ಐಗೇಟ್ ನಿಂದ ಹೊರಬಿದ್ದಿದ್ದು ಫಣೀಶ್ ಗೆ ವರದಾನ?
ಕ್ಯಾಲಿಫೋರ್ನಿಯಾ, ಮೇ.22: ಐಗೇಟ್ ಕಂಪನಿಯ ಸಿಇಒ ಫಣೀಶ್ ಮೂರ್ತಿ ಅವರನ್ನು ಮತ್ತೆ ಕೆಲಸದಿಂದ ತೆಗೆದುಹಾಕಲಾಗಿದೆ. ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಫಣೀಶ್ ಮೂರ್ತಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತನ್ನದು ತಪ್ಪಾಯ್ತು ಎಂದು ವರದಿಗಾರರ ಮುಂದೆ ಒಪ್ಪಿಕೊಂಡಿದಾರೆ. ಆದರೆ, ಐಗೇಟ್ ನಿಂದ ಹೊರ ಬಿದ್ದಿದ್ದು ಫಣೀಶ್ ಜೇಬು ಭರ್ಜರಿಯಾಗಿ ತುಂಬಿಸಿದೆ ಎಂಬ ಸುದ್ದಿಯೂ ಇದೆ.
2002ರಲ್ಲಿ ಇನ್ಫೋಸಿಸ್ ಉದ್ಯೋಗಿಯಾಗಿದ್ದಾಗ Reka Maximovitch ಎಂಬುವರು ಫಣೀಶ್ ಮೂರ್ತಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರೆಸಿದ್ದರು. ಈ ಕಾನೂನು ತೊಡಕು ಪರಿಹರಿಸಿಕೊಳ್ಳಲು ಇನ್ಫೋಸಿಸ್ ಗೆ 3 ಮಿಲಿಯನ್ ಡಾಲರ್ ಖರ್ಚಾಗಿತ್ತು. ಫಣೀಶ್ ಗೆ ಇನ್ಫೋಸಿಸ್ ಕೆಲಸ ಹೋಯಿತು.
ಆದರೆ,ಈ ಬಾರಿ ಫಣೀಶ್ ಅವರು ಮುಂದಾಲೋಚನೆ ಮಾಡಿ ಐಗೇಟ್ ಸಂಸ್ಥೆಯಲ್ಲಿದ್ದ ತಮ್ಮ 1,50,000 ಷೇರುಗಳನ್ನು ಮಾರಾಟಮಾಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ನಾಸ್ಡಾಕ್ ವರದಿಯನ್ನು ಉಲ್ಲೇಖಿಸಿ ಟೈಮ್ ಆಫ್ ಇಂಡಿಯಾ ನೀಡಿರುವ ವರದಿ ಪ್ರಕಾರ ಮೂರ್ತಿ ಅವರು ಮಾರ್ಚ್ 6 ರಂದು 104,459 ಷೇರುಗಳನ್ನು $18.88 ದರದಂತೆ ಮಾರಾಟ ಮಾಡಿ 1.97 ಮಿಲಿಯನ್ ಡಾಲರ್ ಜೇಬಿಗಿಳಿಸಿಕೊಂಡಿದ್ದಾರೆ. ಒಂದು ತಿಂಗಳ ನಂತರ ಏಪ್ರಿಲ್ 19 ರಂದು ಮೂರ್ತಿ ಮತ್ತೊಮ್ಮೆ 40,000 ಷೇರುಗಳನ್ನು 17.1 ಡಾಲರ್ ದರದಂತೆ ಮಾರುವ ಮೂಲಕ 684,000 ಡಾಲರ್ ಗಳಿಸಿದ್ದಾರೆ.
ಐಗೇಟ್ ಸಂಸ್ಥೆ ಜೀವ ತುಂಬಿದ ಫಣೀಶ್ ಮೂರ್ತಿ ಅವರು ಪಟ್ನಿ ಕಂಪ್ಯೂಟರ್ಸ್ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ಫೋಸಿಸ್ ನ ಭಾರಿ ತಲೆಗಳ ನಡುವೆ ಫಣೀಶ್ ಮೂರ್ತಿ ಅತ್ಯಂತ ಚಾಣಾಕ್ಷ ಎಂದು ಇಂದಿಗೂ ಸಮಕಾಲೀನರು ಹೇಳುತ್ತಾರೆ. ಅದರಂತೆ, ಐಗೇಟ್ ನಲ್ಲಿ ಏನೋ ಸಂಭವಿಸುವ ಸೂಚನೆ ಸಿಕ್ಕಿದ್ದರಿಂದಲೆ ಕಳೆದ ಎರಡು ತಿಂಗಳಲ್ಲಿ ಫಣೀಶ್ ಅವರು ಷೇರುಗಳನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ನ್ಯಾಸಾಕಾಂ ಸ್ವಾಗತ: ಐಗೇಟ್ ನಿಂದ ಫಣೀಶ್ ಅವರಿಗೆ ಗೇಟ್ ಪಾಸ್ ನೀಡಿರುವುದನ್ನು ನ್ಯಾಸ್ ಕಾಂ ಚೇರ್ಮನ್ ಕೃಷ್ಣಕುಮಾರ್ ನಟರಾಜನ್ ಸ್ವಾಗತಿಸಿದ್ದಾರೆ. ಭಾರತದ ಐಟಿ ಜಗತ್ತಿನ ಮೇಲೆ ಇದು ನೇರವಾಗಿ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಈ ನಡುವೆ ಇನ್ಫೋಸಿಸ್ ನ ಮಾಜಿ ಸಹದ್ಯೋಗಿ ಮೋಹನ್ ದಾಸ್ ಪೈ ಅವರು ಪ್ರತಿಕ್ರಿಯಿಸಿ, ಫಣೀಶ್ ಅವರು ಈ ಮುಂಚಿನ ಪ್ರಕರಣದಿಂದ ಪಾಠ ಕಲಿಯಬೇಕಾಗಿತ್ತು. ಆದರೆ, ಅವರು ಮತ್ತೆ ಅದೇ ತಪ್ಪು ಎಸಗಿದ್ದಾರೆ. ಶಿಕ್ಷೆ ಸ್ವಾಗತಾರ್ಹ ಇದು ಬೇರೆ ಐಟಿ ಉದ್ಯಮಿಗಳಿಗೆ ಪಾಠವಾಗಲಿದೆ ಎಂದಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications