ಮೋದಿಯೊಬ್ಬರೇ ದೇಶದ ಏಕೈಕ ಪ್ರಾಮಾಣಿಕ ರಾಜಕಾರಣಿ
ಗಾಂಧಿನಗರ, ಏ.8: ಗುಜರಾತಿನ ಬಿಜೆಪಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮತ್ತೊಂದು ಹೊಗಳಿಕೆ/ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನರೇಂದ್ರ ಮೋದಿಯನ್ನು ಭ್ರಷ್ಟರನ್ನಾಗಿಸಲು ಸಾಧ್ಯವಿಲ್ಲ. ಹೇಳಬೇಕು ಅಂದರೆ ಅವರು ಭಾರತದ ಏಕೈಕ ಪ್ರಾಮಾಣಿಕ ರಾಜಕಾರಣಿ ಮೋದಿ ಎಂಬ ಜಾಗತಿಕ ಮಟ್ಟದ ಮನ್ನಣೆಗೆ ಪಾತ್ರರಾಗಿದ್ದಾರೆ.
ಖುದ್ದು ಅಮೆರಿಕದಿಂದಲೇ ಈ ಸತ್ಯ ಹೊರಬಿದ್ದಿದೆ. ಅಮೆರಿಕದ ಗುಪ್ತ ಸತ್ಯಗಳನ್ನು ಜಗತ್ತಿನೆದುರು ನಗ್ನಗೊಳಿಸಿದ ವಿಕಿಲೀಕ್ಸ್ ಮತ್ತು ಅಸಾಂಜೆ ಗೊತ್ತಲ್ಲಾ? ಅವರೇ ಮೋದಿ ಕುರಿತಾದ ಈ ಸತ್ಯವನ್ನೂ ಹೊರಹಾಕಿದ್ದಾರೆ.

ಏನಪಾ ಅಂದರೆ ಮೋದಿಗೆ ವೀಸಾ ಕೊಡೋದಿಲ್ಲ ಎಂದು ಅಮೆರಿಕ ಮೊಂಡುವಾದ ಮಾಡುತ್ತಾ ಬಂದಿದೆ. ಈ ವಿಷಯದಲ್ಲಿ ಮೋದಿಗೆ ಆಮಿಷವೊಡ್ಡಲು ಅಮೆರಿಕದ ರಾಯಭಾರ ಮಟ್ಟದ ಅಧಿಕಾರಿಯೊಬ್ಬರು ಯತ್ನಿಸಿ ಪಡಿಪಾಟಿಲು ಬಿದ್ದಿದ್ದಾರೆ ಎಂದು ವಿಕಿಲೀಕ್ಸ್ ಕೇಬಲ್ಸ್ ತಿಳಿಸಿದೆ.
2006ರ ನವೆಂಬರ್ 6: ಮುಂಬೈನ ಕಾನ್ಸುಲ್ ಜನರಲ್ ಮೈಖೇಲ್ ಎಸ್ ಓವೆನ್ ಅವರು ಅಮೆರಿಕದ ಶ್ವೇತಭವನಕ್ಕೆ ರಹಸ್ಯ ಸಂದೇಶವೊಂದನ್ನು ಕಳಿಸಿದ್ದರು. ಮೋದಿ ಅವರು ತಮ್ಮ ಪಕ್ಷದ ರಾಷ್ಟ್ರೀಯ ನಾಯಕರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಮಾನವ ಹಕ್ಕುಗಳ ವಿಷಯ ಬಂದಾಗ ಆತನೊಂದಿಗೆ ನೇರವಾಗಿ ಭಾಗಿಯಾಗುವ ಅಗತ್ಯವಿದೆ.
ಮೋದಿಯ ಬಗ್ಗೆ ಮತ್ತಷ್ಟು ಬರೆಯುತ್ತಾ ಓವೆನ್ ಹೀಗೆ ಹೇಳಿದ್ದಾರೆ: ತಾನು ಭ್ರಷ್ಟಚಾರಿ ಅಲ್ಲ, ಪರಿಣಾಮಕಾರಿ ಆಡಳಿತಗಾರ ಎಂಬುದನ್ನು ಮೋದಿ ಯಶಸ್ವಿಯಾಗಿ ನಿರೂಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ. ಆತನಲ್ಲಿ ಅಳವಾದ ವಾಣಿಜ್ಯ ಸಂಸ್ಕೃತಿ-ನೀತಿ ಬೇರೂರಿದೆ. ಬಹುಸಂಖ್ಯಾತ ಹಿಂದೂಗಳ ಹಿತಾಸಕ್ತಿಗಳನ್ನು ಕಾಯುವ ಕಾನೂನು ಸುವ್ಯವಸ್ಥೆ ಪರಿಪಾಲಕ ರಾಜಕಾರಣಿ ಆತ. ಪ್ರಗತಿಪರ ಗುಜರಾತಿನ ಮುಖ್ಯಮಂತ್ರಿ ಮೋದಿ ಪ್ರಜ್ಞಾವಂತರು, ಬಾಯಿಬಡುಕ ಅಲ್ಲ.
ಈ ಗುಪ್ತ ಕೇಬಲ್ ಸಂದೇಶವನ್ನು ಸ್ವತಃ ನರೇಂದ್ರ ಮೋದಿಯೇ ಬಹಿರಂಗ ಮಾಡಿದ್ದಾರೆ. ಬಿಜೆಪಿಯ ವಿಕಿಲೀಕ್ಸ್ ಸಂದೇಶವನ್ನು ಉಲ್ಲೇಖಿಸಿ, ಮೋದಿಯನ್ನು ಕೊಂಡಾಡಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications