ಚಿತ್ರಗಳಲ್ಲಿ: ಸ್ಫೋಟ, ಮುಷರಫ್, ಸುಷ್ಮಾ, ಸಚಿನ್
ಬೆಂಗಳೂರು, ಏ.18: ನ್ಯಾಯಾಧೀಶರ ನೇಮಕಾತಿಯಲ್ಲಿನ ಅವ್ಯವಹಾರ ಪ್ರಕರಣ ಸಂಬಂಧ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಅವರ ಬಂಧನಕ್ಕೆ ಪಾಕಿಸ್ತಾನದ ಕೋರ್ಟ್ ಗುರುವಾರ ಆದೇಶಿಸಿದೆ.
ಮುಷರಫ್ ಕಾರು ಹೇಗಿದೆ ಚಿತ್ರದಲ್ಲಿ ತಪ್ಪದೇ ನೋಡಿ, ಬಿಜೆಪಿ ಅಧಿನಾಯಕಿ ಸುಷ್ಮಾ ಸ್ವರಾಜ್ ಎಡವಿದಾಗ, ಕಾಶ್ಮೀರಿ ಪಂಡಿತರು ಹೋಮ ಹವನ ಮಾಡಿದ್ದು, ಉಡುಪಿಗೆ ಬಂದ ಕ್ರಿಕೆಟರ್ ರವಿಶಾಸ್ತ್ರಿ, ಖಾಸಗಿ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿದ್ದು ಹೇಗೆ, ಬೆಂಗಳೂರು ಸ್ಪೋಟ ನಡೆದ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮುಂತಾದ ಚಿತ್ರಗಳು ನಿಮ್ಮ ಮುಂದೆ..
ಅಕ್ಷರಗಳು ಹೇಳದ ಕಥೆಯನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಮಾಮೂಲಿ ರಾಜಕೀಯ ಸಮಾರಂಭ ಚಿತ್ರಗಳು, ಸಿನಿಮಾ ಸುದ್ದಿಗಳ ನಡುವೆ ಮಿಸ್ ಆಗುವ ವಿಷಯಗಳನ್ನು ಆಯ್ದು ಕೊಡಲಾಗಿದೆ. ಕಳೆದ ಎರಡು ದಿನಗಳ ಪ್ರಮುಖ ಹಾಗೂ ಕುತೂಹಲ ಭರಿತ ಚಿತ್ರಗಳನ್ನು ನೀವು ನೋಡಬಹುದು.

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಮಿಲಿಟರಿ ನಾಯಕ ಪರ್ವೇಜ್ ಮುಷರಫ್ ಅವರು ಹೈಕೋರ್ಟ್ ನಿಂದ ಗುರುವಾರ(ಏ.18) ರಭಸವಾಗಿ ಮುನ್ನುಗ್ಗುತ್ತಿರುವ ದೃಶ್ಯ, ಪೊಲೀಸ್ ಪಹರೆ ದಾಟಿ ತಮ್ಮ ಖಾಸಗಿ ಅಂಗರಕ್ಷರ ಜೊತೆ ಕೋರ್ಟಿನಿಂದ ಹೊರಬಿದ್ದ ದೃಶ್ಯ

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಟೋಕಿಯೋ: ಮ್ಯಾನ್ಮರ್ ವಿಪಕ್ಷ ನಾಯಕಿ, ನೊಬೆಲ್ ಶಾಂತಿ ಪುರಸ್ಕಾರ ವಿಜೇತೆ ಆಂಗ್ ಸಾನ್ ಸೂ ಕಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನು ಭೇಟಿ ಮಾಡಿದರು. ಸೂ ಕಿ ಅವರು ಪ್ರಸ್ತುತ ಜಪಾನ್ ಪ್ರವಾಸದಲ್ಲಿದ್ದಾರೆ.

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ನವದೆಹಲಿ: ರಾಜಕೀಯ ಜಂಜಾಟದ ನಡುವೆ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರ ಮೊಗದಲ್ಲಿ ಕಂಡ ಅಪರೂಪದ ಮಂದಹಾಸ. ದೆಹಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಭೂ ಕಬಳಿಕೆ ಸಂಬಂಧಿತ ಕಾಯಿದೆ ಬಗ್ಗೆ ಚರ್ಚಿಸಲು ತೆರಳುವಾಗ ಕಂಡಿದ್ದು ಹೀಗೆ

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಉಡುಪಿ: ಮಾಜಿ ಕ್ರಿಕೆಟರ್ ಹಾಲಿ ಕಾಮೆಂಟೇಟರ್ ರವಿಶಾಸ್ತ್ರಿ ಅವರು ಉಡುಪಿ ಜಿಲ್ಲೆಯ ಕರವಲು ನಲ್ಲಿರುವ ನಾಗ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಕೊಲಂಬಿಯಾ ಮೂಲದ ಪಾಪ್ ಗಾಯಕಿ ಶಕೀರಾ ಅವರು ಪ್ಯಾರೀಸ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಾಗ ಕೊಟ್ಟ ಪೋಸ್

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಬೆಂಗಳೂರು: NIA ಅಧಿಕಾರಿಗಳು ಶ್ವಾನದಳದೊಂದಿಗೆ ಮಲ್ಲೇಶ್ವರಂ ನಲ್ಲಿ ನಡೆದ ಸ್ಪೋಟದ ಸುಳಿವು ಬೆನ್ನು ಹತ್ತಿ ತಿರುಗುವಾಗ ಕಂಡ ದೃಶ್ಯ

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಶ್ರೀನಗರ: ಕಾಶ್ಮೀರಿ ಪಂಡಿತರು ದುರ್ಗಾ ಅಷ್ಟಮಿ ಅಂಗವಾಗಿ ದುರ್ಗಾ ನಾಗ್ ದೇಗುಲದಲ್ಲಿ ಹವನ ಪೂಜೆ ಸಲ್ಲಿಸುತ್ತಿರುವುದು. PTI Photo by S Irfan

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ನವದೆಹಲಿ: ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರು ಐಪಿಎಲ್ 6 ಪಂದ್ಯಗಳ ನಡುವೆ ಬಿಡುವು ಮಾಡಿಕೊಂಡು ಡಿಜಿಟಲ್ ನ್ಯೂಸ್ ಪೇಪರ್ enewspaper of india ಗೆ ಚಾಲನೆ ನೀಡಿದರು. PTI Photo by Vijay Verma

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಶ್ರೀನಗರದಲ್ಲಿ ಪ್ರತಿಭಟನೆ ನಿರತ ಗುತ್ತಿಗೆ ಸರ್ಕಾರಿ ನೌಕರರನ್ನು ಬಂಧಿಸುತ್ತಿರುವ ಪೊಲೀಸರು. ಸಂಬಳ ಏರಿಕೆಗಾಗಿ ಸರ್ಕಾರಿ ನೌಕರರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. PTI Photo by S Irfan

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಗುವಾಹಟಿ: ಹಿಮಾಶ್ರೀ ಸೈಕಿಯಾ, ಬಿಹು ಕುವಾರಿ ಗಿತಾಮೊನಿ ದತ್ತ ಮಧ್ಯದಲ್ಲಿ ಸಂಗೀತಾ ಗೊಗಯ್ ರಂಗೋಲಿ ಬಿಹು ಸ್ಪರ್ಧೆ ವಿಜೇತರ ಸಂಭ್ರಮ

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಸರ್ವ ಪಕ್ಷ ಸಭೆಗೆ ಬೇಗ ಬೇಗನೆ ಹೊರಟಾಗ ಎಡವಿದರು. ಪುಣ್ಯಕ್ಕೆ ಪಕ್ಕದಲ್ಲಿ ಅಧಿಕಾರಿಯೊಬ್ಬರ ಆಸರೆ ಸಿಕ್ಕು ಬೀಳುವುದರಿಂದ ತಪ್ಪಿಸಿಕೊಂಡರು. ಸುಷ್ಮಾಜೀ ಎಡವಿದ್ದನ್ನು ಕಮಲ್ ಸಿಂಗ್ ತಮ್ಮ ಕೆಮೆರಾದಲ್ಲಿ ಸೆರೆಹಿಡಿದು ನಮಗೆ ಕಳಿಸಿದ್ದಾರೆ.

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಗಂಭೀರ ವದನ: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು "India's Descent into Fascism : How Do We Stop It?"ಎಂಬ ವಿಷಯವಾಗಿ ನಡೆದ ಸಮಾವೇಶದಲ್ಲಿ ಕಾಣಿಸಿಕೊಂಡಿದ್ದು ಹೀಗೆ PTI Photo by Vijay Kumar Joshi

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಮುಂಬೈ : ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿದ ಮುಂಬೈ ಪಾಲಿಕೆ ವಿರುದ್ಧ ಆಕ್ರೋಶಗೊಂಡ ವಸತಿ ಹೀನರು ಥಾಣೆಯಲ್ಲಿ ಬಸ್ ಗಾಜು ಪುಡಿಗೈಯುತ್ತಿರುವುದು

ಇಂದು ಚಿತ್ರಗಳಲ್ಲಿ ಕಂಡ ಸುದ್ದಿಗಳು
ಟೆಕ್ಸಾಸ್ : ರಾಸಯನಿಕ ಘಟಕದ ಬಳಿ ಸ್ಫೋಟಗೊಂಡಾಗ ತುರ್ತು ಸೇವಾ ಕಾರ್ಯಕರ್ತರು ಧಾವಿಸಿದ್ದನ್ನು ವ್ಯಕ್ತಿಯೊಬ್ಬ ನೋಡುತ್ತಿರುವುದು
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications