ಕೋಟಿ ಕೋಟಿ ಚಿನ್ನ ಕದ್ದು ಸಿಕ್ಕಿಬಿದ್ದ ಕೊಲ್ಲಿ ರಾಯಭಾರಿ

ಯಾಕಪ್ಪಾ ಅಂದರೆ ಈ ಉನ್ನತಾಧಿಕಾರಿ ವೃತ್ತಿ ಗೌರವ ಕಾಪಾಡದೆ ತನ್ನೊಂದಿಗೆ ಅಕ್ರಮವಾಗಿ 37 ಕೆಜಿ ಚಿನ್ನವನ್ನು ತಂದಿದ್ದರು. ಖಚಿತ ಸುಳಿವಿನ ಮೇರೆಗೆ ಬೇಹು ಅಧಿಕಾರಿಗಳು ಆತನನ್ನು ತಡೆದು, ತಪಾಸಣೆಗೆ ಮುಂದಾದಾಗ 'ತಾನು ರಾಯಭಾರ ಕಚೇರಿಯ ಉನ್ನತಾಧಿಕಾರಿಯೆಂದೂ, ತನ್ನನ್ನು ಹಾಗೆಲ್ಲ ತಡವಿಕೊಳ್ಳುವಂತಿಲ್ಲ' ಎಂದು ರಾಜತಾಂತ್ರಿಕ ಪ್ರತಿರೋಧವನ್ನು ಒಡ್ಡಿದ್ದಾನೆ. ಆದರೆ ಅಧಿಕಾರಿಗಳು ಜಗ್ಗಿಲ್ಲ.
ಆತನು ತಂದಿದ್ದ ಕಳ್ಳಮಾಲಿನ ಮೌಲ್ಯ ಬರೋಬ್ಬರಿ 11 ಕೋಟಿ ರೂ. ಹಾಗಾಗಿ ಕಂದಾಯಾಧಿಕಾರಿಗಳು ಯಾಮಾರುವಂತಿರಲಿಲ್ಲ. ಆತ ಸೂಟ್ ಕೇಸಿನಲ್ಲಿ 37 ಕೆಜಿ ಚಿನ್ನವನ್ನು ಸಾಗಿಸುತ್ತಿದ್ದ. ಅಗತ್ಯ ತಪಾಸಣಾ ಕ್ರಮಗಳ ನಂತರ ಅಧಿಕಾರಿಗಳು ಆರೋಪಿಯನ್ನು ಬಿಟ್ಟುಕಳಿಸಿದ್ದಾರೆ. ಹೆಚ್ಚಿನ ಮಾಹಿತಿ/ವಿಚಾರಣೆಗಾಗಿ ಕಂದಾಯಾಧಿಕಾರಿಗಳು ಪ್ರಕರಣವನ್ನು ವಿದೇಶಾಂಗ ವ್ಯವಹಾರ ಸಚಿವಾಲಯದ ಗಮನಕ್ಕೆ ತಂದಿದ್ದಾರೆ.
ಆದರೆ ಆರೋಪಿ ಜತೆ ಪ್ರಯಾಣಿಸುತ್ತಿದ್ದ ದೆಹಲಿ ಉದ್ಯಮಿಯನ್ನು ಇದೇ ವೇಳೆ ಬಂಧಿಸಿದ್ದಾರೆ. ಆತ ಪ್ರಕರಣದಲ್ಲಿ ರಾಯಭಾರ ಕಚೇರಿ ಉನ್ನತಾಧಿಕಾರಿಗೆ ನೆರವು ನೀಡಿದ್ದಾನೆ ಎಂದು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ವಿಯೆನ್ನಾ ಒಪ್ಪಂದದಂತೆ ಯಾವುದೇ ರಾಜತಾಂತ್ರಿಕ ಅಧಿಕಾರಿ ಅಪರಾಧ ಮತ್ತು ನಾಗರಿಕ ಆಡಳಿತ ವಿಚಾರಣೆಯ ಪರಿಧಿಗೆ ಬರುವುದಿಲ್ಲ.












Click it and Unblock the Notifications