ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾನ ಶಿಕ್ಷಣ ನೀಡುವ : ಬಿಎಸ್ಆರ್ ಕಾಂಗ್ರೆಸ್ ಪ್ರಣಾಳಿಕೆ

|
Google Oneindia Kannada News

 B.Sreeramulu
ಬಳ್ಳಾರಿ, ಏ. 20 : ವಿಧಾನಸಭೆ ಚುನಾವಣೆಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಪಕ್ಷದ ಅಧ್ಯಕ್ಷ ಬಿ.ಶ್ರೀರಾಮುಲು ಬಿಡುಗಡೆ ಮಾಡಿದ್ದಾರೆ. ಸರ್ವರಿಗೂ ಸಮಾನ ಶಿಕ್ಷಣ, ಗುಣಮಟ್ಟದ ಶಿಕ್ಷಣ ಎಂಬ ಧ್ಯೇಯವಾಕ್ಯದಡಿ ಪ್ರಣಾಳಿಕೆಯನ್ನು ರಚಿಸಲಾಗಿದ್ದು, ಕೃಷಿಗೆ ಹೆಚ್ಚಿನ ಆದ್ಯತೆ, ಕೊಳಗೇರಿಗಳ ಅಭಿವೃದ್ಧಿಗೆ ವಿಶೇಷ ಯೋಜನೆ ಮುಂತಾದ ಭರವಸೆಗಳನ್ನು ಪ್ರಣಾಳಿಕೆ ಒಳಗೊಂಡಿದೆ.

ಶನಿವಾರ ಬಳ್ಳಾರಿಯಲ್ಲಿ ಪಕ್ಷದ ಅಧ್ಯಕ್ಷ ಶ್ರೀರಾಮುಲು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಕೃಷಿ ಕಾರ್ಮಿಕರಿಗೆ ಉಚಿತ ರೈನ್ ಕೋಟ್, ಗಮ್ ಬೂಟ್ಸ್ ವಿತರಣೆ, ಬಡ ವಿದ್ಯಾರ್ಥಿನೀಯರಿಗೆ ಉಚಿತ ಲ್ಯಾಪ್ ಟಾಪ್, ಬಡ ಮಸ್ಲಿಂಮರಿಗೆ ಮನೆ ನಿರ್ಮಿಸಲು ಟಿಪ್ಪು ವಸತಿ ಯೋಜನೆ ಮುಂತಾದ ಕಾರ್ಯಕ್ರಮಗಳನ್ನು ಜನ ಕಲ್ಯಾಣಕ್ಕಾಗಿ ಜಾರಿಗೆ ತರಲಾಗುವುದು ಎಂದು ಶ್ರೀರಾಮುಲು ಹೇಳಿದರು.

ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು

* ಕೃಷಿ ಕಾರ್ಮಿಕರಿಗೆ ಉಚಿತ ರೈನ್ ಕೋಟ್, ಗಮ್ ಬೂಟ್ಸ್ ವಿತರಣೆ
* ಬಡ ವಿದ್ಯಾರ್ಥಿನೀಯರಿಗೆ ಉಚಿತ ಲ್ಯಾಪ್ ಟಾಪ್
* ಬಡ ಮಸ್ಲಿಂಮರಿಗೆ ಮನೆ ನಿರ್ಮಿಸಲು ಟಿಪ್ಪು ವಸತಿ ಯೋಜನೆ
* ತಾಲೂಕು ಮತ್ತು ಹೋಬಳಿ ಕೇಂದ್ರ ಅಭಿವೃದ್ಧಿಗೆ ವಿಶೇಷ ಯೋಜನೆ
* ಕೊಳಗೇರಿ ನಿವಾಸಿಗಳಿಗೆ 3 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ
* ರೈತ ಮಹಿಳೆಯರಿಗೆ ಗೃಹ ಕೈಗಾರಿಕೆಗಾಗಿ ಸಾಲ ವಿತರಣೆ
* 104 ತುರ್ತು ಮೊಬೈಲ್ ಆಸ್ಪತ್ರೆ ಸೇವೆ
* ರಾಜ್ಯದಲ್ಲಿ ಪ್ರತ್ಯೇಕ ಕೃಷಿ ನೀತಿ ಜಾರಿ
* ನರೇಗಾ ಯೋಜನೆ ಹಣ ನೇರವಾಗಿ ಬ್ಯಾಂಕ್ ಖಾತೆಗೆ
* ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಗೆ ಕ್ರಮ

ಬಿಜೆಪಿ ಪ್ರಣಾಳಿಕೆಬಿಜೆಪಿ ಪ್ರಣಾಳಿಕೆ

ಜೆಡಿಎಸ್ ಪ್ರಣಾಳಿಕೆಜೆಡಿಎಸ್ ಪ್ರಣಾಳಿಕೆ

ಕೆಜೆಪಿ ಪ್ರಣಾಳಿಕೆಕೆಜೆಪಿ ಪ್ರಣಾಳಿಕೆ

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
B. Sriramulu has released BSR Congress election manifesto in Bellary, On April 20. It promises education for all, mobile hospital for emergency services, education in English medium and other schemes for the poor, labors and farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X