ಯುವಕನ ಕಪಾಳಕ್ಕೆ ಹೊಡೆದ ಕಾಂಗೈ ನರೇಂದ್ರಸ್ವಾಮಿ
ಮಂಡ್ಯ, ಮಾ.18: ಇನ್ನೇನು ಚುನಾವಣೆ ವೇಳಾಪಟ್ಟಿ ಇದೇ ವಾರ ಘೋಷಣೆಯಾಗಲಿದೆ. ಚುನಾವಣೆ ಕಾವು ಏರತೊಡಗಿದೆ. ಆದರೆ ರಾಜ್ಯದಲ್ಲಿ ಚುನಾವಣೆ ಪೂರ್ವ ನಡೆಯುತ್ತಿರುವ ಘಟನೆಗಳು ಬೆಚ್ಚಿಬೀಳಿಸುವಂತಿದೆ. ಒಂದೆಡೆ ನೀಲಿಚಿತ್ರ ಪ್ರೇಕ್ಷಕ ಸಿಸಿ ಪಾಟೀಲ್ ಅಂಗರಕ್ಷಕನಿಂದಲೇ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಮಲಗಿದ್ದರೆ ಮತ್ತೊಂದೆಡೆ ಮಂಡ್ಯದಲ್ಲಿ ಮತ್ತೊಬ್ಬ ಶಾಸಕ ತನ್ನ 'ಕರಾ'ಮತ್ತು ತೋರಿ, ಅಮಾಯಕ ಯುವಕನ ಕೆನ್ನೆಗೆ ಫಟೀರನೆ ಬಾರಿಸಿ, ತಮ್ಮ ದರ್ಪ ತೋರಿದ್ದಾರೆ.
ಯಾರಪ್ಪಾ ಆ ಮಂಡ್ಯದ ಕಲಿ ಅಂದರೆ ಕಾಂಗ್ರೆಸ್ ಹೊಸಿಲಿನ ಮೇಲೆ ನಿಂತಿರುವ ಪಕ್ಷೇತರ ಶಾಸಕ ನರೇಂದ್ರಸ್ವಾಮಿ ಎಂಬ ಉತ್ತರವಿದೆ. ಈತನ ಉತ್ತರಪೌರುಷ ಹೇಗಿದೆಯೆಂದರೆ 'ಗ್ರಾಮಕ್ಕೆ ವಿದ್ಯುತ್ ಮತ್ತು ಕುಡಿಯುವ ನೀರು ಸರಿಯಾಗಿ ನೀಡುತ್ತಿಲ್ಲ ಅಂದ ಮೇಲೆ ಜನಪ್ರತಿನಿಧಿಯಾಗಿ ನೀವೇನು ಮಾಡುತ್ತಿದ್ದೀರಿ?' ಎಂದು ಬಿಸಿರಕ್ತದ ಯುವಕನೊಬ್ಬ ಕೇಳಿದ್ದೇ ತಡ, ಅದೆಲ್ಲಿಂದ ಉರಿದುಕೊಂಡರೋ ಶಾಸಕ ಸಾಹೇಬರು ಫಟೀರಂತ ಆ ಯುವಕನ ಕೆನ್ನೆಗೆ ಬಾರಿಸಿಯೇ ಬಿಟ್ಟರು.

ಯುವಕ ಏಟು ತಿಂದಿದ್ದನ್ನು ನೋಡಿ ಕರುಳು ಚುರುಕ್ ಎನಿಸಿದ ಹಿರಿಯರೊಬ್ಬರು 'ಅಲ್ಲ, ಪಕ್ಷೇತರ ನರೇಂದ್ರ ಇನ್ನೂ ಕಾಂಗ್ರೆಸ್ ಸೇರಿಲ್ಲ, ಆಗಲೇ ಕಾಂಗ್ರೆಸ್ ಸಂಸ್ಕೃತಿ ಮೈಗೂಡಿಸಿಕೊಂಡರಾ?' ಎಂದು ಪ್ರಶ್ನಿಸಿದ್ದಾರೆ. Shame on you Mr. MLA.
ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ದಿಗಿಲಿಗೆ ಬಿದ್ದು ಮುಖ್ಯಮಂತ್ರಿಯಾದಿಯಾಗಿ ಶಾಸಕ ಮಹಾಮಹಿಮರು ಆತುರಾತುರವಾಗಿ ಹೋದಕಡೆಯಲ್ಲೆಲ್ಲಾ ತಮ್ಮ ಶಂಕು ನೆಡುತ್ತಿದ್ದಾರೆ. ಗಮನಿಸಿ, ಇದು ಬರೀ ಶಂಕುವಿನ ಸ್ಥಾಪನೆಯಷ್ಟೇ. ಪೂರ್ಣಗೊಂಡ ಕಾಮಗಾರಿ ಯೋಜನೆಗಳಲ್ಲ.
ಶಾಸಕ ಪಿಎ ನರೇಂದ್ರ ಸ್ವಾಮಿಯೂ ಇದಕ್ಕೆ ಹೊರತಲ್ಲ. ಶನಿವಾರ ಏನಾಯಿತೆಂದರೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಹರಿಜನ ಕಾಲೊನಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಗುದ್ದಲಿ ಪೂಜೆಯನ್ನು ಆತುರಾತುರವಾಗಿ ನೇರವೇರಿಸಲು ಮುಂದಾಗಿದ್ದಾರೆ.
ಗ್ರಾಮದ ಗೋಪಾಲ ಬಿನ್ ಕುಂಡಿ ಚನ್ನೇಗೌಡ 'ಸ್ವಾಮಿ ಕುಡಿಯೋಕ್ಕೆ ನೀರಿಲ್ಲ, ವಿದ್ಯುತ್ ಇಲ್ಲ. ಶಾಸಕರಾಗಿ ನೀವೇನು ಮಾಡುತ್ತಿದ್ದೀರಿ?' ಎಂದು ತರಾಟೆಗೆ ತೆಗೆದುಕೊಂಡಿದ್ದಾನೆ. ಅಷ್ಟೇ, ಅದೆಲ್ಲಿತ್ತೋ ಕೋಪ ಶಾಸಕ ಸಾಹೇಬರು ಆತನಿಗೆ ಸಮಾ ಬಾರಿಸಿದ್ದಾರೆ.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications