ಚಿತ್ರಗಳಲ್ಲಿ: ಜೋಲಿ, ಆನೆ ಮರಿ, ಕುರಿ ಮಂದೆ
ಬೆಂಗಳೂರು, ಮೇ.15: ಹಾಲಿವುಡ್ ಜಗತ್ತಿನ ಅತ್ಯಂತ ಸೆಕ್ಸಿ ತಾರೆಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಏಂಜಲೀನಾ ಜೋಲಿ ತೆಗೆದುಕೊಂಡಿರುವ ನಿರ್ಣಯಕ್ಕೆ ಭಾರತ ಸೇರಿದಂತೆ ವಿಶ್ವದ ಮಹಿಳಾ ವರ್ಗ ಪ್ರಶಂಸೆ ವ್ಯಕ್ತಪಡಿಸಿದೆ.
ಸ್ತನ ಕ್ಯಾನ್ಸರ್ ಭೀತಿ ಎದುರಿಸುತ್ತಿದ್ದ ಜೋಲಿ ತಮ್ಮ ಎರಡು ಸ್ತನಗಳನ್ನು ಕತ್ತರಿಸಲು ವೈದ್ಯರಿಗೆ ಅನುಮತಿ ನೀಡಿದ್ದಾರೆ. ಸಾಮಾನ್ಯವಾಗಿ ಸ್ತನ ಕ್ಯಾನ್ಸರಿಗೆ ಒಳಗಾದ ಮಹಿಳೆಯರು ತಮ್ಮ ಸೌಂದರ್ಯ ಹಾಳಾಗುವ ಕಾರಣ ಒಡ್ಡಿ ಸ್ತನಗಳನ್ನು ತೆಗೆಯಲು ಒಪ್ಪುವುದಿಲ್ಲ. ಅದರೆ, ಜೋಲಿ ದಿಟ್ಟ ಕ್ರಮ ಕೈಗೊಂಡಿದ್ದಲ್ಲದೆ ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಈ ಬಗ್ಗೆ ಘೋಷಿಸಿಕೊಂಡಿದ್ದು, ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ಆಶಾಕಿರಣವಾಗಿ ತೋರಿದೆ.
ವಿವಿಧ ದೇಶಗಳಿಂದ 6 ಮಕ್ಕಳನ್ನು ಪಡೆದು ಸಾಕುತ್ತಿರುವ ಜೋಲಿ ಮಹಾತಾಯಿ ಎಂಬ ಪಟ್ಟದ ಜೊತೆಗೆ ಹೊಸ ಆರೋಗ್ಯ ಕ್ರಾಂತಿಗೂ ನಾಂದಿ ಹಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಹಾಡಿ ಹೊಗಳಿವೆ.
ಉಳಿದಂತೆ, ಇಂದಿನ ಚಿತ್ರ ಸುದ್ದಿಯಲಿ ಏರ್ ಇಂಡಿಯಾ ಡ್ರೀಮ್ ಲೈನರ್ ಹಾರಾಟ, ದೆಹಲಿಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ ಕೆ ಅಡ್ವಾಣಿ ಜೊತೆ ಮುಸ್ಲಿಮ್ ನಾಯಕರು, ಕಾಶ್ಮೀರದಲ್ಲಿ ಕುರಿಗಳು ಸಾರ್ ಕುರಿಗಳು, ಮೋದಿ ಗೋ ಪೂಜೆ ಮುಂತಾದ ಚಿತ್ರಗಳಿದೆ.

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ
ತನ್ನ ಗೆಳೆಯ ಬ್ರಾಡ್ ಪೀಟ್ ನ ಜೊತೆ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಏಂಜಲೀನಾ ಜೋಲಿ ಬಂದಿದ್ದು ಹೀಗೆ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ
ರಾಧನ್ ಪುರ: ತಿಂಗಳ ಕಾಲ ನಡೆಯುವ ಕೃಷಿ ಮಹೋತ್ಸವ ಉದ್ಘಾಟನೆಗೂ ಮುನ್ನ ಗೋ ಪೂಜೆ ಮಾಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ
ಕೋಲ್ಕತ್ತಾ: ಇನ್ನೂ ಇಲ್ಲದ ವಿದ್ಯಾರ್ಥಿಗಳ ಆರ್ಭಟ, ಚಿಟ್ ಫಂಡ್ ಹಾಗೂ ಶಿಕ್ಷಣ ವಿರೋಧಿ ನೀತಿ ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿಗಳ ಜೊತೆ ಪೊಲೀಸರ ಸಂಘರ್ಷ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ
ಮಕ್ಕಳೊಂದಿಗೆ 'ಡ್ರೀಮ್ ಗರ್ಲ್': ಅಹನಾ, ಹೇಮಾ ಮಾಲಿನಿ ಹಾಗೂ ಇಶಾ ಡಿಯೋಲ್

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ
ಕಟಕ್: ಇಲ್ಲಿನ ಬೆಂಟಪಾದ ಗ್ರಾಮದಲ್ಲಿ 15 ಅಡಿ ಆಳದ ಬಾವಿಗೆ ಬಿದ್ದಿದ್ದ ಆನೆ ಮರಿಯನ್ನು ಹರಸಾಹಸ ಪಟ್ಟು ಸುರಕ್ಷಿತವಾಗಿ ಹೊರಕ್ಕೆ ತೆಗೆಯಲಾಯಿತು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ
ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಜೊತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ
ನವದೆಹಲಿ: ಬಹಾಯಿ ಸಮುದಾಯ ಸಮಾರಂಭದಲ್ಲಿ ಇಮಾಮ್ ಉಮರ್ ಅಹ್ಮದ್ ಇಲಿಯಾಸಿ ಅವರ ಕೈ ಕುಲುಕುತ್ತಿರುವ ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ
ಏರ್ ಇಂಡಿಯಾದ ರೋಹಿತ್ ನಂದನ್ ಹಾಗೀ ಬೋಯಿಂಗ್ ಇಂಡಿಯಾ ಅಧ್ಯಕ್ಷ ದಿನೇಶ್ ಕೇಸ್ಕರ್ ಅವರು ಏರ್ ಇಂಡಿಯಾ B787 ಡ್ರೀಮ್ ಲೈನರ್ ಹಾರಾಟ ಖುಷಿಯಲ್ಲಿ PTI Photo by Manvender Vashist

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ
ರೋಹ್ಟಕ್: ಕರೋಂಟಾ ಗ್ರಾಮದ ಸಾತ್ಲೋಕ್ ಆಶ್ರಮದ ಸ್ವಘೋಷಿತ ದೇವಮಾನವ ರಾಮ್ ಪಾಲ್ ವಿರುದ್ಧ ತಿರುಗಿಬಿದ್ದ ನೂರಾರು ಜನರನ್ನು ಹೊರಕ್ಕೆ ಕಳಿಸುತ್ತಿರುವ ಭದ್ರತಾ ಸಿಬ್ಬಂದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ
ಪಹಲ್ ಗಾಮ್: ಅಲೆಮಾರಿ ಕಾಶ್ಮೀರಿ ಜನಾಂಗ ಕುರಿ ಮಂದಿ ಜೊತೆ ಮುಂದಿನ ಊರಿಗೆ ತೆರಳುತ್ತಿರುವ ದೃಶ್ಯ












Click it and Unblock the Notifications