ಮತಎಣಿಕೆಗೂ ಮುನ್ನವೇ ಸೋಲೊಪ್ಪಿದ ಮಾಜಿ ಮಂತ್ರಿ

ಚುನಾವಣೆಗೆ ಮುನ್ನ ತಮ್ಮ ಪ್ರತಿಸ್ಪರ್ಧಿ ಡಿಕೆ ಶಿವಕುಮಾರ್ ಅವರು ಚುನಾವಣಾ ಅಕ್ರಮಗಳನ್ನು ಎಸಗುತ್ತಿದ್ದಾರೆ ಎಂದು 'ಡಿಕೆಶಿ ಸೀರೆಗಳನ್ನು' ಎಳೆ ಎಳೆಯಾಗಿ ಬಿಡಿಸಿಟ್ಟಿದ್ದ ಸಿಂಧ್ಯಾ ಅವರು ಚುನಾವಣೋತ್ತರದಲ್ಲಿ ಡಿಕೆಶಿ ವಿರುದ್ಧ ಭಾರಿ ಗಂಭೀರ ಆರೋಪವನ್ನೇ ಮಾಡಿದ್ದಾರೆ. ಏನಪಾ ಅಂದರೆ ಚುನಾವಣಾ ಸಿಬ್ಬಂದಿಯ ಜತೆಯೇ ಡಿಕೆಶಿ ಶಾಮೀಲಾಗಿ ಭಾರಿ ಅಕ್ರಮಗಳನ್ನು ಎಸಗಿದ್ದಾರೆ. ಹಾಗಾಗಿ ಚುನಾವಾಣಾಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಿಜಿಆರ್ ಆಗ್ರಹಿಸಿದ್ದಾರೆ.
ಹಾಗಂತ ಡಿಕೆಶಿ ಏನೂ ಕೇಳಿಲ್ಲ: 'ಓಕೆ ಅಕ್ಸಪ್ಟೆಡ್. ನಾನು ಚುನಾವಣಾ ಅಕ್ರಮ ಎಸಗಿದ್ದೇನೆ. ಒಂದು ವೇಳೆ ಸಿಂಧ್ಯಾನೇ ಜಯಶಾಲಿಯಾದರೆ ಸಾಹೇಬರು ಏನ್ಮಾಡ್ತರಂತೆ' ಎಂದು ಡಿಕೆ ಶಿವಕುಮಾರ್ ಅವರೇನೂ ಕೇಳಿಲ್ಲ.
ಬೆಂಗಳೂರು ಪ್ಯಾಲೆಸ್ ಎದುರು ಇರುವ ಜೆಡಿಎಸ್ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿ 'ಮತಯಂತ್ರಗಳ ಅಂಕಿ-ಅಂಶಗಳನ್ನು ತಿರುಚಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಬೇಕು' ಎಂದು ಪಿಜಿಆರ್ ಒತ್ತಾಯಿಸಿದ್ದಾರೆ.
ಈ ಆರೋಪಕ್ಕೆ 'ಬಲಾಢ್ಯ ಸಾಕ್ಷ್ಯವನ್ನೂ' ಒದಗಿಸಿರುವ ಮಾಜಿ ಸಚಿವ ಪಿಜಿಆರ್, ಚುನಾವಣೆಯ ದಿನ ಕನಕಪುರ ಕ್ಷೇತ್ರದ ಮತಯಂತ್ರಗಳನ್ನು ಶಿವಕುಮಾರ್ ಟ್ರಸ್ಟಿಯಾಗಿರುವ ಶಾಲೆಯಲ್ಲಿ ಅಕ್ರಮವಾಗಿ ಇರಿಸಲಾಗಿತ್ತು. ಕನಕಪುರದ ಎಲ್ಲ ಪ್ರದೇಶದಲ್ಲಿ ಆ ಸಮಯದಲ್ಲಿ ಕರೆಂಟ್ ಇದ್ದರೂ, ಮತ ಯಂತ್ರಗಳನ್ನು ಇರಿಸಲಾಗಿದ್ದ ಶಾಲೆಯಲ್ಲಿ ಮಾತ್ರ ರಾತ್ರಿ 8 ರಿಂದ 10 ಗಂಟೆ ತನಕ ಕರೆಂಟ್ ಹೋಗಿತ್ತು. ಈ ಅವಧಿಯಲ್ಲಿ ಮತ ಯಂತ್ರಗಳ ಅಂಕಿಗಳನ್ನು ತಿರುಚಲಾಗಿದೆ' ಎಂದು ಆಪಾದಿಸಿದ್ದಾರೆ.
ಈ ನಡುವೆಯೂ ಜೆಡಿಎಸ್ ಅಭ್ಯರ್ಥಿ ಪಿಜಿಆರ್ ಸಿಂಧ್ಯಾ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications