ಪಾಕ್: ಕೋಮಾದಲ್ಲಿದ್ದ ಭಾರತದ ಸರಬ್ಜಿತ್ ಸಿಂಗ್ ಇನ್ನಿಲ್ಲ
ಭಾರತದ ರೈತ,: ರಾಜಕೀಯ ಚಿತಾವಣೆಯಲ್ಲಿ ಮೇಲುಗೈ ಸಾಧಿಸಿದ ಪಾಕಿಸ್ತಾನವು ಜೈಲಿನಲ್ಲಿದ್ದ ಭಾರತದ ರೈತ, ಸರಬ್ ಜಿತ್ ಸಿಂಗ್ ಸಾವಿಗೆ ಕಾರಣವಾಗಿದೆ. ಮೇ 11ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿರುವ ಪಾಕಿಸ್ತಾನವು ಭಾರತದ ವಿರುದ್ಧ ತನ್ನ ರಾಷ್ಟ್ರದ ಹಿತಾಸಕ್ತಿ ಕಾಪಾಡಲು ಯಾವುದೇ ಕ್ರಮಕ್ಕೂ ಸೈ ಎಂಬುದನ್ನು ನಿರೂಪಿಸಲು ಸರಬ್ ಜಿತ್ ಸಾವಿಗೆ ಹೇತುವಾಗಿದೆ ಎನ್ನಲಾಗಿದೆ.
ಕಳೆದ ಶುಕ್ರವಾರ ಕೋಟ್ ಲಖ್ ಪತ್ ಜೈಲಿನಲ್ಲಿ ಸುಮಾರು ಆರು ಮಂದಿ ಖೈದಿಗಳು ಜೈಲಿನಲ್ಲಿದ್ದ ಸರಬ್ ಜಿತ್ ಮೇಲೆ ತೀವ್ರವಾದ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಸಿಂಗ್ ಕೋಮಾ ಸ್ಥಿತಿಗೆ ತಲುಪಿ, ಮೆದುಳು ಸಹ ನಿಷ್ಕ್ರಿಯವಾಗಿತ್ತು.
ಮರಣದಂಡಗೆ ಜಾರಿಯಾಗಿತ್ತು: ಪಾಕಿಸ್ತಾನಕ್ಕೆ ಸೇರಿದ ಪಂಜಾಬ್ ಪ್ರಾಂತ್ಯದಲ್ಲಿ 1990ರಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ 14 ಜನರು ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ ಭಾರತದ ಸರಬ್ ಜಿತ್ ಸಿಂಗ್ ಆಪಾದಿತನೆಂದು ಸಾಬೀತಾಗಿತ್ತು. ಪಾಕಿಸ್ತಾನ ನ್ಯಾಯಾಲಯ ಇವರಿಗೆ ಮರಣದಂಡನೆಯ ಶಿಕ್ಷೆ ವಿಧಿಸಿತ್ತು.