ಲಗ್ನಪತ್ರಿಕೆಯೇ ಹೀಗೆ, ಇನ್ನು ಮದುವೆ ಹ್ಯಾಗೋ?
ಇಂದು ಬಂಗಾರದ ಬೆಲೆ ಕೇಳಿದರೆ ಕನ್ಯಾಪಿತೃಗಳ ಕಣ್ಣು ನೆತ್ತಿಯ ಮೇಲೆ ಬರುತ್ತದೆ. ಚಿನ್ನದ ಮೇಲೆ ಸಾಲ ಮಾಡಿ ದುಡ್ಡು ಸುರಿದರೂ ಚಿಂತೆಯಿಲ್ಲ ಮದುವೆ ಸುಸೂತ್ರವಾಗಿ, ನಿರ್ವಿಘ್ನವಾಗಿ ನಡೆದರೆ ಸಾಕು ಎಂದು ವಧುವಿನ ತಂದೆತಾಯಿತರು ಆಶಿಸಿರುತ್ತಾರೆ. ಅಂಥದರಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನೇ ಚಿನ್ನದ ಎಳೆಗಳಿಂದ ಅಲಂಕರಿಸುವುದನ್ನು ತಂದೆತಾಯಂದಿರು ಕನಸುಮನಸಿನಲ್ಲಿಯೂ ಎಣಿಸಿರುವುದಿಲ್ಲ.
ಆದರೆ, ಬಳ್ಳಾರಿಯ ಮಾಜಿ ಸಚಿವ, ಜೆಡಿಎಸ್ ನಾಯಕ, ಖ್ಯಾತ ಗ್ರಾನೈಟ್ ಉದ್ಯಮಿ ನರ ಸೂರ್ಯನಾರಾಯಣ ರೆಡ್ಡಿ ದಂಪತಿಗಳು ಇಂಥದೊಂದು ಕನಸನ್ನು ಸಾಕಾರಗೊಳಿಸಿದ್ದಾರೆ. ತಮ್ಮ ಹಿರಿಯ ಮಗ ಶರತ್ ರೆಡ್ಡಿಯ ಮದುವೆಗೆ, ಚಿನ್ನದಿಂದ ಅದ್ಭುತವಾಗಿ ರೂಪಿಸಲಾಗಿರುವ ಕರೆಯೋಲೆಗೆ 15 ಸಾವಿರ ರು. ವೆಚ್ಚ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಹಿಂದೆ ಮಂಗಳೂರು ಮೂಲದ ಬೆಡಗಿ ಶಿಲ್ಪಾ ಶೆಟ್ಟಿ ಅವರ ಮದುವೆಯ ಆಮಂತ್ರಣ ಪತ್ರಕ್ಕೆ 12 ಸಾವಿರ ರು. ಖರ್ಚು ಮಾಡಿದ್ದು ದಾಖಲೆಯಾಗಿತ್ತು.
ಸುವರ್ಣ ಮತ್ತು ಸೂರ್ಯನಾರಾಯಣ ರೆಡ್ಡಿ ಅವರ ಮಗ ಶರತ್ ರೆಡ್ಡಿ ಅವರ ರಾಯಲ್ ವೆಡ್ಡಿಂಗ್ ಅನ್ನು ರಾಧಿಕಾ ಮತ್ತು ಶಾಮ್ ಪ್ರಸಾದ್ ರೆಡ್ಡಿ ಅವರ ಮಗಳಾದ ಅತ್ಮಿಕಾ ಎಂಬ ಕನ್ಯೆಯೊಂದಿಗೆ ಚೆನ್ನೈನ ಎಂಆರ್ಸಿ ನಗರದಲ್ಲಿರುವ ಲೀಲಾ ಪ್ಯಾಲೇಸಿನಲ್ಲಿ ಮೇ 29ರಂದು ವೈಭವೋಪೇತವಾಗಿ ಮಾಡಿಕೊಡಲಾಗುತ್ತಿದೆ. ಆಮಂತ್ರಣ ಪತ್ರವೇ ಹೀಗಿರಬೇಕಾದರೆ ಇನ್ನು ಮದುವೆ, ಮದುಮಕ್ಕಳಿಗೆ, ಬಂಧುಗಳಿಗೆ ಕೊಡುತ್ತಿರುವ ಉಡುಗೊರೆಗಳು ಹೇಗಿರಬಹುದೆಂದು ಬಳ್ಳಾರಿ ವಾಸಿಗಳು ಕಾತುರದಿಂದ ನೋಡುತ್ತಿದ್ದಾರೆ.
ಮುಂಬೈನ ರಾವೀಶ್ ಕಪೂರ್ ರೂಪಿಸಿರುವ ಈ ಐಷಾರಾಮಿ ಕರೆಯೋಲೆಯ ವಿಶೇಷತೆ ಏನು? ಮುಂದೆ ತಿಳಿದುಕೊಳ್ಳಿ.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
14 ಪುಟಗಳ ಲಗ್ನಪತ್ರಿಕೆಯನ್ನು ನೆಕ್ಲೇಸ್ ಬಾಕ್ಸಿನಂತಿರುವ ಬಾಕ್ಸಿನಲ್ಲಿ ಅಚ್ಚುಕಟ್ಟಾಗಿಡಲಾಗಿದೆ. ಕಂದು ಬಣ್ಣದ ಕವರ್ ಮೇಲೆ ಮದುವೆಯ ಮಮತೆಯ ಕರೆಯೋಲೆ ಎಂಬ ಆಂಗ್ಲ ಅಕ್ಷರಗಳನ್ನು ಬಂಗಾರದ ಬಣ್ಣದಲ್ಲಿ ಮುದ್ದಾಗಿ ಬರೆಯಲಾಗಿದೆ. ಲಗ್ನಪತ್ರಿಕೆ ತೆರೆಯುವುದಕ್ಕೂ ಮೊದಲು ವಧು ಅತ್ಮಿಕಾ ಮತ್ತು ವರ ಶರತ್ ಹೆಸರನ್ನು ಬರೆಯಲಾಗಿದೆ.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
ಮೊದಲ ಪುಟ ತೆರೆಯುತ್ತಲೇ ಮೊದಲ ಇಡೀ ಪುಟದಲ್ಲಿ ಮೊದಲ ಪೂಜೆಗೆ ಅರ್ಹನಾದ ಸುಂದರವಾದ ಗಣೇಶನ ಚಿತ್ರವನ್ನು ಚಿನ್ನದ ಕುಸುರಿಯಿಂದ ಸುಂದರವಾಗಿ ಅಲಂಕರಿಸಲಾಗಿದೆ. ಕವರಿನ ಎರಡೂ ಬದಿಯಲ್ಲಿ ಬಾಕ್ಸ್ ಗಳಲ್ಲಿ ಡ್ರೈಫ್ರೂಟ್ಸ್ ಮತ್ತು ಚಾಕೋಲೇಟ್ ಇಡಲಾಗಿದೆ. ಇದರ ನಡುವೆ ಆಮಂತ್ರಣ ಪತ್ರವನ್ನು ಹುದುಗಿಸಿ ಇಡಲಾಗಿದೆ.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
ಮುಂದಿನ ಪುಟಗಳಲ್ಲಿ ರೆಡ್ಡಿ ಜನಾಂಗದ ಸಂಪ್ರದಾಯದಂತೆ ಮದುವೆ ಮೂಹೂರ್ತಕ್ಕೂ ಮುಂಚೆ ಆಚರಿಸುವ ನಲುಗು ಕಾರ್ಯಕ್ರಮ, ಮದುವೆ ಮುಹೂರ್ತ, ಆರತಕ್ಷತೆ, ವಧುವರರಿಗೆ ಬೆಸ್ಟ್ ಕಾಂಪ್ಲಿಮೆಂಟ್ಸ್, ವಿವಿಐಪಿ ಪಾಸ್ಗಳು ಹೀಗೆ ಮದುವೆಯ ಮೂರು ದಿನದ ಇಡೀ ಕಾರ್ಯಕ್ರಮಗಳ ವಿವರಗಳನ್ನು ಗೋಲ್ಡ್ ಕೋಟೇಡ್ ಲೆಟರ್ಗಳಲ್ಲಿ ಅದ್ಬುತವಾಗಿ ವಿನ್ಯಾಸ ಮಾಡಲಾಗಿದೆ. ಅಲ್ಲದೆ ಪ್ರತಿ ಪುಟದಲ್ಲು ಒಂದೊಂದು ವಿಶೇಷ ಚಿತ್ರವನ್ನು ಮುದ್ರಿಸಲಾಗಿದ್ದು, ಗಣೇಶ, ಕೈಮೇಲೆ ಕೈಯಿಟ್ಟಿರುವ ವಧುವರರು, ರತ್ನ ಖಚಿತ ಕಿರೀಟ, ಹೂಗುಚ್ಛದ ಚಿತ್ರಗಳು ಮನಸೆಳೆಯುತ್ತವೆ.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
ಲಗ್ನಪತ್ರಿಕೆಯ ಹೊರ ವಿನ್ಯಾಸದ ಬಗ್ಗೆ ಹೇಳುವುದಾದರೆ ಕಂದು ಬಣ್ಣದ ಪತ್ರಿಕೆ ಮೇಲೆ ಬಂಗಾರದ ವರ್ಣದಲ್ಲಿ ಕ್ಯಾಲಿಯೋಗ್ರಫಿ ಆರ್ಟ್ ಮಾಡಲಾಗಿದೆ. ಪತ್ರಿಕೆಯ ಅಂಚುಗಳಿಗೂ ಬಂಗಾರದ ವರ್ಣದ ಸೂಕ್ಷ್ಮ ಕುಸುರಿ ತರಹದ ಡಿಜೈನ್ಗಳನ್ನ ಮಾಡಲಾಗಿದೆ.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
ಇಲ್ಲಿ ಒಬ್ಬರಿಗೆ ಮಾಡಿಕೊಟ್ಟ ಡಿಜೈನ್ನನ್ನು ಮತ್ತೊಮ್ಮೆ ನಿರ್ಮಾಣ ಮಾಡುವುದಿಲ್ಲ ಹಾಗೂ ಬೇರೆಯಾರಿಗೂ ಅಂತಹ ಡಿಜೈನ್ ನೀಡುವುದಿಲ್ಲ. ಈ ಷರತ್ತಿನ ಮೇಲೆ ಇಲ್ಲಿ ಕಾರ್ಡ್ಗಳನ್ನು ಮಾಡಿಸಲಾಗುತ್ತದೆ. ಎರಡು ವರ್ಷಗಳ ಹಿಂದೆ ಇದೇ ಸಂಸ್ಥೆ ಬಾಲಿವುಡ್ನ ಖ್ಯಾತ ಅಭಿನೇತ್ರಿ ಶಿಲ್ಪಾಶೆಟ್ಟಿ ವಿವಾಹಕ್ಕಾಗಿ 12 ಸಾವಿರ ವೆಚ್ಚದಲ್ಲಿ ಲಗ್ನಪತ್ರಿಕೆ ತಯಾರು ಮಾಡುವ ಮೂಲಕ ಹೆಸರು ಮಾಡಿತ್ತು.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
ಲಗ್ನಪತ್ರಿಕೆ ಡಿಜೈನ್ಗಾಗಿ ಕಳೆದ ನಾಲ್ಕು ತಿಂಗಳುಗಳಿಂದಲೂ ಸತತವಾಗಿ ತಲೆ ಕೆಡಿಸಿಕೊಂಡ ಸೂರ್ಯನಾರಾಯಣರೆಡ್ಡಿ ಅನಂತರದಲ್ಲಿ ರಾವೀಶ್ ಕಪೂರ್ ಸಂಸ್ಥೆಯ ಈಗ ಅಚ್ಚು ಹಾಕಿಸಲಾಗಿರುವ ಮಾದರಿಯನ್ನು ಒಪ್ಪಿಕೊಂಡಿದ್ದರು. ತಾವು ಮಾಡಿದ್ದನ್ನು ಯಾರು ಅನುಕರಿಸಬಾರದು ಎಂಬ ಕಾರಣಕ್ಕೆ ರೆಡ್ಡಿ ಅವರು ಮುಂದೆ ಯಾರಿಗೂ ಇದೇ ರೀತಿಯ ಲಗ್ನಪತ್ರಿಕೆ ಮಾಡಿಕೊಡದಂತೆ ಸಂಸ್ಥೆ ಜೊತೆ ಕರಾರು ಮಾಡಿಕೊಂಡಿದ್ದಾರೆ. ಇಂಥ ಸಾವಿರ ಪ್ರತಿಗಳನ್ನು ಸೂರ್ಯನಾರಾಯಣ ರೆಡ್ಡಿ ಮುದ್ರಿಸಿದ್ದಾರೆ. ವಿಐಪಿ, ವಿವಿಐಪಿಗಳಿಗೆ ಮಾತ್ರ ಮದುವೆಯ ಮಮತೆಯ ಕರೆಯೋಲೆ ಮೀಸಲು.
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications