ಶೋಭಾಗೆ ಬ್ರೇಕ್: ಕೆಜೆಪಿ ಬಸ್ ಹತ್ತುವ 10 ಮಂದಿ ಇವರೇ
ಬೆಂಗಳೂರು, ಮಾ.15: ಮಾಜಿ ಸಚಿವ, ಕೆಜೆಪಿಯ ಹಿರಿಯಣ್ಣ ಉದಾಸಿ ಅವರ ಮಧ್ಯಸ್ಥಿಕೆಯಲ್ಲಿ ಬಿಜೆಪಿಯ ಅನೇಕ ಶಾಸಕ/ಸಚಿವರು ಕೆಜೆಪಿಗೆ ಸೇರ್ಪಡೆಯಾಗಲು ಒಲವು ತೋರಿದ್ದಾರಾದರೂ *Conditions apply ಅಂದಿದ್ದಾರೆ.
ಏನಪ್ಪಾ ಅಂಥಾ ಕಂಡೀಷನ್ಸು, ಏನು ಮುಂದಿನ ಚುನಾವಣೆಗೆ ಟಿಕೆಟ್ ಕೇಳಿದ್ದಾರಾ? ಅಥವಾ ದುಡ್ಡು ಕಾಸು ಏನಾದರೂ ಕೇಳಿದ್ದಾರಾ ಅಂತಂದರೆ... ಅಂಥಾದ್ದೇನೂ ಇಲ್ಲ. ನಮ್ದು ಒಂದೇ ಕಂಡೀಷನ್ನು. ಆಯಮ್ಮ ಶೋಭಾರ ಆರ್ಭಟ/ಸರ್ವಾಧಿಕಾರವನ್ನು ವಸಿ ತಡೆಗಟ್ಟಿ ಎಂದು ಪಿಸುಗುಟ್ಟಿದ್ದಾರೆ ಆ ಶಾಸಕ ಮಿತ್ರರು.
ಕಳೆದೈದು ವರ್ಷಗಳಿಂದ ಯಡಿಯೂರಪ್ಪ ಜತೆಗೇ ಬಲವಾಗಿ ಗುರುತಿಸಿಕೊಂಡಿದ್ದು, ಕೆಜೆಪಿ ಸ್ಥಾಪನೆಯ ಹಂತದಲ್ಲಿ ಹಿಂದೆ ಸರಿದಿದ್ದ ಆ ಸಚಿವ-ಶಾಸಕರು ಶೀಘ್ರದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದು, ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ನಂತರ ತಮ್ಮ ಪಕ್ಷ ನಿಷ್ಠೆಯನ್ನು ಬದಲಾಯಿಸುವ ಸಂಭವ ದಟ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಮತ್ತು ಉಮೇಶ್ ಕತ್ತಿ ಅವರು ಗುರುವಾರ ತಡರಾತ್ರಿವರೆಗೂ ಕೆಜೆಪಿಯ ಹಿರಿಯಣ್ಣ ಉದಾಸಿ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ಮುರುಗೇಶ್ ರುದ್ರಪ್ಪ ನಿರಾಣಿ
ಬಾಗಲಕೋಟ ಬೀಳಗಿ ಕ್ಷೇತ್ರದಿಂದ 2ನೇ ಬಾರಿಗೆ ವಿಧಾಸನಭೆ ಪ್ರವೇಶಿಸಿದವರು. ಪ್ರಸ್ತುತ, ಬೃಹತ್ ಕೈಗಾರಿಕೆ ಸಚಿವರು.

ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿಯ ಶಿಗ್ಗಾಂವ್ ಕ್ಷೇತ್ರದ ಶಾಸಕ, ಹಾಲಿ ಜಲಸಂನ್ಮೂಲ ಸಚಿವ, ಮಾಜಿ ಮುಖ್ಯಮಂತ್ರಿ ಎಸ್ಆರ್ ಬೊಮ್ಮಾಯಿ ಅವರ ಪುತ್ರ,

ಉಮೇಶ್ ವಿಶ್ವನಾಥ ಕತ್ತಿ
ಬೆಳಗಾವಿಯ ಹುಕ್ಕೇರಿ ಕ್ಷೇತ್ರ, ಹಾಲಿ ಕೃಷಿ ಸಚಿವ

ಎಂಪಿ ರೇಣುಕಾಚಾರ್ಯ
ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ. ಅಬಕಾರಿ ಸಚಿವ

ಮಾಡಾಳ್ ಕೆ ವಿರೂಪಾಕ್ಷಪ್ಪ
ದಾವಣಗೆರೆಯ ಚನ್ನಗಿರಿ ವಿಧಾನಸಭೆ ಕ್ಷೇತ್ರದ ಶಾಸಕ.

ಸಿಸಿ ಪಾಟೀಲ
ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರದ ಶಾಸಕ, ಮಾಜಿ ಸಚಿವ

ಬಿದರೂರು ಶ್ರೀಶೈಲಪ್ಪ ವಿರೂಪಾಕ್ಷಪ್ಪ
ಬಿದರೂರು ಶ್ರೀಶೈಲಪ್ಪ ವಿರೂಪಾಕ್ಷಪ್ಪ
ಗದಗ ವಿಧಾನಸಭೆ ಕ್ಷೇತ್ರದ ಶಾಸಕ

ರಾಮಣ್ಣ ಸೋಬೆಪ್ಪ ಕಾಳಪ್ಪ ಲಮಾಣಿ
ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭೆ ಕ್ಷೇತ್ರದ ಶಾಸಕ, ಮಾಜಿ ಸಚಿವ

ಎಸ್ ವಿ ರಾಮಚಂದ್ರ
ದಾವಣಗೆರೆಯ ಜಗಳೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ (2011) ಆರಿಸಿಬಂದವರು. ಹಟ್ಟಿ ಚಿನ್ನದ ಗಣಿಯ ಮಾಜಿ ಅಧ್ಯಕ್ಷ

ಚಂದ್ರಕಾಂತ್ ಗುರಪ್ಪ ಬೆಲ್ಲದ
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications