ಬಿಜೆಪಿ ಪಟ್ಟಿ- 2: ಸೋಮಣ್ಣ ಭರ್ಜರಿ ಡೀಲ್
ಬೆಂಗಳೂರು, ಏ.9: ವಿ (ವಸತಿವೀರ) ಸೋಮಣ್ಣ ಬಿಜೆಪಿಯಲ್ಲೇ ಮುಂದುವರಿಯುವುದಾಗಿ ಹೇಳಿ, ಭರ್ಜರಿ ಡೀಲ್ ಕುದುರಿಸಿದಂತೆ ಭಾಸವಾಗುತ್ತಿದೆ. ಬಿಜೆಪಿ ಅಭ್ಯರ್ಥಿಗಳ 2ನೆಯ ಪಟ್ಟಿ ಇನ್ನೇನು ರಾತ್ರಿ ವೇಳೆಗೆ ಬಿಡುಗಡೆಯಾಗಲಿದೆ. ಅದರಲ್ಲಿ, ಬಿಜೆಪಿಯಲ್ಲೇ ಉಳಿಯಲು ಸೋಮಣ್ಣ ಏನೆಲ್ಲ ಕಸರತ್ತು ನಡೆಸಿದ್ದಾರೆ ಎಂಬುದು ಸ್ಪಷ್ಟಗೊಳ್ಳಲಿದೆ.
ಅದಕ್ಕೂ ಮುನ್ನ, ಸೋಮಣ್ಣ ಅವರು ಬೆಂಗಳೂರಿನಲ್ಲಿ ಪಕ್ಷದ ಉಸ್ತುವಾರಿಯನ್ನು ಅಶೋಕ್ ಅವರಿಂದ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಂತಿದೆ. ಮುಖ್ಯವಾಗಿ ಬಿಬಿಎಂಪಿ ಮೇಯರ್ ಗಿರಿಗೆ ಸಂಬಂಧಿಸಿದಂತೆ ಅಶೋಕ್ ಒಂದಷ್ಟು ಕರಾಮತ್ತು ತೋರಿದ್ದರು.
ಮಹಿಳಾ ಮೀಸಲಾತಿಗೇ ಕೊಕ್ ಕೊಟ್ಟು ತಮ್ಮ ಶಿಷ್ಯ, ಬಸವನಗುಡಿಯ ಕಟ್ಟೆ ಸತ್ಯ ಅವರನ್ನು ಮೇಯರ್ ಆಗಿ ಪ್ರತಿಷ್ಠಾಪಿಸಲು ಅಶೋಕ್ ಹವಣಿಸಿದ್ದರು. ತನ್ಮೂಲಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪ್ರಾಬಲ್ಯ ಮೆರೆಯುವುದು ಅಶೋಕ್ ಅವರ ಗುರಿಯಾಗಿತ್ತು.

ಆದರೆ ದಿನ ಬೆಳಗಾಗುವುದರೊಳಗಾಗಿ ಎಚ್ಚೆತ್ತ ಸರಕಾರ ಮತ್ತೆ ಮಹಿಳೆಗೇ ಮಣೆ ಹಾಕಲು ನಿರ್ಧರಿಸಿತು. ಹಾಗಾಗಿ ಈ ಬಾರಿ ನಿಯಮದಂತೆ ಮಹಿಳೆಯನ್ನೇ ಮೇಯರ್ ಆಗಿ ಮಾಡುವ ತೀರ್ಮಾನ ಹೊರಬಿತ್ತು.
ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಸಚಿವ ಸೋಮಣ್ಣ, ತಮ್ಮ ಕ್ಯಾಂಡಿಡೇಟ್, ಮೂಡಲಪಾಳ್ಯದ ಶಾಂತಕುಮಾರಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅದಕ್ಕೆ ತಮ್ಮ ಸಾಮ್ರಾಜ್ಯದ ಗೋವಿಂದರಾಜನಗರ ಮತ್ತು ವಿಜಯನಗರದಲ್ಲಿನ ಕಾರ್ಪೊರೇಟರುಗಳಿಂದಲೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೇಲೆ ಒತ್ತಡ ಹಾಕಿಸುವಲ್ಲಿ ಯಶಸ್ವಿಯಾಗಿದ್ದು, ಶಾಂತಕುಮಾರಿ ಅವರ ಹೆಸರನ್ನು ಮೇಯರ್ ಗಿರಿಗೆ ಫೈನಲ್ ಮಾಡಿಕೊಂಡಿದ್ದಾರೆ.
ಇದರಿಂದ ಸೋಮಣ್ಣ ಒಂದೇ ಏಟಿಗೆ ನಾಲ್ಕಾರು ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ಒಂದು, ತಮ್ಮದೇ ಕ್ಯಾಂಡಿಡೇಟ್ ಅನ್ನು ಮೇಯರ್ ಆಗಿ ಮಾಡುವುದು. ತನ್ಮೂಲಕ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾರ್ಪೊರೇಟರುಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಆಟವಾಡಿಸುವುದು ಅವರ ಗುರಿಯಾಗಿದೆ.
ಈ ಮಧ್ಯೆ, ಗುಪ್ತ ಅಜೆಂಡಾ ಆಗಿ ಗೋವಿಂದರಾಜನಗರ ಮತ್ತು ವಿಜಯನಗರದಲ್ಲಿ ತಮ್ಮ ಪ್ರಬಲ ಎದುರಾಳಿಯಾದ ಕೃಷ್ಣಪ್ಪ ಕುಟುಂಬಕ್ಕೆ ಸರಿಯಾದ ಪೆಟ್ಟು ನೀಡಿ, ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿನ ಹಾದಿಯನ್ನು ಸುಗಮಗೊಳಿಸುವ ಆಶಯವೂ ಇದೆ.
ಹಿನ್ನೆಲೆಯನ್ನು ಹೀಗೆ ತಮಗೆ ಅನುಕೂಲವಾಗುವಂತೆ ಸಿದ್ಧಪಡಿಸಿಕೊಂಡಿರುವ ಸೋಮಣ್ಣ, ಗೋವಿಂದರಾಜ ನಗರದ ಬದಲು ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾಣಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ, ಇಂದು ಸಂಜೆ ಬಿಡುಗಡೆಯಾಗುವ ಪಟ್ಟಿಯಲ್ಲಿ ಸೋಮಣ್ಣ ಹೆಸರು ಗೋವಿಂದರಾಜ ನಗರದ ಬದಲು ವಿಜಯನಗರ ಕ್ಷೇತ್ರದಲ್ಲಿ ಕಾಣಿಸಿಕೊಂಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೇ ವೇಳೆ, ತಮ್ಮ ಕಟ್ಟಾ ಬೆಂಬಲಿಗ, ಕಾರ್ಪೊರೇಟರ್ ರವೀಂದ್ರ ಅವರಿಗೆ ಗೋವಿಂದರಾಜ ನಗರದ ಟಿಕೆಟ್ ದಕ್ಕಿಸಿಕೊಳ್ಳುವಲ್ಲಿಯೂ ಅವರು ಯಶಸ್ವಿಯಾಗಿದ್ದಾರೆ ಎಂಬುದರೊಂದಿಗೆ 'ಸೋಮಣ್ಣ ಬಿಜೆಪಿಯಲ್ಲೇ ಉಳಿಯುವುದರ ಹಿಂದಿನ ರಹಸ್ಯ ಏನು?' ಎಂಬುದು ಬಯಲಾಗಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications