ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ನೂತನ ಸಚಿವರ ಸಂಕ್ಷಿಪ್ತ ವ್ಯಕ್ತಿ ಚಿತ್ರಣ

By Mahesh
|
Google Oneindia Kannada News

ಬೆಂಗಳೂರು, ಮೇ. 19 : ಕರ್ನಾಟಕದ ಪಾಲಿಗೆ 2013 ರ ಈ ವಿಧಾನಸಭಾ ಚುನಾವಣೆ ಅವೀಸ್ಮರಣೀಯ. ಏಕೆಂದರೆ ಹಲವು ವರ್ಷಗಳ ನಂತರ ಪಕ್ಷವೊಂದು ಸ್ವಂತ ಬಲದಿಂದ ಅಧಿಕಾರಕ್ಕೇರುತ್ತಿದೆ. ಕರ್ನಾಟಕ ವಿಧಾನಸಭಾ ಕ್ಷೇತ್ರದ ಒಟ್ಟು 224 ಸ್ಥಾನಗಳಲ್ಲಿ ಬರೋಬ್ಬರಿ 122 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಬಹುಮತ ಸಾಬೀತುಪಡಿಸಿದೆ. ಹಿಂದಿನ ಸರಕಾರದಲ್ಲಿ ಹಲವಾರು ಹಗರಣಗಳನ್ನು ನೋಡಿರುವ ರಾಜ್ಯದ ಜನತೆ ಇಂದಿನ ಸರಕಾರದಲ್ಲಿ ಅದು ಮರುಕಳಿಸದಿರಲಿ ಎಂದು ಬಯಸುತ್ತಿದೆ. ಜೊತೆಗೆ ನಮ್ಮ ಮಂತ್ರಿಗಳು ಎಂಥವರು, ಸರಕಾರವನ್ನು ಪರಿಣಾಮಕಾರಿಯಾಗಿ ನಡೆಸುತ್ತಾರಾ? ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಾರಾ? ಕೇವಲ ರಾಜಕೀಯ ಮಾಡದೆ ಜನಕಲ್ಯಾಣಕ್ಕೆ ಒತ್ತು ನೀಡುತ್ತಾರಾ ಎಂಬುದನ್ನು ತಿಳಿಯಲು ಕಾತರದಿಂದಿದ್ದಾರೆ. ನೂತನ ಸಚಿವರ ಹಿನ್ನೆಲೆ ಏನು, ಯಾರ್ಯಾರು ಎಲ್ಲಿಯವರೆಗೆ ಓದಿದ್ದಾರೆ, ಎಷ್ಟು ಬಾರಿ ಕ್ಷೇತ್ರದಲ್ಲಿ ಗೆದ್ದುಬಂದಿದ್ದಾರೆ, ಯಾರ್ಯಾರಿಗೆ ಯಾವ ಖಾತೆ ಎಂಬ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಸುಮಾರು 10 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ವಲಸೆ ಬಂದವರಿಗೇ ಮಣೆ ಹಾಕಿ, ಮೂಲ ಕಾಂಗ್ರೆಸಿಗರನ್ನು ಮುಲೆಗುಂಪು ಮಾಡಲಾಗುತ್ತಿದೆ ಎಂದು ಎಲ್ಲೆಡೆ ಪ್ರತಿಭಟನೆ ನಡೆದಿದೆ. ಕಳಂಕರಹಿತರಿಗೆ ಖಾತೆ ನೀಡುವುದಿಲ್ಲ ಎಂಬ ಮಾತಿಗೆ ಸಿದ್ದರಾಮಯ್ಯ ಅವರು ಬದ್ಧರಾಗಿದ್ದಾರೆ ಎಂದುಕೊಂಡರೂ ಭ್ರಷ್ಟಾಚಾರ, ಗಣಿಗಾರಿಕೆ ಆರೋಪ ಹೊತ್ತಿರುವ ಬಾಬುರಾವ್ ಚಿಂಚನಸೂರ್, ಸಂತೋಷ್ ಲಾಡ್ ಅವರನ್ನು, ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಸ್ಪೀಕರ್ ಆಗುವ ಕಾಗೋಡು ತಿಮ್ಮಪ್ಪ ಅವರ ಮೇಲೂ ಚೆಕ್ ಬೌನ್ಸ್ ಪ್ರಕರಣಗಳಿದೆ.
ಎಲ್ಲದರ ನಡುವೆ ಸಿದ್ದರಾಮಯ್ಯ ಅವರ ಆಡಳಿತ ಸುಗಮಗೊಳಿಸುವ ಹೊಣೆ ಹೊತ್ತಿರುವ ಸಚಿವರ ಸಂಕ್ಷಿಪ್ತ ಪರಿಚಯ ಇಲ್ಲಿದೆ...

ಶಾಮನೂರು ಶಿವಶಂಕರಪ್ಪ

ಶಾಮನೂರು ಶಿವಶಂಕರಪ್ಪ

ಕ್ಷೇತ್ರ : ದಾವಣಗೆರೆ ದಕ್ಷಿಣ
ವಯಸ್ಸು: 82
ಜನನ: ದಾವಣಗೆರೆ, 1931 ಜೂನ್ 16. ಕಲ್ಲಪ್ಪ- ಸಾವಿತ್ರಮ್ಮ ದಂಪತಿ ಪುತ್ರ.
ಕುಟುಂಬ: ಪತ್ನಿ ಪಾರ್ವತಮ್ಮ ನಿಧನರಾಗಿದ್ದಾರೆ. ಮೂವರು ಪುತ್ರರಿದ್ದಾರೆ.
ಜಾತಿ: ಲಿಂಗಾಯತ
* ಇಂಟರ್ ಮೀಡಿಯೇಟ್ ವರೆಗೆ ವ್ಯಾಸಂಗ
* 1969ರಲ್ಲಿ ರಾಜಕೀಯ ಪ್ರವೇಶ. ನಗರಸಭಾ ಸದಸ್ಯರಾಗಿ ಆಯ್ಕೆ. 1972ರಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿಯಾಗಿ ನೇಮಕ.
* 1971-73ರವರೆಗೆ ದಾವಣಗೆರೆ ನಗರಸಭೆ ಅಧ್ಯಕ್ಷ.
* 1978-80ರವರೆಗೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ. ಈಗ ಕೆಪಿಸಿಸಿ ಖಜಾಂಚಿ.
* 1998 ರಿಂದ 99ರವರೆಗೆ ಲೋಕಸಭಾ ಸದಸ್ಯ. 1994-1998, 2004-2008, 2008-13ರ ಅವಧಿಯಲ್ಲಿ ಶಾಸಕ
* 2013ರಲ್ಲಿ ನಡೆದ ಚುನಾವಣೆಯಲ್ಲಿ ಮರು ಆಯ್ಕೆ.
* ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ
* ಖಾತೆ: ತೋಟಗಾರಿಕೆ

ಹನುಮಂತಗೌಡ ಕೃಷ್ಣಗೌಡ ಪಾಟೀಲ

ಹನುಮಂತಗೌಡ ಕೃಷ್ಣಗೌಡ ಪಾಟೀಲ

ಕ್ಷೇತ್ರ : ಗದಗ
ವಯಸ್ಸು: 60
ಜಾತಿ : ಲಿಂಗಾಯತ
ವಿದ್ಯೆ: ಬಿಎಸ್ಸಿ ಎಲ್ ಎಲ್ ಬಿ (ಸ್ಪೆಷಲ್).
ಕುಟುಂಬ: ಪತ್ನಿ ಹೇಮಾ. ಮಕ್ಕಳು- ಕೃಷ್ಣಗೌಡ, ಲಕ್ಷ್ಮಿ ಮತ್ತು ರಾಜೇಶ್ವರಿ.
* 1984ರಿಂದ 2008ರ ವರೆಗೆ (ಪಶ್ಚಿಮ ಪದವೀಧರ ಕ್ಷೇತ್ರ) MLC.
* 1993ರ ಜನವರಿಯಿಂದ 1994ರ ಡಿಸೆಂಬರ್ ವರೆಗೆ ವೀರಪ್ಪ ಮೊಯಿಲಿ ಸರ್ಕಾರದಲ್ಲಿ ಜವಳಿ ಖಾತೆ ರಾಜ್ಯ ಸಚಿವ.
* 1994ರಿಂದ 1999ರ ವರೆಗೆ ಹಾಗೂ 2006 ರಿಂದ 2008ರ ವರೆಗೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ.
* 1999 ರಿಂದ 2003ರ ವರೆಗೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆ, ಕೃಷಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ
* ಕೆ.ಎಚ್.ಪಾಟೀಲ ಪ್ರತಿಷ್ಠಾನ ಮತ್ತು ರೂರಲ್ ಮೆಡಿಕಲ್ ಸೊಸೈಟಿ ಮೂಲಕ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಿದ್ದಾರೆ.
* ಖಾತೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಕೃಷ್ಣ ಭೈರೇಗೌಡ

ಕೃಷ್ಣ ಭೈರೇಗೌಡ

ಕ್ಷೇತ್ರ : ಬೆಂಗಳೂರು ನಗರ (ಬ್ಯಾಟರಾಯನಪುರ)
ಜನನ: 4 ಏಪ್ರಿಲ್ 1973, ಗರುಡಪಾಳ್ಯ, ಕೋಲಾರ ಜಿಲ್ಲೆ
ಶಿಕ್ಷಣ : ಎಂ.ಎ (ಅಂತರರಾಷ್ಟ್ರೀಯ ವಿಚಾರಗಳು)
ಜಾತಿ : ಒಕ್ಕಲಿಗ
* ಮಾಜಿ ಸಚಿವ ದಿವಂಗತ ಸಿ.ಬೈರೇಗೌಡರ ಪುತ್ರರಾದ ಕೃಷ್ಣ ಬೈರೇಗೌಡ 4ನೇ ಬಾರಿಗೆ ವಿಧಾನಸಭೆಗೆ ಆಯ್ಕೆ.
ಕುಟುಂಬ: ಪತ್ನಿ: ಮೀನಾಕ್ಷಿ ಶೇಷಾದ್ರಿ.
* ತಂದೆ ನಿಧನದ ನಂತರ 2003ರಲ್ಲಿ ನಡೆದ ಉಪ ಚುನಾವಣೆಯಲ್ಲಿ ವೇಮಗಲ್ ಕ್ಷೇತ್ರದಿಂದ ಆಯ್ಕೆ. 2004ರಲ್ಲಿ ಪುನರಾಯ್ಕೆ
* 2008ರಲ್ಲಿ ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಕೃಷ್ಣ ಬೈರೇಗೌಡ ಜಯಶಾಲಿಯಾದರು.
* ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. 2009ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ವಿರುದ್ಧ ಸೋತಿದ್ದರು.

ರಾಮಲಿಂಗಾರೆಡ್ಡಿ

ರಾಮಲಿಂಗಾರೆಡ್ಡಿ

ಕ್ಷೇತ್ರ : ಬೆಂಗಳೂರು ನಗರ (ಬಿ.ಟಿ.ಎಂ.ಲೇಔಟ್)
ಜನನ : 12 ಜೂನ್ 1953, ಶೆಟ್ಟಿಹಳ್ಳಿ, ಆನೇಕಲ್ ತಾಲ್ಲೂಕು
ಶಿಕ್ಷಣ : ಬಿಎಸ್ಸಿ
ಜಾತಿ : ಒಕ್ಕಲಿಗ (ರೆಡ್ಡಿ)
* 1989 ರಿಂದ ಒಟ್ಟು 6 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
* 1983ರಲ್ಲಿ ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿ ಆಯ್ಕೆ
* 1989, 1994, 1999 ಹಾಗೂ 2004ರವರೆಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ.
* ಕ್ಷೇತ್ರ ಪುನರ್ ವಿಂಗಡಣೆ ನಂತರ ಬಿ.ಟಿ.ಎಂ.ಲೇಔಟ್ ಕ್ಷೇತ್ರದಿಂದ 2008 ಹಾಗೂ 2013ರಲ್ಲಿ ಆಯ್ಕೆಯಾಗಿದ್ದಾರೆ.
* ಎಂ. ವೀರಪ್ಪ ಮೊಯಿಲಿ ಅವರ ಸಚಿವ ಸಂಪುಟದಲ್ಲಿ ಹಣಕಾಸು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾಗಿದ್ದರು.
* ಕೃಷ್ಣ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ, ಧರ್ಮಸಿಂಗ್ ಸರ್ಕಾರದಲ್ಲಿ ಪ್ರೌಢಶಿಕ್ಷಣ ಸಚಿವರಾಗಿದ್ದರು.
ಪ್ರಸ್ತುತ ಖಾತೆ: ಸಾರಿಗೆ

ದಿನೇಶ ಗುಂಡೂರಾವ್

ದಿನೇಶ ಗುಂಡೂರಾವ್

ಜಿಲ್ಲೆ : ಬೆಂಗಳೂರು ನಗರ (ಗಾಂಧಿನಗರ)

ಜನ್ಮ ದಿನಾಂಕ : 9 ಅಕ್ಟೋಬರ್ 1969
ಜನ್ಮಸ್ಥಳ : ಸಾತನೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಶಿಕ್ಷಣ : ಬಿ.ಇ
ಜಾತಿ : ಬ್ರಾಹ್ಮಣ

ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಪುತ್ರರಾದ ದಿನೇಶ್ ಗುಂಡೂರಾವ್, ಎಂಜಿನಿಯರಿಂಗ್ ಪದವೀಧರ. ಮುಸ್ಲಿಂ ಸಮುದಾಯದ ತಬಸ್ಸುಮ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ದಿನೇಶ್, ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಸಿದ್ದಾರೆ. 1999ರಲ್ಲಿ ಪ್ರಥಮ ಬಾರಿಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಇವರು, ಸತತವಾಗಿ 2004, 2008 ಹಾಗೂ 2013ರ ಚುನಾವಣೆಗಳಲ್ಲಿ ಪುನರಾಯ್ಕೆಯಾಗಿದ್ದಾರೆ.

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

ಕ್ಷೇತ್ರ : ಯಮಕನಮರಡಿ ಮೀಸಲು (ಎಸ್ ಟಿ)
ಜಾತಿ : ವಾಲ್ಮೀಕಿ (ಬೇಡರ) ಸಮುದಾಯ
ವಿದ್ಯೆ: ದ್ವಿತೀಯ ಪಿಯುಸಿ

* ಗೋಕಾಕ ಕ್ಷೇತ್ರದಿಂದ ಸತತವಾಗಿ 2ನೇ ಬಾರಿ ಆಯ್ಕೆ
* 2004ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಧರ್ಮಸಿಂಗ್ ಮಂತ್ರಿಮಂಡಲದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಜವಳಿ ಖಾತೆಯ (ಸ್ವತಂತ್ರ) ರಾಜ್ಯ ಸಚಿವ ಸ್ಥಾನ
* ಸಚಿವ ಸ್ಥಾನ ರೇಸ್ ನಲ್ಲಿದ್ದ ಸೋದರ ಗೋಕಾಕ ಕ್ಷೇತ್ರದಿಂದ ಸತತವಾಗಿ ನಾಲ್ಕನೇ ಬಾರಿಗೆ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಬದಲಿಗೆ ಸತೀಶ್ ಜಾರಕಿಹೊಳಿಗೆ ಅವಕಾಶ

ಪ್ರಕಾಶ್ ಹುಕ್ಕೇರಿ

ಪ್ರಕಾಶ್ ಹುಕ್ಕೇರಿ

ವಿದ್ಯ್ತೆ: ಎಸ್ಸೆಸ್ಸೆಲ್ಸಿ.
ಜಾತಿ: ಲಿಂಗಾಯತ ಪಂಚಮಸಾಲಿ ಸಮುದಾಯ
* ಚಿಕ್ಕೋಡಿ-ಸದಲಗಾ ಕ್ಷೇತದಿಂದ ಶಾಸಕರಾಗಿ ಆಯ್ಕೆಯಾಗಿ ಐದನೇ ಬಾರಿಗೆ ವಿಧಾನಸಭೆ ಪ್ರವೇಶ.
* 1983ರಲ್ಲಿ ತಾಲ್ಲೂಕಿನ ಯಕ್ಸಂಬಾ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ರಾಜಕೀಯಕ್ಕೆ ಎಂಟ್ರಿ. ಪಯಣವು, ಎರಡನೇ ಬಾರಿಗೆ ಸಚಿವರಾಗುವ ಹಂತಕ್ಕೆ ಬಂದು ತಲುಪಿದೆ.
* 1986 ಬೆಳಗಾವಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ, 1988ರಿಂದ 1994ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿ, 1992ರಿಂದ 1994ರ ವರೆಗೆ ವಿಧಾನ ಪರಿಷತ್ ನ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಣೆ
* 2000ರಿಂದ 2004ರ ವರೆಗೆ ಬೆಳಗಾವಿ ಕಾಡಾ ಅಧ್ಯಕ್ಷರಾಗಿದ್ದರು.
* 1994, 1999 ಮತ್ತು 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಸದಲಗಾ ಮತಕ್ಷೇತ್ರದಿಂದ ಸತತವಾಗಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ
* 2004 ಧರ್ಮಸಿಂಗ್ ಮಂತ್ರಿಮಂಡಲದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಸಚಿವ.

ಮಲ್ಲನಗೌಡ ಬಸನಗೌಡ ಪಾಟೀಲ

ಮಲ್ಲನಗೌಡ ಬಸನಗೌಡ ಪಾಟೀಲ

ಜನನ: ಜನನ 7ನೇ ಅಕ್ಟೋಬರ್ 1964.
ಜಾತಿ: ತೊರವಿ ಗ್ರಾಮದ ಕುಡು ಒಕ್ಕಲಿಗ
ಕುಟುಂಬ: ಲಿಂಗಾಯತ ರಡ್ಡಿ ಜಾತಿಯ ಆಶಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ.

ವಿದ್ಯೆ: ಬಿ.ಇ. (ಸಿವಿಲ್)
* ಬೆಂಗಳೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ವಿಜಾಪುರದ ದರಬಾರ ಪ್ರೌಢ ಶಾಲೆಯಲ್ಲಿ, ಬಿ.ಇಯನ್ನು ತಮ್ಮದೇ ಸಂಸ್ಥೆಯ ಬಿ.ಎಲ್.ಡಿ.ಇ. ಎಂಜಿನಿಯರಿಂಗ್ ಕಾಲೇಜನಲ್ಲಿ ಪಡೆದಿದ್ದಾರೆ.
* ಒಮ್ಮೆ ಸಂಸದ, ನಾಲ್ಕು ಬಾರಿ ಶಾಸಕರಾಗಿದ್ದು, ಇದೇ ಪ್ರಥಮ ಬಾರಿಗೆ ಸಚಿವರಾಗಿದ್ದಾರೆ.
* 1991ರಲ್ಲಿ ತಿಕೋಟಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ.
* 1998ರಲ್ಲಿ ವಿಜಾಪುರ ಕ್ಷೇತ್ರದಿಂದ ಲೋಕಸಭೆಗೆ, 2004ರಲ್ಲಿ ತಿಕೋಟಾ, 2008ರಲ್ಲಿ ಬಬಲೇಶ್ವರ (ಕ್ಷೇತ್ರ ಪುನರ್ ವಿಂಗಡಣೆ)ದಿಂದ ವಿಧಾನಸಭೆಗೆ ಆಯ್ಕೆ
* ಈಗ ಬಬಲೇಶ್ವರ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದಾರೆ. ಎಐಸಿಸಿ, ಕೆಪಿಸಿಸಿ ಸಮನ್ವಯ ಸಮಿತಿ ಸದಸ್ಯರಾಗಿದ್ದಾರೆ.

ಬಾಬುರಾವ್ ಚಿಂಚನಸೂರ್

ಬಾಬುರಾವ್ ಚಿಂಚನಸೂರ್

ಕ್ಷೇತ್ರ : ಗುರು ಮಿಠಕಲ್
ವಯಸ್ಸು: 62
ವಿದ್ಯೆ: ಪದವಿ
ಜಾತಿ : ಹಿಂದುಳಿದ ವರ್ಗ
* 1989ರಲ್ಲಿ ಚಿತ್ತಾಪುರ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆ
* 1994,1999ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು
* 1999 ರಿಂದ 2003ರವರೆಗೆ ಎಸ್ ಎಂ ಕೃಷ್ಣ ಸರ್ಕಾರದಲ್ಲಿ ಮುಜರಾಯಿ, ಬಂದೀಖಾನೆ ರಾಜ್ಯ ಸಚಿವ
* 2008ರಲ್ಲಿ ಗುರುಮಿಠಕಲ್ ನಿಂದ ಶಾಸಕರಾಗಿ ಆಯ್ಕೆ
* ಒಟ್ಟು 5 ಬಾರಿ ಶಾಸಕರಾಗಿ ಆಯ್ಕೆ, 2ನೇ ಬಾರಿ ಸಚಿವ ಸ್ಥಾನ

ಆರ್ ವಿ ದೇಶಪಾಂಡೆ

ಆರ್ ವಿ ದೇಶಪಾಂಡೆ

ಕ್ಷೇತ್ರ: ಹಳಿಯಾಳ
ವಯಸ್ಸು: 66
ವಿದ್ಯೆ : ಕಾನೂನು ಪದವಿ
ಜಾತಿ: ಗೌಡ ಸಾರಸ್ವತ ಬ್ರಾಹ್ಮಣ
ಕುಟುಂಬ : ಪತ್ನಿ ರಾಧಾ. ಈ ದಂಪತಿಗೆ ಪ್ರಸಾದ್ ಹಾಗೂ ಪ್ರಶಾಂತ್ ಎಂಬ ಪುತ್ರರು. ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರು ದೇಶಪಾಂಡೆಯವರ ಬೀಗರು.
* ಹಳಿಯಾಳದಲ್ಲಿ ವಕೀಲ ವೃತ್ತಿ ಆರಂಭಿಸಿ, ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದರು.
* ಹಳಿಯಾಳ ಕ್ಷೇತ್ರದಿಂದ ಏಳು ಬಾರಿ ಜಯಗಳಿಸಿ ದಾಖಲೆ ನಿರ್ಮಿಸಿದ್ದಾರೆ.
* 1983 ರಿಂದ 2004ರ ವರೆಗೆ ದೇಶಪಾಂಡೆಯವರು ಸತತ ಆರು ಸಲ ಗೆದ್ದು ಎರಡೆರಡು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದರು.
* 1985ರಲ್ಲಿ ಮೊದಲ ಬಾರಿಗೆ ಸಚಿವರಾದರು.
* 1989ರ ಚುನಾವಣೆಯಲ್ಲಿ ಜಯ ಗಳಿಸಿ ನಗರಾಭಿವೃದ್ಧಿ ಖಾತೆ ಸಚಿವರಾದರು,
* 1994, 98 ಹಾಗೂ 2004ರಲ್ಲಿ ಗೆದ್ದು ಸತತ ಮೂರು ಅವಧಿಗೆ ಬೃಹತ್ ಕೈಗಾರಿಕೆ ಸಚಿವರಾಗಿದ್ದರು.
* 2008ರ ಚುನಾವಣೆ. ಜೆಡಿಎಸ್ ಅಭ್ಯರ್ಥಿ ಸುನಿಲ್ ಹೆಗಡೆ ವಿರುದ್ಧ ದೇಶಪಾಂಡೆ ಸೋತಿದ್ದರು.

ಉಮಾಶ್ರೀ

ಉಮಾಶ್ರೀ

* ವಯಸ್ಸು: 57 ವರ್ಷ
* ಉಮಾಶ್ರೀ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ನೊಣವಿನಕೆರೆ ಗ್ರಾಮದವರು.
* ರಾಜ್ಯಶಾಸ್ತ್ರದಲ್ಲಿ ಪದವೀಧರೆ.
ಕುಟುಂಬ: ಮಗ ವಿಜಯಕುಮಾರ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಗಳು ಗಾಯತ್ರಿ ದಂತ ವೈದ್ಯೆ.
* ಚಿತ್ರ ನಟಿ ಉಮಾಶ್ರೀ ವಿಧಾನಸಭೆಯನ್ನು ಮೊದಲ ಬಾರಿಗೆ ಪ್ರವೇಶ ಹಾಗೂ ಸಚಿವೆ ಸ್ಥಾನವೂ ಒಲಿದಿದೆ.
* ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದ ಶಾಸಕಿ.
* 350ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಅವರು ನಾಟಕ ರಂಗದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ.
* ಎರಡು ದಶಕಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು ಪ್ರಸ್ತುತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
* 2001ರಿಂದ 2006ರ ವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿದ್ದ ಉಮಾಶ್ರೀ 2008ರಲ್ಲಿ ತೇರದಾಳ ಕ್ಷೇತ್ರದಿಂದ ಚುನಾವಣೆ ಎದುರಿಸಿ, ಬಿಜೆಪಿಯ ಸಿದ್ದು ಸವದಿ ಅವರಿಂದ ಸೋಲನುಭವಿಸಿದ್ದರು.

ಟಿ.ಬಿ.ಜಯಚಂದ್ರ

ಟಿ.ಬಿ.ಜಯಚಂದ್ರ

ಕ್ಷೇತ್ರ: ಶಿರಾ
ವಯಸ್ಸು: 64
ವಿದ್ಯೆ: ಬಿಎಸ್ಸಿ, ಕಾನೂನು
ಜಾತಿ: ಒಕ್ಕಲಿಗ
ಕುಟುಂಬ: ತಂದೆ ದಿವಂಗತ ಬೋರೇಗೌಡ, ತಾಯಿ ಲಕ್ಷ್ಮಮ್ಮ. ಮೂವರು ಪುತ್ರರು. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಾಯಿ ತಿಮ್ಮನಹಳ್ಳಿ ಊರು.
ರಾಜಕೀಯ ಅನುಭವ: ಕಾಂಗ್ರೆಸ್ಸಿನ ವಿವಿಧ ಹುದ್ದೆಗಳ ನಿರ್ವಹಣೆ.
* 1978ರಲ್ಲಿ ಕಳ್ಳಂಬೆಳ್ಳ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆ.
* ನಂತರ 1989, 1994,1999ರಲ್ಲಿ ಸತತವಾಗಿ 3 ಬಾರಿ ವಿಧಾನಸಭೆಗೆ ಆಯ್ಕೆ.
* 1994-19999ರಲ್ಲಿ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ.
*ಎಸ್ ಎಂ ಕೃಷ್ಣ ಸರ್ಕಾರದಲ್ಲಿ ಕೃಷಿ, ಆಹಾರ ಸಚಿವರಾಗಿದ್ದರು.
* 2008ರಲ್ಲಿ ಶಿರಾ ಕ್ಷೇತ್ರದಿಂದ 5ನೇ ಬಾರಿಗೆ ವಿಧಾನಸಭೆಗೆ ಆಯ್ಕೆ.
* ನವದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ
* ಕೃಷ್ಣ ಕೊಳ್ಳ ನೀರಾವರಿ ಸಮಿತಿ, ಪಶ್ಚಿಮಘಟ್ಟ ನೀರಾವರಿ ಸಮಿತಿ ಅಧ್ಯಕ್ಷ
* ಮೂರು ಸಲ ಎಐಸಿಸಿ ಸದಸ್ಯ, ಕೆಪಿಸಿಸಿ ಕಾಯಂ ಆಹ್ವಾನಿತ ಸದಸ್ಯ.
* 1994 ಹಾಗೂ 2003ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿದ್ದರು.

ಸಂತೋಷ್ ಲಾಡ್

ಸಂತೋಷ್ ಲಾಡ್

ಕ್ಷೇತ್ರ:ಕಲಘಟಗಿ
ಜನನ: ಜನನ 1975 ಫೆ. 27.
ಕುಟುಂಬ: ತಂದೆ ದಿವಂಗತ ಶಿವಾಜಿ ಲಾಡ್. ತಾಯಿ ಶೈಲಜಾ. ಪತ್ನಿ ಕೀರ್ತಿ ಎಸ್.ಲಾಡ್. ಮಗ ಕರಣ್ ಲಾಡ್.
ವಿದ್ಯೆ: ವಾಣಿಜ್ಯ ಶಾಸ್ತ್ರ ಪದವೀಧರ.
* 1996ರಲ್ಲಿ ಸಂಡೂರು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರು, 2000ದಲ್ಲಿ ಅದೇ ಪಟ್ಟಣ ಪಂಚಾಯ್ತಿಯ ಎರಡು ಕ್ಷೇತ್ರಗಳಿಂದ ಕಣಕ್ಕಿಳಿದು ಆಯ್ಕೆ
* 2004ರ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆ
* ಎಂ.ಪಿ.ಪ್ರಕಾಶ್ ಜೊತೆ ಸಂತೋಷ್ ಲಾಡ್ ಕೂಡಾ ಕಾಂಗ್ರೆಸ್ಸಿನತ್ತ ಮುಖ ಮಾಡಿದರು.
*2008ರಲ್ಲಿ ಕ್ಷೇತ್ರ ವಿಂಗಡಣೆಯ ಬಳಿಕ ಸಂಡೂರು ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲುಗೊಂಡಿದ್ದರಿಂದ ಕಲಘಟಗಿ ಕ್ಷೇತ್ರದಿಂದ ಸ್ಪರ್ಧೆ ಆಯ್ಕೆ
* ಮೂಲತಃ ಗಣಿ ಉದ್ಯಮಿ ಅಲ್ಲದೆ ಸಾಫ್ಟ್ ವೇರ್ ಸೇರಿದಂತೆ ಹಲವು ಉದ್ಯಮ ಸಂಸ್ಥೆಗಳ ಮಾಲೀಕ

ಅಂಬರೀಷ್

ಅಂಬರೀಷ್

ಕ್ಷೇತ್ರ: ಮಂಡ್ಯ
ವಯಸ್ಸು:61
ವಿದ್ಯೆ: ಪಿಯುಸಿ
ಜಾತಿ: ಒಕ್ಕಲಿಗ
ಕುಟುಂಬ: ಪತ್ನಿ ಸುಮಲತಾ, ಪುತ್ರ ಅಭಿಷೇಕ್
* ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಆಗಿ 25 ವರ್ಷಗಳ ಕಾಲ ಅನುಭವ
* ಪಸ್ತುತ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವರಾಗಿದ್ದಾರೆ.
* 1995ರಲ್ಲಿ ಕಾಂಗ್ರೆಸ್ ಸೇರ್ಪಡೆ
* 1998ರಲ್ಲಿ ಮಂಡ್ಯ ಲೋಕಸಭಾ ಸದಸ್ಯರಾಗಿ ಆಯ್ಕೆ.
* 1999,2004ರಲ್ಲಿ ಲೋಕಸಭೆಗೆ.ಆಯ್ಕೆ
* 2006-07ರವರೆಗೆ ಯುಪಿಎ-1 ಸರ್ಕಾರದಲ್ಲಿ ವಾರ್ತಾ ಖಾತೆ ರಾಜ್ಯ ಸಚಿವ. ಕಾವೇರಿ ವಿವಾದಕ್ಕಾಗಿ ರಾಜೀನಾಮೆ.
* 2008ರಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸೋಲು.
* 2012ರಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾಗಿದ್ದರು.

ಶಿವರಾಜ್ ತಂಗಡಗಿ

ಶಿವರಾಜ್ ತಂಗಡಗಿ

ಕ್ಷೇತ್ರ: ಕನಕಗಿರಿ
ಜನನ: ಹುನಗುಂದ ತಾಲ್ಲೂಕಿನ ಇಳಕಲ್ಲದಲ್ಲಿ 10 ಜೂನ್ 1971ರಂದು
ಕುಟುಂಬ: ಸಂಗಪ್ಪ ಮತ್ತು ಹುಲಿಗಮ್ಮ ದಂಪತಿಯ ಪುತ್ರ. ಶಿವರಾಜ್ ಮತ್ತು ವಿದ್ಯಾ ದಂಪತಿಗೆ ಇಬ್ಬರು ಪುತ್ರರು (ಶಶಾಂಕ್, ಕಿರಣ್) ಮತ್ತು ಪುತ್ರಿ (ತನುಷಾ) ಇದ್ದಾರೆ.
ವಿದ್ಯ್ತೆ: ಬಿಎಸ್ ಸಿ ಪದವೀಧರ. ವೃತ್ತಿಯಲ್ಲಿ ಗ್ರಾನೈಟ್ ಉದ್ಯಮಿ.

* ಎರಡನೇ ಬಾರಿ ಅಸೆಂಬ್ಲಿಗೆ ಆಯ್ಕೆಯಾಗಿರುವ ಶಿವರಾಜ ಸಂಗಪ್ಪ ತಂಗಡಗಿ ಬಿಜೆಪಿಯಿಂದ ಉಚ್ಚಾಟಿತರಾಗಿದ್ದರು.
* 2001ರಲ್ಲಿ ಇಳಕಲ್ಲ ಪುರಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸದಸ್ಯರಾದರು. ನಂತರ ಬಿಜೆಪಿಗೆ ಸೇರಿದರು.
* ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. 2008ರಲ್ಲಿ ಬಿಜೆಪಿ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದರು.
* 2008ರಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ (ಎಸ್ ಸಿ ಮೀಸಲು) ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.
ಅದಕ್ಕಾಗಿ ಬಿಜೆಪಿಯಿಂದ ಉಚ್ಚಾಟನೆ. ಪಕ್ಷೇತರ ಶಾಸಕರಾಗಿ ಆಯ್ಕೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಜೆಪಿಯು ತಂಗಡಗಿ ಅವರ ಬೆಂಬಲ ಯಾಚಿಸಿತು. ಬೆಂಬಲ ನೀಡಿದ
* ತಂಗಡಗಿ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಖಾತೆ ಸಚಿವರಾಗಿದ್ದರು.
* 2013ರ ಏಪ್ರಿಲ್ ‌ನಲ್ಲಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಟಿಕೆಟ್ ಪಡೆದು ಮರು ಆಯ್ಕೆಯಾಗಿ ಸಚಿವರಾದರು.

ಕಿಮ್ಮನೆ ರತ್ನಾಕರ

ಕಿಮ್ಮನೆ ರತ್ನಾಕರ

ಜನನ:ತೀರ್ಥಹಳ್ಳಿ ತಾಲ್ಲೂಕು ಮೇಗರವಳ್ಳಿ, 1951ರ ಜುಲೈ 17ರಂದು.
ಕುಟುಂಬ: ಮಂಜಪ್ಪಗೌಡ- ಶೇಷಮ್ಮ ದಂಪತಿಯ ಏಳನೇ ಪುತ್ರ. ಪತ್ನಿ ಎಸ್.ಸಿ.ಅರುಂಧತಿ.

* ಎಸ್ಸೆಸ್ಸೆಲ್ಸಿಯವರೆಗೆ ತೀರ್ಥಹಳ್ಳಿಯಲ್ಲೇ ವ್ಯಾಸಂಗ. ಪಿಯುಸಿ ಶಿವಮೊಗ್ಗದ ಎನ್‌ಇಎಸ್‌ನಲ್ಲಿ.
* ಕಾರ್ಕಳದ ಭುವನೇಶ್ವರ ಕಾಲೇಜಿನಲ್ಲಿ ಬಿಎಸ್‌ಸಿ. ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ. 1978ರಲ್ಲಿ ಶಿವಮೊಗ್ಗದಲ್ಲಿ ವಕೀಲ ವೃತ್ತಿ. * ಆರಗ ತಾಲ್ಲೂಕು ಪಂಚಾಯ್ತಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆಲುವು.
1986ರಲ್ಲಿ ಆರಗ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧೆ, ಸೋಲು.

* 1987ರಲ್ಲಿ ತೀರ್ಥಹಳ್ಳಿ ತಾಲ್ಲೂಕು ಘಟಕದ ಜನತಾದಳದ ಕಾರ್ಯಾಧ್ಯಕ್ಷ,
* 1989ರಲ್ಲಿ ಜನತಾದಳ ಹೋಳಾದಾಗ ದೇವೇಗೌಡ ಬಣದಿಂದ ತಾಲ್ಲೂಕು ಅಧ್ಯಕ್ಷ, * 1999ರಲ್ಲಿ ಜನತಾದಳದಿಂದ ಸ್ಪರ್ಧೆ, ಆರಗ ಜ್ಞಾನೇಂದ್ರ ವಿರುದ್ಧ ಸೋಲು.
* 2004ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆ, ಸೋಲು.
* 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಆರಗ ಜ್ಞಾನೇಂದ್ರ ವಿರುದ್ಧ ಮೊದಲ ಗೆಲುವು ದಾಖಲಿಸಿದರು. 2013ರಲ್ಲಿ ಮತ್ತೆ ಗೆಲುವು.

ಬಿ.ರಮಾನಾಥ ರೈ

ಬಿ.ರಮಾನಾಥ ರೈ

ಕ್ಷೇತ್ರ: ಬಂಟ್ವಾಳ
ವಯಸ್ಸು: 60
ವಿದ್ಯೆ: ಬಿಎ ಪದವಿ
ಜಾತಿ: ಬಂಟ ಸಮುದಾಯದ ಬೆಳ್ಳಿಪ್ಪಾಡಿ ಮನೆತನದವರು.
ಕುಟುಂಬ: ಪತ್ನಿ ಧನಭಾಗ್ಯ ಆರ್.ರೈ. ಪುತ್ರ ಚೈತ್ರದೀಪ ರೈ, ಪುತ್ರಿ ಚರಿಷ್ಮಾ ರೈ.
* ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಆಯ್ಕೆ
* 1985ರಿಂದಲೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಲೇ ಬಂದಿರುವ ಅವರು, 2004ರಲ್ಲಿ ಸೋಲುಂಡದ್ದು ಬಿಟ್ಟರೆ ಕ್ಷೇತ್ರದಲ್ಲಿ ಅಜೇಯರಾಗಿಯೇ ಮುನ್ನಡೆದಿದ್ದಾರೆ.
* ವೀರಪ್ಪ ಮೊಯಿಲಿ ಸರ್ಕಾರದಲ್ಲಿ ಗೃಹ ಖಾತೆ ರಾಜ್ಯ ಸಚಿವರಾಗಿದ್ದರು
* ಎಸ್.ಎಂ.ಕೃಷ್ಣ ಸಚಿವ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದರು. ಜತೆಗೆ ಬಂದರು, ಮೀನುಗಾರಿಕೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
* ಎಎನ್ ಎಸ್ ಯುಐ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು. ಬಂಟ್ವಾಳ ತಾಲ್ಲೂಕು ಭೂ ಅಭಿವೃದ್ಧಿ ಬ್ಯಾಂಕಿನ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು.
* ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ, ಕೆಪಿಸಿಸಿ ಜತೆ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸಿದ್ದಾರೆ.

ಶರಣ ಪ್ರಕಾಶ್ ಪಾಟೀಲ್

ಶರಣ ಪ್ರಕಾಶ್ ಪಾಟೀಲ್

ಕ್ಷೇತ್ರ: ಸೇಡಂ
ವಯಸ್ಸು: 46, ಸೇಡಂ ತಾಲ್ಲೂಕಿನ ಊಡಗಿಯಲ್ಲಿ.
ವಿದ್ಯೆ: ಚರ್ಮ ವಿಜ್ಞಾನದಲ್ಲಿ ಸ್ನಾತಕೋತ್ತರ (ಎಂ ಡಿ) ಪದವೀಧರರು.
ಜಾತಿ : ಆದಿ ಲಿಂಗಾಯತ ಸಮುದಾಯ
ಕುಟುಂಬ: ತಂದೆ ರುದ್ರಪ್ಪ ಪಾಟೀಲ,ತಾಯಿ ಮಲಕಮ್ಮ. ಪತ್ನಿ ಭಾಗ್ಯಶ್ರೀ ಗುಲ್ಬರ್ಗ ನಗರದಲ್ಲಿ ವೈದ್ಯರು.
* ಎನ್ ಎಸ್ ಯುಐ, ಯುವ ಕಾಂಗ್ರೆಸ್, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ವಿಧಾನಸಭೆಗೆ ಹ್ಯಾಟ್ರಿಕ್' ಪ್ರವೇಶ
* ಪಂಚಾಯತ್ ರಾಜ್ ವ್ಯವಸ್ಥೆ ಬಗ್ಗೆ ಆಳವಾದ ಜ್ಞಾನ ಹೊಂದಿದವರು.
* ಗುಲ್ಬರ್ಗದ ವೈದ್ಯ ಕಾಲೇಜಿನಲ್ಲಿ ಓದುವಾಗಲೇ ವಿದ್ಯಾರ್ಥಿ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದರು,
* 1994ರಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದರು. 2000ದಲ್ಲಿ ಗುಲ್ಬರ್ಗ ಜಿಲ್ಲಾ ಪಂಚಾಯಿತಿಗೆ ಆಯ್ಕೆ.
* 2002ರಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ. 2004ರಲ್ಲಿ ಸೇಡಂ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ ಅವರು 2008 ಮತ್ತು 2013ರಲ್ಲಿಯೂ ಸತತವಾಗಿ ಗೆದ್ದರು.

ಎಚ್. ಆಂಜನೇಯ

ಎಚ್. ಆಂಜನೇಯ

ಜನನ: 1955ರ ಏ. 15ರಂದು, ದಾವಣಗೆರೆಯ ಗಾಂಧಿನಗರದಲ್ಲಿ
ಕ್ಷೇತ್ರ: ಚಿತ್ರದುರ್ಗ ಹೊಳೆಲ್ಕೆರೆ
ವಿದ್ಯೆ: ಪದವಿಪೂರ್ವ ಶಿಕ್ಷಣವ್ಯವಸಾಯವನ್ನು ವೃತ್ತಿಯಾಗಿಸಿಕೊಂಡವರು. ನಂತರ ರಾಜಕೀಯ ರಂಗ ಪ್ರವೇಶ.
* 1974ರಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯ. 1976- 80ರವರೆಗೆ ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ.
* 1982-87ರವರೆಗೆ ದಾವಣಗೆರೆ ನಗರಸಭೆ ಸದಸ್ಯ.
* 1986-89ರವರೆಗೆ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ. 1989-95ರವರೆಗೆ ರಾಜ್ಯ ಯುವ ಕಾಂಗ್ರೆಸ್ ಸದಸ್ಯ.
* 1996-98ರಿಂದ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ. 1998-2004ರವರೆಗೆ ಕೆಪಿಸಿಸಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ.
* 1999ರಲ್ಲಿ ಚಿತ್ರದುರ್ಗದ ಅಂದಿನ ಭರಮಸಾಗರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ.
* 2003-04ರವರೆಗೆ ರಾಜ್ಯ ಪ.ಜಾತಿ ಮತ್ತು ಪ.ಪಂಗಡದ ಅಭಿವೃದ್ಧಿ ನಿಗಮದ ಅಧ್ಯಕ್ಷ.
* 2004ರಲ್ಲಿ ಭರಮಸಾಗರ ಕ್ಷೇತ್ರದ ಶಾಸಕ. 2008ರಲ್ಲಿ ಹೊಳಲ್ಕೆರೆ ಮೀಸಲು ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧೆ.
* 2012ರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದಿಂದ ಆಯ್ಕೆ.

ವಿನಯಕುಮಾರ್ ಸೊರಕೆ

ವಿನಯಕುಮಾರ್ ಸೊರಕೆ

ಕ್ಷೇತ್ರ: ಕಾಪು
ವಯಸ್ಸು: 58
ಜಾತಿ : ಬಿಲ್ಲವ ಸಮುದಾಯ
ವಿದ್ಯೆ:ಬಿಎಸ್ ಸಿ ಎಲ್ ಎಲ್ ಬಿ
* ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ (1985 ಮತ್ತು 1994) ಆಯ್ಕೆ
* ಉಡುಪಿ ಲೋಕಸಭಾ ಕ್ಷೇತ್ರದಿಂದ 1999ರಲ್ಲಿ ಆಯ್ಕೆ
* 1982-1987ರ ವರೆಗೆ ಎನ್ ಎಸ್ ಯುಐ ರಾಜ್ಯ ಘಟಕದ ಅಧ್ಯಕ್ಷ
* ಭೂ ಸುಧಾರಣಾ ಚಳವಳಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದವರು.ಭೂ ನ್ಯಾಯಮಂಡಳಿ ಸದಸ್ಯರೂ ಆಗಿದ್ದರು.
* 1989ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ನ ಜಂಟಿ ಕಾರ್ಯದರ್ಶಿ
* 1991-2000 ಅವಧಿಯಲ್ಲಿ ರಾಜ್ಯ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ.
* ಸಿಂಡಿಕೇಟ್ ಬ್ಯಾಂಕ್ ನ ನಿರ್ದೇಶಕರಾಗಿದ್ದ ಅವರು ಸದ್ಯ ಎಐಸಿಸಿಯ ಕಾರ್ಯದರ್ಶಿ,ದಕ್ಷಿಣ ಭಾರತದ ಸೇವಾದಳದ ಉಸ್ತುವಾರಿ.

ಅಭಯಚಂದ್ರ ಜೈನ್

ಅಭಯಚಂದ್ರ ಜೈನ್

ಕ್ಷೇತ್ರ: ಮೂಡುಬಿದಿರೆ
ವಯಸ್ಸು: 64
ಕುಟುಂಬ: ಬನಾರಸ್ ವಿಶ್ವವಿದ್ಯಾಲಯದ ಟೆನಿಸ್ ಆಟಗಾರರಾಗಿದ್ದ ಎಂ.ಕೆ. ಅನಂತರಾಜ್ ಜೈನ್ ಅವರ ಪುತ್ರ. ಅಭಯಚಂದ್ರರ ಪತ್ನಿ ಮಂಜುಳಾ. ಆಯುಷ್ ಮತ್ತು ಕ್ಷಮಾ ಅವರ ಮಕ್ಕಳು.
* ಇದೀಗ ಅವರಿಗೆ ಮೊದಲ ಬಾರಿಗೆ ಸಚಿವ ಸ್ಥಾನ ಲಭಿಸಿದೆ.
* ಮಂಗಳೂರು ಕೆಪಿಟಿಯಲ್ಲಿ ಅಟೊಮೊಬೈಲ್ ಡಿಪ್ಲೊಮಾ ವ್ಯಾಸಂಗ, ವೃತ್ತಿಯಲ್ಲಿ ಸಾರಿಗೆ ಉದ್ಯಮಿ, ಪ್ರವೃತ್ತಿಯಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. ಮೂಡುಬಿದಿರೆ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ.
* ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಪ್ರೇರಣೆಯಿಂದ 1972ರಲ್ಲಿ ಮೂಡುಬಿದಿರೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ
* 1980ರಲ್ಲಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ.
* 1991ರಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ.
* 1992ರಲ್ಲಿ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ಎಂಎಲ್ ಸಿ ಆಗಿ ನೇಮಕ 1994ರಲ್ಲಿ ಮತ್ತೆ ಪುನರಾಯ್ಕೆ
* 1999ರಿಂದೀಚೆಗೆ ಅವರು ಸತತವಾಗಿ ಮೂಡುಬಿದಿರೆ-ಮೂಲ್ಕಿ ಕ್ಷೇತ್ರವನ್ನು ಪ್ರತಿನಿಧಿ.
* 2004ರಲ್ಲಿ ವಿಧಾನಸಭೆ ಸಚೇತಕರಾಗಿ ಹಾಗೂ 2009ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದರು.

ಯು.ಟಿ.ಅಬ್ದುಲ್ ಖಾದರ್

ಯು.ಟಿ.ಅಬ್ದುಲ್ ಖಾದರ್

ವಯಸ್ಸು: 44
ವಿದ್ಯೆ : ಕಾನೂನು ಪದವೀಧರ.
ಕುಟುಂಬ : ಪತ್ನಿ ಲಾಮಿಸ್ ಖಾದರ್, ಪುತ್ರಿ ಹವ್ವಾ ನಸೀಮಾ.
* 2007ರಲ್ಲಿ ತಮ್ಮ ತಂದೆ ಯು.ಟಿ.ಫರೀದ್ ನಿಧನದ ನಂತರ ಉಳ್ಳಾಲ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದರು
* ಎನ್ ಎಸ್ ಯುಐನಲ್ಲಿ ಸಕ್ರಿಯರಾಗಿದ್ದ ಅವರು 1992ರಲ್ಲಿ ಜಿಲ್ಲಾ ಎನ್ ಎಸ್ ಯುಐ ಪ್ರಧಾನ ಕಾರ್ಯದರ್ಶಿ ನಂತರ ಅಧ್ಯಕ್ಷರಾದರು.
* ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. 2000ದಲ್ಲಿ ರಾಜ್ಯ ಎನ್ ಎಸ್ ಯುಐ ಉಪಾಧ್ಯಕ್ಷರಾಗಿದ್ದರು.
*2002ರಲ್ಲಿ ಅಖಿಲ ಭಾರತ ಸೇವಾದಳದ ಮಾರ್ಗದರ್ಶಕ
* ಮೋಟಾರ್ ಕ್ರಾಸಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

ಪಿ.ಟಿ. ಪರಮೇಶ್ವರ ನಾಯ್ಕ

ಪಿ.ಟಿ. ಪರಮೇಶ್ವರ ನಾಯ್ಕ

ಕ್ಷೇತ್ರ : ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ (ಮೀಸಲು)
ಜನನ: 1964ರ ಮೇ 11ರಂದು ಜನನ.
ಕುಟುಂಬ : ಹರಪನಹಳ್ಳಿ ಬಳಿಯ ಲಕ್ಷ್ಮಿಪುರ ತಾಂಡಾದ ಪಿ. ಥಾವರ ನಾಯ್ಕ ಹಾಗೂ ಗಂಗಿಬಾಯಿ ದಂಪತಿಯ ಪುತ್ರ. ಪರಮೇಶ್ವರ ನಾಯ್ಕ ಪತ್ನಿ ಪ್ರೇಮಾ . ಈ ದಂಪತಿಗೆ ಅವಿನಾಶ್ ಮತ್ತು ಭರತ್ ಎಂಬ ಮಕ್ಕಳು.
ವಿದ್ಯೆ: ಬಿ.ಎ. ಪದವೀಧರ.
* ಕಾಂಗ್ರೆಸ್ ನಿಂದಲೇ ರಾಜಕೀಯ ಜೀವನ ಆರಂಭಿಸಿರುವ ಇವರು, ಮೊದಲ ಬಾರಿ ಸಚಿವರಾಗಿದ್ದಾರೆ.
* ದಾವಣಗೆರೆ ಜಿಲ್ಲೆಯ ಹರಪನಹಳ್ಳಿ (ಮೀಸಲು) ವಿಧಾನಸಭೆ ಕ್ಷೇತ್ರದಿಂದ 1999 ಹಾಗೂ 2004ರಲ್ಲಿ ಸತತ ಎರಡು ಬಾರಿ ಶಾಸಕರಾಗಿದ್ದರು.
* 2008ರಲ್ಲಿ ಎಂ.ಪಿ. ಪ್ರಕಾಶ್ ಅವರಿಗಾಗಿ ಕ್ಷೇತ್ರ ಬದಲಿಸಿ, ಹೂವಿನ ಹಡಗಲಿಯಲ್ಲಿ ಸ್ಪರ್ಧಿಸಿ ಸೋತಿದ್ದರು.
* 1987ರಲ್ಲಿ ಹಿರೇಮ್ಯಾಗಳಗೇರಿ ಮಂಡಲ ಪಂಚಾಯಿತಿ ಸದಸ್ಯರಾಗಿ, 1993ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಲಕ್ಷ್ಮಿಪುರ ತಾಂಡಾ ಪ್ರತಿನಿಧಿಸಿದ್ದರು.
* 1995ರಲ್ಲಿ ತಾಲ್ಲೂಕು ಪಂಚಾಯಿತಿಯ ಹಿರೇ ಮ್ಯಾಗಳಗೇರಿ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದರಲ್ಲದೆ,
* 1997ರಲ್ಲಿ ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಖಮರುಲ್ ಇಸ್ಲಾಂ

ಖಮರುಲ್ ಇಸ್ಲಾಂ

ಕ್ಷೇತ್ರ: ಗುಲ್ಬರ್ಗ ಉತ್ತರ
ವಿದ್ಯೆ: ಇಂಜಿನಿಯರಿಂಗ್ ಪದವೀಧರ
* ಖಮರುಲ್ ಅವರ ಪತ್ನಿ ಖನೀಫಾ ಫಾತಿಮಾ. ಈ ದಂಪತಿಯ ದತ್ತು ಪುತ್ರ ಫರಾದ್ ಸದ್ಯ ಎಂಬಿಎ ವಿದ್ಯಾರ್ಥಿ.
* ಇವರು ಕಟ್ಟಿ ಬೆಳೆಸಿದ ನೋಬೆಲ್ ಶಿಕ್ಷಣ ಸಂಸ್ಥೆ'ಯನ್ನು ಸಹೋದರರು ನೋಡಿಕೊಳ್ಳುತ್ತಿದ್ದಾರೆ.
* 1978ರಲ್ಲಿ ಮುಸ್ಲಿಂ ಲೀಗ್ ಮೂಲಕ ಗುಲ್ಬರ್ಗ ಕ್ಷೇತ್ರದಿಂದ ಜಯ
* 1983 ಮತ್ತು 1985ರಲ್ಲಿ ಜನತಾ ಪಕ್ಷದ ಎಸ್.ಕೆ. ಕಾಂತಾ ವಿರುದ್ಧ ಸೋಲು
* 1994ರಲ್ಲಿ ಇಂಡಿಯನ್ ನ್ಯಾಷನಲ್ ಲೀಗ್ ನಿಂದ ಸ್ಪರ್ಧಿಸಿ ಗೆಲುವು.
* 1996ರಲ್ಲಿ ಜನತಾದಳ ಸೇರಿ ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆ. 1998ರಲ್ಲಿ ಸೋಲು. ಬಳಿಕ ಕಾಂಗ್ರೆಸ್ ಸೇರಿ 1999ರಲ್ಲಿ ಮತ್ತೆ ಗುಲ್ಬರ್ಗ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ
* ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ವಸತಿ ಮತ್ತು ಕಾರ್ಮಿಕ ಸಚಿವರಾಗಿದ್ದರು.
* ಈ ಬಾರಿ ಹೈದರಾಬಾದ್ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಮುಸ್ಲಿಂ ಕಾಂಗ್ರೆಸ್ ನಾಯಕ

ಡಾ. ಎಚ್ ಸಿ ಮಹದೇವಪ್ಪ

ಡಾ. ಎಚ್ ಸಿ ಮಹದೇವಪ್ಪ

ಜಾತೀ: ಪರಿಶಿಷ್ಟ ಜಾತಿ
ಕ್ಷೇತ್ರ: ಟೀ ನರಸೀಪುರ
ವಯಸ್ಸು: 66
ವಿದ್ಯೆ:ಎಂಬಿಬಿಎಸ್
* 1980ರಲ್ಲಿ ರಾಜಕೀಯ ಪ್ರವೇಶ. ಮೊದಲ ಬಾರಿಗೆ ಜನತಾ ಪಕ್ಷದಿಂದ 1985ರಲ್ಲಿ ಟಿ. ನರಸೀಪುರದಿಂದ ಆಯ್ಕೆ
* ಎಚ್ ಡಿ ದೇವೇಗೌಡ ಹಾಗೂ ಜೆಎಚ್ ಪಟೇಲ್ ಮಂತ್ರಿಮಂಡಲದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
* ಧರಂ ಸಿಂಗ್ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

ಎಚ್ ಎಸ್ ಮಹದೇವ ಪ್ರಸಾದ್

ಎಚ್ ಎಸ್ ಮಹದೇವ ಪ್ರಸಾದ್

ಕ್ಷೇತ್ರ ಗುಂಡ್ಲುಪೇಟೆ
ವಯಸ್ಸು: 55
ವಿದ್ಯೆ: ಎಂಎ
ಜಾತಿ: ಲಿಂಗಾಯತ
* 1985 ರಲ್ಲಿ ರಾಜಕೀಯ ಪ್ರವೇಶ. ಐದು ಬಾರಿ ವಿಧಾನಸಭೆಗೆ ಆಯ್ಕೆ
* 1985, 1989ರಲ್ಲಿ ಸೋಲು ನಂತರ 1994ರಿಂದ 2013ರವರೆಗೆ 5 ಬಾರಿ ಆಯ್ಕೆ
* ಧರಂ ಸಿಂಗ್ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನಿರ್ವಹಣೆ
* ಎಚ್ ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ
* 2010ರಲ್ಲಿ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ

English summary
Know your Minister : Brief profile of 28 Karnataka ministers in Siddaramaiah cabinet. 20 in cabinet rank, 8 State Ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X