಲೇಜು, ಶಾಲೆಗಳಿಗೆ ಸಹಾಯ ಹಸ್ತ ಚಾಚಿ ನೆರವಾಗಿದ್ದೇನೆ. ಬೇಕಾದರೆ ಪರಿಶೀಲಿಸಬಹುದು.
ಚಾಲೆಂಜ್ : 2020ರೊಳಗೆ ರಾಜ್ಯದ ಸಾಫ್ಟ್ ವೇರ್ ರಫ್ತು ಪ್ರಮಾಣವನ್ನು 4,00,000 ಕೋಟಿ ರು ಗೆ ಏರಿಸುವ ಗುರಿ ಹೊಂದಿದ್ದೇನೆ. ಸಿದ್ದರಾಮಯ್ಯ ಅವರು ನನ್ನ ಮೇಲೆ ನಂಬಿಕೆ ಇಟ್ಟು ಈ ಖಾತೆ ನೀಡಿದ್ದಾರೆ. ನನ್ನ ಉತ್ಸಾಹಕ್ಕೆ ಭಂಗ ತರಬೇಡಿ ಎಂದು ಪಾಟೀಲ್ ಹೇಳಿದ್ದಾರೆ. ಸದ್ಯಕ್ಕೆ ರಾಜ್ಯದ ಸಾಫ್ಟ್ ವೇರ್ ರಫ್ತು ಪ್ರಮಾಣ 1,35,000 ಕೋಟಿ ರು ನಷ್ಟಿದೆ.
ಬ್ರ್ಯಾಂಡ್ ಬೆಂಗಳೂರು: ಬೆಂಗಳೂರು ಕೇಂದ್ರಿಕೃತ ಐಟಿ -ಬಿಟಿ ಉದ್ಯಮವನ್ನು ಎರಡನೇ ಹಾಗೂ ಮೂರನೇ ಸ್ತರದ ನಗರಗಳಿಗೆ ಕೊಂಡೊಯ್ಯುವುದು ನನ್ನ ಗುರಿ. ಸಾಮಾನ್ಯ ಜನರ ಜೊತೆ ಐಟಿ ಸಂಪರ್ಕ ಸಾಧಿಸಲು ಯತ್ನಿಸುತ್ತೇನೆ.
ಸಾಮಾಜಿಕ ಜಾಲ ತಾಣಗಳಲ್ಲಿ ಎಸ್ ಆರ್ ಪಾಟೀಲ್ vs ಪೈ, ಶಾ ವಾರ್ ಬಗ್ಗೆ ಚರ್ಚೆ ನಡೆದಿದೆ. ಜೊತೆಗೆ ಬಿಪ್ಯಾಕ್ ಎಂಬ ಸಂಘಟನೆ ಮುಖಂಡರಾದ ಪೈ ಹಾಗೂ ಶಾ ಅವರು ಬೆಂಬಲಿಸಿದ ಕೃಷ್ಣಭೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಅವರು ಐಟಿ ಬಿಟಿ ಸಚಿವರಾಗಬೇಕಿತ್ತೆ? ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಲಾಗಿದೆ.
The 3 should meet over a cup of coffee. After all a lot can happen over a cup of coffee j.mp/1aDh7tR @kiranshaw @mdpai05 @oneindia
— BG Mahesh (@bgmahesh) May 30, 2013
Pai or Kiran Majumdar have no business to question credentials of SR Patil citing his age. They forgot they were propped up by 71 yr Old SMK
— Suresh En (@surnell) May 30, 2013
"Let them comment if I under perform. How can these two,claiming 2 have all the knowledge, reach a conclusion within a day?" #SRPatil #Ktaka
— Sudheendra Budya (@HiSudheendra) May 30, 2013
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications