ಗಿನ್ನಿಸ್ ದುರಂತ: ಡಾರ್ಜಿಲಿಂಗಿನಲ್ಲಿ ನೇಣು ಬಿಗಿದು ಸತ್ತ
ಸಿಲಿಗುರಿ, ಏ.29: OMG! ಆತ ಗಿನ್ನಿಸ್ ದಾಖಲೆ ಮಾಡುವ ಸಂದರ್ಭದಲ್ಲೇ ಸಾವಿರಾರು ಮಂದಿಯ ಕಣ್ಣೆದುರಿಗೇ ನೇಣು ಬಿಗಿದುಕೊಂಡಿದ್ದರಿಂದ ಸತ್ತೇ ಹೋದ. ಗಿನ್ನಿಸ್ ಸಂಸ್ಥೆಗೆ ಇದೂ ದಾಖಲೆಯಾಗುವುದೋ, ಏನೋ?
ಆತನ ಹೆಸರು ಶೈಲೆನ್ ನಾಥ್ ರಾಯ್. ವಯಸ್ಸು 45. ಯಶಸ್ವಿಯಾಗಿ ಅನೇಕ ಸ್ಟಂಟುಗಳನ್ನು ಮಾಡಿ ಗಿನ್ನಿಸ್ ದಾಖಲೆಗೆ ಪಾತ್ರನಾಗಿದ್ದ. ಆದರೆ, ಇಲ್ಲಿನ ತೀಸ್ತಾ ನದಿಯ ಸೇತಿವೆ ಸಮೀಪ ಅಂತಹುದೆ ಮತ್ತೊಂದು ಸ್ಟಂಟ್ ಮಾಡಲು ಹೋಗಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದರಿಂದ ಹಗ್ಗದಿಂದ ನೇತಾಡುತ್ತಾ ಪ್ರಾಣ ಬಿಟ್ಟಿದ್ದಾನೆ.

ಭಾನುವಾರ ಈ ದುರಂತ ಸಂಭವಿಸಿದ್ದು, ತಲೆಯ ಕೂದಲಿಗೆ ರಾಟೆ ಕಟ್ಟಿಕೊಂಡು ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯನ್ನು ಆ ಕೊನೆಯಿಂದ ಈ ಕೊನೆಗೆ ಜಾರುತ್ತಾ ದಾಟ ಬೇಕಿತ್ತು. ಆದರೆ ಹಾಗೆ ದಾಟುತ್ತಿರುವಾಗ ಮಧ್ಯ ಭಾಗದಲ್ಲಿಯೇ ರಾಟೆ ಸ್ಥಗತಗೊಂಡು ಆತನ ಜೀವನ ಕೊನೆಗೊಂಡಿದೆ.
ಏನೋ ಎಡವಟ್ಟಾಗುತ್ತಿದೆ ಎಂಬುದು ಶೈಲೆನ್ ನಾಥ್ ಗಮನಕ್ಕೆ ಬಂದಿದೆ. ತಕ್ಷಣ ಆತ ಆತುರಾತುರವಾಗಿ ರಾಟೆಯನ್ನು ಸುಸ್ಥಿತಿಗೆ ತರಲು ಯತ್ನಿಸಿದ್ದಾನೆ. ಆದರೆ ಆತನ ಪ್ರಯತ್ನಗಳು ವಿಫಲಗೊಂಡಿದೆ. ಅಸಾಹಯಕ ಜನ ಆತನ ಪ್ರಾಣಪಕ್ಷಿ ಹಾರಿಹೋಗುತ್ತಿರುವುದನ್ನು ಕಾಣಬೇಕಾಯಿತು.
ದುರ್ದೈವವೆಂದರೆ ಆಕಸ್ಮಾತ್ ಕೈಕೊಟ್ಟರೆ ಅವಘಡದಿಂದ ಪಾರಾಗಲು ಯಾವುದೇ ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ನದಿಯ ಮೇಲೆ ಹಗ್ಗಕ್ಕೆ ನೇತುಬಿದ್ದಿದ್ದ ಶೈಲೆನ್ ನಾಥ್ ಕೊನೆಗೆ ಹೃದಯಾಘಾತದಿಂದ ಸಾವನ್ನು ತಂದುಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಶೈಲೆನ್ ನಾಥ್, 2012ರಲ್ಲಿ 42 ಟನ್ ಭಾರದ, ಪುರಾತನ ಡಾರ್ಜಿಲಿಂಗ್-ಹಿಮಾಲಯ ಮಾದರಿ ಟ್ರೈನನ್ನು ತನ್ನ ತಲೆಗೂದಲಿನಿಂದ 2.5 ಮೀಟರ್ ದೂರವೆಳೆದು ಪರಾಕ್ರಮ ಮೆರೆದಿದ್ದ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications