ಚಂದ್ರಶೇಖರ ಸ್ವಾಮಿಗೆ ದುಬೈ ಮಹಿಳೆಯ ನಂಟು

ಆದಾಯ ತೆರಿಗೆ ಅಧಿಕಾರಿಗಳು ಚಂದ್ರಶೇಖರ ಸ್ವಾಮೀಜಿ ಮನೆಯಲ್ಲಿ ಹಬ್ಬ ಆಚರಿಸಿದ್ದು ಯಾವಗಪ್ಪಾ ಅಂದರೆ ಈ ನಿಧಿಗಳಿಂದ ಅಮೂಲ್ಯವಾದ ದಾಖಲಾತಿಗಳ ನಿಧಿ ಸಿಕ್ಕಿದಾಗ. ಹೌದು ಈ ದಾಖಲಾತಿಗಳು ಅಧಿಕಾರಿಗಳನ್ನು ಸ್ವಾಮೀಜಿ ಸಮೇತ ನೇರವಾಗಿ ವಿದೇಶಗಳಿಗೆ ಕೊಂಡೊಯ್ದಿದೆ. ತನ್ಮೂಲಕ ಚಂದ್ರಶೇಖರ ಸ್ವಾಮೀಜಿ ಮುಖವಾಡ ಸಂಪೂರ್ಣವಾಗಿ ಕಳಚಿ ಬಿದ್ದಿದೆ.
ದುಬೈ - ರೋಹಿಣಿ ನಂಟು: ಚಂದ್ರಶೇಖರ ಸ್ವಾಮೀಜಿ ದುಬೈನಲ್ಲೂ ಭಾರಿ ವ್ಯವಹಾರಗಳನ್ನು ನಡೆಸುತ್ತಿರುವುದು ದಾಖಲಾತಿಗಳ ಮೂಲಕ ಅಧಿಕಾರಿಗಳಿಗೆ ಮನದಟ್ಟಾಗಿದೆ. ಇದಕ್ಕೆ ನೆರವಾಗಿರುವುದು ಒಬ್ಬ ಮಹಿಳೆ ಎಂಬುದು ಅಧಿಕಾರಿಗಳ ಅಂಬೋಣ. ಆ ಮಹಿಳೆ ದೂರದ ದುಬೈನವಳಲ್ಲ, ಬದಲಿಗೆ ಇಲ್ಲೇ ಆರ್ ಟಿ ನಗರದ ಪಕ್ಕದಲ್ಲೇ ಇರುವ ಸದಾಶಿವ ನಗರದ ಪ್ರಭಾವಿ ಮಹಿಳೆ (ರೋಹಿಣಿ) ಎಂದು ತಿಳಿದುಬಂದಿದೆ.
ಪ್ರಭಾವಿ ರಾಜಕಾರಣಿಗಳು, ಪ್ರತಿಷ್ಠಿತ ಚಿತ್ರ ತಾರೆಯರು, ಉದ್ಯಮಿಗಳ ಪರವಾಗಿ ಆರ್ ಟಿ ನಗರದ ಸಾಮೀಜಿ ಹಣಕಾಸು ಲೇವಾದೇವಿ ನಡೆಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ಸ್ವಾಮೀಜಿ ಮನೆಯ ಮೇಲೆ ಶನಿವಾರ-ಭಾನುವಾರ ಸಾವಕಾಶವಾಗಿ ದಾಳಿ ನಡೆಸಿದ್ದ ಅಧಿಕಾರಿಗಳು ಆ ನಂತರ ಸ್ವಾಮೀಜಿಯ ಆಪ್ತರ ಮನೆಗಳ ಮೇಲೂ ದಾಳಿಯಿಟ್ಟಾಗ ಈ ನಗ್ನ ಸತ್ಯಗಳು ಹೊರಬಿದ್ದಿವೆ.
ಹಣಕಾಸು ಲೇವಾದೇವಿ ಜತೆಗೆ, ಸ್ವಾಮೀಜಿ ರಿಯಲ್ ಎಸ್ಟೇಟ್ ವಹಿವಾಟನ್ನೂ ನಡೆಸುತ್ತಿದ್ದ ಎಂಬ ಮಾಹಿತಿಯೂ ಸಿಕ್ಕಿದೆ. ಅದರ ಹೊರತಾಗಿ, ಸರಿ ಆ ಪಾಟಿ ಚಿನ್ನ (15 ಕೆಜಿ), ಬೆಳ್ಳಿ (ಅರ್ಧ ಟನ್), ವಜ್ರ ಯಾಕಪ್ಪಾ ಮನೆಯಲ್ಲಿ ಇಟ್ಟುಕೊಂಡಿದ್ದೆ ಎಂದು ಅಧಿಕಾರಿಗಳು ಕೇಳಿದ್ದಕ್ಕೆ 'ಅವೆಲ್ಲಾ ನನ್ನ ಭಕ್ತರು ನೀಡಿರುವ ಕಾಣಿಕೆಗಳು' ಎಂದು ಸ್ವಾಮೀಜಿ ಹೇಳಿಕೊಂಡಿದ್ದಾನೆ. ಹಾಗಾದ್ರೆ ಕೋಟ್ಯಂತರ ದುಡ್ಡು ಎಲ್ಲಿಂದ ಬಂತು ಅಂದಿದ್ದಕ್ಕೆ ಮುಲ್ಕಿಯ ವಿಶ್ವ ಪ್ರಸಿದ್ಧ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಬೆಬ್ಬೆಬ್ಬೆ ಅಂದಿದ್ದಾನೆ .
500 ಕೋಟಿಗೂ ಹೆಚ್ಚು ಆಸ್ತಿ: ಚಂದ್ರಶೇಖರ ಸ್ವಾಮೀಜಿ ತನ್ನ ಆದಾಯಕ್ಕೆ ಕಾನೂನು ಪ್ರಕಾರವಾಗಿ 6 ರಿಂದ 8 ಲಕ್ಷ ರೂ. ವರೆಗೆ ವಾರ್ಷಿಕ ಆದಾಯ ತೆರಿಗೆ ಪಾವತಿಸಿದ್ದಾನೆ. ಆದರೆ ಸ್ವಾಮೀಜಿ ತಾವು ಘೋಷಿಸಿಕೊಂಡ ಆಸ್ತಿಗಿಂತ ಎರಡು ಪಟ್ಟು ಅಧಿಕ ಅಂದರೆ ಸುಮಾರು 500 ಕೋಟಿ ರೂ. ಗೂ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎನ್ನಲಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications