ಭ್ರಷ್ಟರ ಅಕ್ರಮ ಆಸ್ತಿ ಸರ್ಕಾರದ ಖಜಾನೆ ಸೇರಲಿದೆ
ಬುಧವಾರ ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆ, 1988ಕ್ಕೆ ತಿದ್ದುಪಡಿ ತರಲು ಒಪ್ಪಿಗೆ ದೊರಕಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಕಾಯ್ದೆಯ ತಿದ್ದುಪಡಿಯಂತೆ, ಭ್ರಷ್ಟ ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿಯನ್ನು ಸರ್ಕಾರವೇ ವಶಪಡಿಸಿಕೊಳ್ಳಬಹುದು. ಇದು ಕೇವಲ ಸೇವೆಯಲ್ಲಿರುವ ಸರ್ಕಾರಿ ನೌಕರರಿಗಷ್ಟೇ ಮಾತ್ರವಲ್ಲ, ನಿವೃತ್ತ ನೌಕರರಿಗೂ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದರು.
ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಮಹತ್ವದ ತೀರ್ಮಾನವೂ ಇದರಲ್ಲಿ ಸೇರಿದೆ. ವಿಚಾರಣೆ ನಡೆಸುತ್ತಲೇ ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಂಪುಟದ ಇತರ ತೀರ್ಮಾನಗಳು
*
ನೂತನವಾಗಿ
ದೇಶದ
294
ನಗರಗಳಲ್ಲಿ
ಎಫ್ಎಂ
ಕೇಂದ್ರಗಳನ್ನು
ಸ್ಥಾಪಿಸಲು
ಅನುಮತಿ.
*
ವಿವಾಹ
ಕಾನೂನು
(ತಿದ್ದುಪಡಿ)
ಮಸೂದೆಯನ್ನು
ಉನ್ನತ
ಸಚಿವರ
ಸಮಿತಿಯ
ಪರಿಶೀಲನೆಗೆ
ಕಳುಹಿಸಲಾಗಿದೆ.
*
ಮಲಹೊರುವ
ಪದ್ಧತಿ
ನಿಷೇಧ
ಮತ್ತು
ಅವರ
ಪುನರ್ವಸತಿ
ವಿಧೇಯಕ
2012ಕ್ಕೆ
ತಿದ್ದುಪಡಿ.
*
ನಗರಗಳ
ಕಡುಬಡವರ
ಆರೋಗ್ಯ
ಸುಧಾರಣೆಗಾಗಿ
ರಾಷ್ಟ್ರೀಯ
ನಗರ
ಆರೋಗ್ಯ
ಅಭಿಯಾನ
ಕಾರ್ಯಕ್ರಮ.
*
ಸಿಆರ್
ಪಿಎಫ್
ಸೇರಿದಂತೆ
ಕೇಂದ್ರೀಯ
ಪಡೆಗಳಿಗೆ
11
ಸಾವಿರ
ಕೋಟಿ
ವೆಚ್ಚದಲ್ಲಿ
ಶಸ್ತ್ರಾಸ್ತ್ರ
ಮತ್ತು
ಸಲಕರಣೆ
ಖರೀದಿ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ