ಬಿಸಿಸಿಐ ಹುದ್ದೆ: ಶ್ರೀನಿವಾಸನ್ ಇರ್ಬೇಕಾ? ಹೋಗ್ಬೇಕಾ?

ಶ್ರೀನಿವಾಸನ್ ಅವರ ಅಳಿಯ ಸಿಎಸ್ ಕೆ ತಂಡದ ಗುರುನಾಥ್ ಮೇಯಪ್ಪನ್ ಅವರು ಆರೋಪಿಯಾದ ಮೇಲಂತೂ ಟಿವಿ ಮಾಧ್ಯಮಗಳಿಗೆ ಶ್ರೀನಿವಾಸನ್ ಅವರನ್ನು ಕೆಳಗಿಳಿಸುವ ಆಗ್ರಹಪೂರ್ವಕ ಸುದ್ದಿಗಳು ಅಹರ್ನಿಶಿ ಓಡುತ್ತಿವೆ. ಇದೇ ನಿಟ್ಟಿನಲ್ಲಿ ನಮ್ಮ ಓದುಗರ ಅಪೇಕ್ಷೆಯಂತೆ ಒನ್ ಇಂಡಿಯಾ ಸಂಸ್ಥೆ ಕೂಡಾ ಸಮೀಕ್ಷೆ ನಡೆಸಿ ಫಲಿತಾಂಶ ಪಡೆದಿದೆ.
ಕಳೆದ ಭಾನುವಾರ ಕೋಲ್ಕತ್ತಾದಲ್ಲಿ ಮುಂಬೈ ಇಂಡಿಯನ್ಸ್ ಕೈಗೆ ಐಪಿಎಲ್ 2013 ಟ್ರೋಫಿ ಇತ್ತ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರು ನಂತರ ಬಿಸಿಸಿಐ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ನಂತರ ಸುದ್ದಿಗೋಷ್ಠಿ ನಡೆಸಿ ನನ್ನ ಅಳಿಯನಿಗೂ ಚೆನ್ನೈ ತಂಡಕ್ಕೂ ಸಂಬಂಧವಿಲ್ಲ. ನನ್ನ ಅಳಿಯನ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ನನ್ನ ರಾಜೀನಾಮೆಗೆ ಯಾರೂ ಆಗ್ರಹಿಸಿಲ್ಲ ಎಂದಿದ್ದರು.
ಆದರೆ, ಶ್ರೀನಿವಾಸನ್ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಇಳಿಸಲು 3/4ನೇ ಭಾಗದಷ್ಟು ಸದಸ್ಯರು ಅವರ ವಿರುದ್ಧ ಮತ ಹಾಕಬೇಕು. ಅದು ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಅಂದರೆ ಸುಮಾರು 31 ಸದಸ್ಯರಿರುವ ಬೋರ್ಡ್ ನಲ್ಲಿ 24 ಸದಸ್ಯರು ಶ್ರೀನಿವಾಸನ್ ವಿರುದ್ಧ ಮತ ಹಾಕಬೇಕಾಗುತ್ತದೆ. ಆದರೆ, ಶ್ರೀನಿವಾಸನ್ ಅವರ ರಾಜೀನಾಮೆ ಬಗ್ಗೆ, ಚೆನ್ನೈ ತಂಡ ಮಾನ್ಯತೆ ರದ್ದುಗೊಳಿಸುವ ಬಗ್ಗೆ ಬಿಸಿಸಿಐ ಆತುರವಾಗಿ ನಿರ್ಧಾರ ಕೈಗೊಳ್ಳಲು ತಯಾರಿಲ್ಲ.
ಸದ್ಯಕ್ಕೆ ಶ್ರೀನಿವಾಸನ್ ವಿರುದ್ಧ ಅರುಣ್ ಜೇಟ್ಲಿ ಜೊತೆಗೆ ಕೆಲವು ಸದಸ್ಯರು ಮಾತನಾಡಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರು ಕೂಡಾ ರಾಜೀನಾಮೆ ಇತ್ತರೆ ಒಳ್ಳೆಯದು ಎಂದಿದ್ದಾರೆ. ಆದರೆ, ಶ್ರೀನಿವಾಸ್ ಗೆ ಸದಸ್ಯರ ಬೆಂಬಲ ಸಿಕ್ಕಿದೆ. ಆದರೆ, ಜನಬಲ ಸಿಕ್ಕಿಲ್ಲ.
ಒನ್ ಇಂಡಿಯಾ ಕನ್ನಡ ಓದುಗರು ಎನ್ ಶ್ರೀನಿವಾಸನ್ ಅವರು ತಕ್ಷಣವೇ ಕುರ್ಚಿ ಬಿಡಲಿ ಎಂದು ಫರ್ಮಾನು ಹೊರಡಿಸಿದ್ದರೆ, ಒನ್ ಇಂಡಿಯಾ ತಮಿಳು ಓದುಗರು 'ಶ್ರೀನಿ ಮಾಮ' ಇನ್ನೂ ಇರಲಿ, ತನಿಖೆ ಅದಮೇಲೆ ಸತ್ಯ ಗೊತ್ತಾಗುತ್ತೆ ಎಂದಿದ್ದಾರೆ. ಒನ್ ಇಂಡಿಯಾ ಉಳಿದ ವೆಬ್ ತಾಣಗಳಲ್ಲೂ ಶ್ರೀನಿವಾಸನ್ ರಾಜೀನಾಮೆಗೆ ಆಗ್ರಹಿಸಿವೆ. ಒನ್ ಇಂಡಿಯಾ ಓದುಗರ ಅಭಿಮತ ಇಂತಿದೆ:
ಒನ್ ಒಂಡಿಯಾ ತಮಿಳು ಓದುಗರ ಅಭಿಮತ
ಶ್ರೀನಿವಾಸನ್ ಇರ್ಬೇಕು : 4,873
ಶ್ರೀನಿವಾಸನ್ ವಿರುದ್ಧ: 3,968
ಒನ್ ಇಂಡಿಯಾ ಇಂಗ್ಲೀಷ್
ಶ್ರೀನಿವಾಸನ್ ಪರ : 189
ವಿರುದ್ಧ: 463
ಒನ್ ಇಂಡಿಯಾ ಕನ್ನಡ
ಶ್ರೀನಿವಾಸನ್ ಇರ್ಬೇಕು : 246
ವಿರುದ್ಧ: 3221
ದಟ್ಸ್ ಕ್ರಿಕೆಟ್
ಶ್ರೀನಿವಾಸನ್ ಪರ : 51
ವಿರುದ್ಧ: 123
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications