ಮೋದಿಗೆ ಪರಮಾಧಿಕಾರ ಕೊಟ್ರೆ ಬಿಎಸ್ವೈ ಬಿಜೆಪಿಗೆ
ರಾಜ್ಯದಲ್ಲಿ ಬಿಜೆಪಿ ಗೆದ್ದಿದ್ದರೆ ನನಗೆ ಅಚ್ಚರಿಯಾಗುತ್ತಿತ್ತು ಎಂದು ಬ್ಲಾಗಿನಲ್ಲಿ ಹೇಳಿಕೊಂಡಿದ್ದ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ವಿರುದ್ಧ ಕಿಡಿಕಾರಿ ಪತ್ರ ಬರೆದಿದ್ದ ವಿಧಾನಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಖಜಾಂಚಿಯಾಗಿದ್ದ ಲೆಹರ್ ಸಿಂಗ್ ಅವರನ್ನು 17.05.2013 ರಂದು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಎಲ್ ಕೆ ಅಡ್ವಾಣಿ ನಡವಳಿಕೆ ಹಾಗೂ ಮನೋಭಾವವನ್ನೇ ಪ್ರಶ್ನಿಸಿದ್ದ ಲೆಹರ್ ಸಿಂಗ್, ಈ ಹಿಂದೆ ಕೂಡಾ ಮೋದಿ ಹಾಗೂ ಯಡಿಯೂರಪ್ಪ ಪರ ಮಾತುಗಳನ್ನಾಡಿ, ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು.
ಸದ್ಯದಲ್ಲೇ ಏಳು ರಾಜ್ಯಗಳ ರಾಜಧಾನಿಗಳಿಗೆ ಭೇಟಿ ನೀಡಿ ಅಡ್ವಾಣಿ ಅವರ ವಿರುದ್ಧ ಡಂಗುರ ಹೊಡೆಯುವ ಕಾರ್ಯಕ್ರಮ ಹಾಕಿಕೊಂಡಿದ್ದೇನೆ ಎಂದು ಲೆಹರ್ ಸಿಂಗ್ ಹೇಳಿಕೆ ಕೊಟ್ಟಿದ್ದರು. ಈ ಮಧ್ಯೆ ಔಟ್ ಲುಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಲೆಹರ್ ಸಿಂಗ್ ಮತ್ತೆ ಮೋದಿ ಮತ್ತು ಯಡಿಯೂರಪ್ಪ ಮೇಲೆ ಒಲವು ತೋರಿದ್ದಾರೆ. ಸಂದರ್ಶನದ ಆಯ್ದ ಭಾಗ ಸ್ಲೈಡಿನಲ್ಲಿ.....

ಲೆಹರ್ ಸಿಂಗ್ ಸಂದರ್ಶನ
ಪ್ರ: ಹಿರಿಯ ನಾಯಕ ಆಡ್ವಾಣಿ ವಿರುದ್ದ ನಿಮ್ಮ ಸಿಟ್ಟಿಗೆ ಪ್ರಮುಖ ಕಾರಣ?
ಲೆಹರ್ ಸಿಂಗ್ : ಆಡ್ವಾಣಿಜಿಯವರ ಬಳಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದೆ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದರೆ ಕಾಂಗ್ರೆಸ್ಸಿನಲ್ಲಿ ಇದೇ ಸಂಪ್ರದಾಯವಿದೆ. ಬಿಜೆಪಿ ನನ್ನನ್ನು ಉಚ್ಚಾಟಿಸಿರಬಹುದು. ಆದರೆ ಬಿಜೆಪಿಯ ತತ್ವ ಮತ್ತು ಸಿದ್ದಾಂತಕ್ಕೆ ನಾನು ಈಗಲೂ ತಲೆಬಾಗುತ್ತೇನೆ.

ಲೆಹರ್ ಸಿಂಗ್ ಸಂದರ್ಶನ
ಪ್ರ : ಆಡ್ವಾಣಿ ಮೇಲೆ ಮಾತ್ರ ನಿಮಗೆ ಕೋಪವೇ ಅಥವಾ ಪಕ್ಷದ ಇನ್ನಿತರರ ಮೇಲೆ ಇದೆಯೇ?
ಲೆಹರ್ ಸಿಂಗ್ : ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕಾರ್ಯ ವೈಖರಿಯ ಮೇಲೆ ನನಗೆ ಬಹಳ ಅಸಮಾಧಾನವಿದೆ. ಇವರು ಸೋನಿಯಾ ಗಾಂಧಿ ಜೊತೆ ಸಂಧಾನಕ್ಕೆ ಹೋಗಿದ್ದು ಏಕೆ? ಬಳ್ಳಾರಿ ರೆಡ್ಡಿಗಳನ್ನು ಬೆಳೆಸಿದ ಪರಿ ಪಕ್ಷಕ್ಕೆ ಮುಜುಗರ ತಂದಿಲ್ಲವೇ? ರೆಡ್ಡಿಗಳು ಹಗರಣದಲ್ಲಿ ಸಿಲುಕುತ್ತಿದ್ದಂತೆಯೇ ಇವರು ಸೋನಿಯಾ ಜೊತೆ ಸಂಧಾನಕ್ಕೆ ಮುಂದಾಗಿದ್ದನ್ನು ಗಮನಿಸಿದರೆ ರೆಡ್ಡಿಗಳ ವಿಚಾರದಲ್ಲಿ ಇವರ ಪಾತ್ರವೇನು ಎನ್ನುವ ಪ್ರಶ್ನೆ ಉಧ್ಭವಿಸುವುದಿಲ್ಲವೇ?

ಲೆಹರ್ ಸಿಂಗ್ ಸಂದರ್ಶನ
ಪ್ರ: ಪಕ್ಷ ನರೇಂದ್ರ ಮೋದಿಗೆ ಮತ್ತಷ್ಟು ಶಕ್ತಿ ನೀಡಿದರೆ ನಿಮ್ಮ ಪರಮಾಪ್ತರಾದ ಕೆಜೆಪಿ ಸಂಸ್ಥಾಪಕ ಯಡಿಯೂರಪ್ಪ ಮತ್ತೆ ಬಿಜೆಪಿ ಮರಳುವರೇ?
ಲೆಹರ್ ಸಿಂಗ್ : ಕೆಲವೇ ಕೆಲವು ಗಂಟೆಯಲ್ಲಿ ಯಡಿಯೂರಪ್ಪ ಬಿಜೆಪಿಗೆ ಮರಳುತ್ತಾರೆ. ಇದರ ಬಗ್ಗೆ ಸಂಶಯವೇ ಬೇಡ. ನರೇಂದ್ರ ಮೋದಿ ಬಿಜೆಪಿಯನ್ನು ಮುನ್ನಡೆಸುವಂತಾದರೆ ಯಡಿಯೂರಪ್ಪ ಖಂಡಿತಾ ತನ್ನ ಮಾತೃ ಪಕ್ಷಕ್ಕೆ ಮರಳುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗಿರುವ ದೌರ್ಬಲ್ಯವೇನೆಂದರೆ ದೆಹಲಿಯಲ್ಲಿರುವ ಪಕ್ಷದ ಯಾವುದೇ ಮುಖಂಡರು ಮಾಸ್ ನಾಯಕರಲ್ಲ.

ಲೆಹರ್ ಸಿಂಗ್ ಸಂದರ್ಶನ
ಪ್ರ: ನೀವು ಆಡ್ವಾಣಿಗೆ ಬರದ ಪತ್ರದಲ್ಲಿ ಭ್ರಷ್ಟಾಚಾರದ ಬಗ್ಗೆ ಜಾಣ ಕುರುಡುತನ ತೋರಿದ್ದೀರಿ ಎಂದು ಹೇಳಿದ್ದೀರಿ. ಈ ಹೇಳಿಕೆಯನ್ನು ಹೇಗೆ ಸಮರ್ಧಿಸಿಕೊಳ್ಳುತ್ತೀರಾ?
ಲೆಹರ್ ಸಿಂಗ್: ಭ್ರಷ್ಟಾಚಾರದ ವಿಚಾರಕ್ಕೆ ಬಂದಾಗ ಬಿಜೆಪಿ ಬೇರೆ ಪಕ್ಷಕ್ಕೆ ಹೊರತಾಗಿಲ್ಲ ಎನ್ನುವುದು ನೋವಿನ ವಿಚಾರ. ನಮ್ಮ ರಾಜ್ಯದ ಕೆಲವು ನಾಯಕರನ್ನು ದೆಹಲಿ ಮಟ್ಟದಲ್ಲಿ ಅತ್ಯಂತ ಕೀಳಾಗಿ ನೋಡಿಕೊಳ್ಳಲಾಯಿತು. ಮಾಧ್ಯಮದವರು ಅವರನ್ನು ಎಷ್ಟೇ ಅವಮಾನಿಸಿದರೂ ಪಕ್ಷದ ಹಿರಿಯರು ತಲೆಕೆಡಿಸಿಕೊಂಡಿಲ್ಲ. ಅವರಿಗೆ ಬೇಕಾದ ವ್ಯಕ್ತಿಗಳು ಎಷ್ಟೇ ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ಅವರನ್ನು ಬೆಳೆಸುವ ಕೆಲಸವನ್ನು ಪಕ್ಷ ಮಾಡಿತು.

ಲೆಹರ್ ಸಿಂಗ್ ಸಂದರ್ಶನ
ಪ್ರ: ನಿಮ್ಮ ಟಾರ್ಗೆಟ್ ಆಡ್ವಾಣಿ ಮೇಲೆ ಮಾತ್ರವೇಕೆ? ರಾಜನಾಥ್ ಸಿಂಗ್, RSS ಬಗ್ಗೆ ನೀವು ಚಕಾರವೆತ್ತುತ್ತಿಲ್ಲ?
ಲೆಹರ್ ಸಿಂಗ್: ರಾಜನಾಥ್ ಸಿಂಗ್, ಜೇಟ್ಲಿ, RSS ಬಗ್ಗೆ ಮಾತಾಡಿ ಏನೂ ಪ್ರಯೋಜನವಿಲ್ಲ. ಈಗಾಗಲೇ ನಾನು ಹೇಳಿದಂತೆ ದೆಹಲಿಯ ನಾಯಕರಿಗೆ ಮಾಸ್ ಟಚ್ ಇಲ್ಲ. ಅರುಣ್ ಜೇಟ್ಲಿಗೆ ಜನಸಂಪರ್ಕವೆನ್ನುವುದೇ ಇಲ್ಲ. ನರೇಂದ್ರ ಮೋದಿ, ವಸುಂಧರಾ ರಾಜೆ, ಶಿವರಾಜ್ ಸಿಂಗ್, ರಮಣ್ ಸಿಂಗ್ ಮುಂತಾದವರು ಆಯಾಯ ರಾಜ್ಯದಲ್ಲಿ ಮಾಸ್ ಲೀಡರ್ ಗಳು. ನಿಜವಾದ ನಾಯಕರು ಇರುವುದು ರಾಜ್ಯದಲ್ಲಿ. ಮೋದಿಗೆ ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಇದೆ ಎನ್ನುವುದುನ್ನು ಪಕ್ಷ ಅರಿತುಕೊಳ್ಳಬೇಕು, ಕ್ಷುಲ್ಲಕ ಜಗಳದಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications