ರೈಲು : ಕರ್ನಾಟಕದ ಆಸೆಗಳು, ನಿರಾಸೆಗಳು

Railway Budget 2013 Karnataka Share
ಬೆಂಗಳೂರು, ಫೆ. 26: ರೈಲ್ವೆ ಬಜೆಟ್ ಎಂದರೆ ಕರ್ನಾಟಕಕ್ಕೆ ಯಾವಾಗಲೂ ಮೋಸ ಗ್ಯಾರಂಟಿ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕರ್ನಾಟಕದ ಪಾಲಿಗೆ ಮತ್ತೊಮ್ಮೆ ನಿರಾಶಾದಾಯಕ ಬಜೆಟ್ ಸಿಕ್ಕಿದೆ. ಹೊಸ ಮಾರ್ಗ ಸಮೀಕ್ಷೆ ಹಾಗೂ ಇಂಟರ್ ಸಿಟಿ ಘೋಷಣೆ ಬಿಟ್ಟರೆ ಕರ್ನಾಟಕದಲ್ಲಿ ಪ್ರಮುಖವಾಗಿ ನಿರೀಕ್ಷಿಸಿದ ಪ್ರಮಾಣದಲ್ಲಿ ಯಾವುದೇ ಯೋಜನೆಗಳು, ಪ್ರಯೋಜನಗಳು ಲಭ್ಯವಾಗಿಲ್ಲ.

ಸಿಕ್ಕಿದ್ದೇನು: ಕರ್ನಾಟಕಕ್ಕೆ 2 ಹೊಸ ಎಕ್ಸ್ ಪ್ರೆಸ್ ರೈಲು ಮಾತ್ರ

* ಹುಬ್ಬಳ್ಳಿ-ಮುಂಬೈ ಎಕ್ಸ್‌ಪ್ರೆಸ್ ವಯಾ ಮೀರಜ್, ಪುಣೆ (ವಾರಕ್ಕೊಮ್ಮೆ)

* ಬೆಂಗಳೂರು - ಮಂಗಳೂರು ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
* ಶ್ರೀನಿವಾಸಪುರ-ಮದನಪಲ್ಲಿ ಹೊಸ ರೈಲು ಮಾರ್ಗ* ಗದಗ್ -ವಾಡಿ ಹೊಸ ಮಾರ್ಗ
* ಬಿಜಾಪುರ -ಕಿರಣ್ ದುಲ್ ಹೊಸ ಮಾರ್ಗ ಸಮೀಕ್ಷೆ
* ತಾಳಗುಪ್ಪ- ಶಿವಮೊಗ್ಗ ಪ್ಯಾಸೆಂಜರ್ ರೈಲು ಪ್ರತಿದಿನ ಸಂಚಾರ
* ಉಡುಪಿ- ಕಾರವಾರ-ಮಡಗಾಂವ್ ಮಂಗಳೂರು ಇಂಟರ್ ಸಿಟಿ ಏಕ್ಸ್ ಪ್ರೆಸ್
* ಪ್ರತಿದಿನ ತಿರುಚಿನಾಪಳ್ಳಿ- ಮಧುರೈ- ನಾಗರಕೋಯಿಲ್ ಬೆಂಗಳೂರು
* ಮೀರಜ್ -ಪುಣೆ- ಹುಬ್ಬಳ್ಳಿ
* ಯಶವಂತಪುರ -ಬಾಗಲಕೋಟೆ ರೈಲು ಮೈಸೂರಿಗೆ ವಿಸ್ತರಣೆ
* ವಾರಕ್ಕೊಮ್ಮೆ ಬೆಂಗಳೂರು- ಮಂಗಳೂರು ಎಕ್ಸ್ ಪ್ರೆಸ್ ಸಂಚಾರ
* ಗುಲ್ಬರ್ಗಾ-ಸುಲ್ತಾನ್ ಪುರ ರೈಲು ಈ ವರ್ಷ ಪೂರ್ಣ
* ಪಂಡರಾಪುರ ಬಿಜಾಪುರ ವಯಾ ಮಂಗಳವೇಡ ಹೊಸ ಸಮೀಕ್ಷೆ
* ರಾಯಚೂರು ಪಾಂಡುರಂಗಸ್ವಾಮಿಗೆ ಹಣ ಬಿಡುಗಡೆ
* ತುಮಕೂರು ಮದ್ದೂರು ಮಳವಳ್ಳಿ ರೈಲು ಮಾರ್ಗದ ಸಮೀಕ್ಷೆ
* ದರ್ಭಂಗ ಬೆಂಗಳೂರು ಎಕ್ಸ್ ಪ್ರೆಸ್ ಮೈಸೂರಿಗೆ ವಿಸ್ತರಣೆ
* ಚಿಕ್ಕಬಳ್ಳಾಫುರ -ಪುಟ್ಟಪರ್ತಿ ಹೊಸ ರೈಲು
* ಚಿಕ್ಕಬಳ್ಳಾಪುರ- ಗೌರಿಬಿದನೂರು ಹೊಸ ರೈಲು
* ತುಮಕೂರು-ಅರಸೀಕೆರೆ ರೈಲು ಮಾರ್ಗ ಡಬ್ಲಿಂಗ್
* ಜಬಲ್ ಪುರ್ ಯಶವಂತಪುರ ವಯಾ ಧರ್ಮಾವರಂ (ವಾರಕ್ಕೊಮ್ಮೆ)
* ಮಂಗಳೂರು ಕಾಚಿಗುಡ (ವಾರಕ್ಕೊಮ್ಮೆ)
* ಚಿಕ್ಕಮಗಳೂರು- ಸಕಲೇಶಪುರ ರೈಲುಮಾರ್ಗಕ್ಕೆ ಗ್ರೀನ್ ಸಿಗ್ನಲ್
* ಕೋಲಾರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ
* ಬೆಂಗಳೂರಿನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ
* ಸವಣೂರು - ಮಂಗಳೂರು ಜೋಡಿ ಮಾರ್ಗ

ಬೇಡಿಕೆ ಏನಿತ್ತು?: ವಾರಕೊಮ್ಮೆ ಓಡುವ ಕೊಚ್ಚುವೇಲಿ - ಡೆಹ್ರಾಡೂನ್ ರೈಲು ಮತ್ತು ಕೊಚ್ಚುವೇಲಿ - ಅಮೃತಸರ ರೈಲುಗಳಿಗೆ ಉಡುಪಿಯಲ್ಲಿ ನಿಲುಗಡೆಯ ಬೇಡಿಕೆ

* ಗೋವಾದ ವಾಸ್ಕೋ-ಡ-ಗಾಮದಿಂದ ಬೆಳಗ್ಗೆ ಮಂಗಳೂರಿಗೆ ಪ್ಯಾಸೆಂಜರ್ ರೈಲು ಬೇಕು
* ಸಿಎಸ್‌ಟಿ - ಮಂಗಳೂರು ಸೂಪರ್ ಫಾಸ್ಟ್ ರೈಲಿಗೆ ದಾದರ್‌ನಲ್ಲಿ ನಿಲುಗಡೆ ನೀಡಲು ಮನವಿ
* ಮುಂಬೈ ನಗರದ ಉತ್ತರದ ದಾದರ್‌ನಿಂದ ಭಯಂಧರ್ ವರೆಗಿನ ಜನರ ಅನುಕೂಲಕ್ಕಾಗಿ ಬಾಂದ್ರಾ-ವಸಾರೋಡ್ ಜಂಕ್ಷನ್‌ಗಾಗಿ ಮಂಗಳೂರಿಗೆ
ವಾರಕ್ಕೆ ಎರಡಾವರ್ತಿ ರೈಲು ಓಡಿಸಲು ಮನವಿ
* ಹೊಸ ಯೋಜನೆ : ಗದಗ-ಹಾವೇರಿ,ಮೈಸೂರು-ಕುಶಾಲನಗರ,ಧಾರವಾಡ-ಬೆಳಗಾವಿ ಸಂಪರ್ಕಕ್ಕೆ ಮನವಿ
* ಪ್ರಮುಖ ನಿಲ್ದಾಣಗಳಾದ ಬೆಳಗಾವಿ, ಗುಲ್ಬರ್ಗ, ಕಾರವಾರ, ಗದಗ, ಬೀದರ್ ಹಾಗೂ ರಾಯಚೂರಿನಿಂದ ಬೆಂಗಳೂರು ನಡುವೆ ಇಂಟರ್‌ಸಿಟಿ ರೈಲು

* ಯಶವಂಪುರ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣ ಮೇಲ್ದರ್ಜೆಗೇರಿಸಲು ಮನವಿ
* ಗುಲ್ಬರ್ಗಾದಲ್ಲಿ ವಿಭಾಗೀಯ ಕಚೇರಿ ಸ್ಥಾಪಿಸಬೇಕು, ಮಂಗಳೂರಿನ ವಿಭಾಗವನ್ನು ಎ ದರ್ಜೆಗೇರಿಸಬೇಕು.
* ನಿರೀಕ್ಷಿತ ಇಂಟರ್ ಸಿಟಿ ರೈಲುಗಳು : ಬೆಂಗಳೂರಿಂದ ಚಾಮರಾಜನಗರ, ಚಿಕ್ಕಮಗಳೂರು, ಮೀರಜ್, ಹೊಸಪೇಟೆ,ಚಿತ್ರದುರ್ಗ,ದಾವಣಗೆರೆ,
*
ಬೆಂಗಳೂರಿನಿಂದ ಹಾಸನ ಅಥವಾ ಸಕಲೇಶಪುರ ಹಾಗೂ ಬೆಂಗಳೂರು - ಬೆಂಗಳೂರು ವರ್ತುಲ ರೈಲು - ಹುಬ್ಬಳ್ಳಿ, ವಾಸ್ಕೊ, ಕಾರವಾರ, ಮಂಗಳೂರು ಮತ್ತು ಮೈಸೂರು ಮಾರ್ಗಕ್ಕೆ ಹೆಚ್ಚಿನ ರೈಲು ಬೇಡಿಕೆ
* ಸೂಪರ್ ಫಾಸ್ಟ್ ರೈಲು:
ಬೆಂಗಳೂರಿನಿಂದ ಜಮ್ಮು, ಡೆಹ್ರಾಡೂನ್, ಗಯಾ, ಅಮೃತಸರ, ರಾಮೇಶ್ವರಂ, ಉದಯಪುರ, ಔರಂಗಾಬಾದ್, ಬಿಕಾನೇರ್, ಭಾವನಗರ್, ರಾಜ್ ಕೋಟ್, ಜೈಪುರ

ಹೆಚ್ಚುವರಿ ಓಡಾಟಕ್ಕೆ ಮನವಿ : ಹುಬ್ಬಳ್ಳಿ - ವಿಜಯವಾಡ ಅಮರಾವತಿ ಎಕ್ಸ್ ಪ್ರೆಸ್, ಯಶವಂತಪುರ- ಕಾರವಾರ, ಬೆಂಗಳೂರು - ಸೊಲ್ಲಾಪುರ / ವಾರಕ್ಕೆ ಮೂರು ದಿನಕ್ಕೆ ಬದಲು ಪ್ರತಿದಿನಕ್ಕೆ ಮನವಿ

* ಯಶವಂತಪುರ - ವಾಸ್ಕೊ/ ವಾರಕ್ಕೆ ಎರಡಕ್ಕೆ ಬದಲಾಗಿ ಪ್ರತಿದಿನಕ್ಕೆ ಮನವಿ

* ಬೆಂಗಳೂರು - ಜೋಧಪುರ, ಬೆಂಗಳೂರು - ಅಜ್ಮೀರ್ / ವಾರಕ್ಕೆ ಎರಡಕ್ಕೆ ಬದಲಾಗಿ ಮೂರು ದಿನ

ಸಂಚಾರ ಮಾರ್ಗ ವಿಸ್ತರಣೆ: ತಿರುಪತಿ-ಗುಂತಕಲ್/ ಬಳ್ಳಾರಿಯವರೆಗೆ. ಮುಂಬೈ-ಸೊಲ್ಲಾಪುರ/ಗದಗದವರೆಗೆ.

ಚಾಲ್ತಿಯಲ್ಲಿರುವ ಕಾಮಗಾರಿಗಳು: ಬೆಂಗಳೂರು-ಹಾಸನ, ಮುನಿರಾಬಾದ್-ಮೆಹಬೂಬ್, ಬೀದರ್-ಗುಲ್ಬರ್ಗಾ ನೂತನ ಮಾರ್ಗಗಳು ದಶಕಗಳು
ಕಳೆದರೂ ಪೂರ್ಣಗೊಂಡಿಲ್ಲ. ಜೋಡಿ ಮಾರ್ಗ ಅಳವಡಿಕೆ ಹಾಗೂ ವಿದ್ಯುತೀಕರಣ ಕಾಮಗಾರಿ ಮುಗಿದಿಲ್ಲ.

ಹುಬ್ಬಳ್ಳಿ-ಅಂಕೋಲ, ಚಾಮರಾಜನಗರ-ಮೆಟ್ಟುಪಾಳ್ಯ, ಚಾಮರಾಜನಗರ-ಸತ್ಯಮಂಗಲ, ಕುಶಾಲನಗರ-ಮಡಿಕೇರಿ ಮತ್ತು ತಾಳಗುಪ್ಪ-ಹೊನ್ನಾವರ ನೂತನ ಮಾರ್ಗಗಳು ಹಾಗೂ ಸಕಲೇಶಪುರ-ಸುಬ್ರಹ್ಮಣ್ಯ ಜೋಡಿ ಮಾರ್ಗ ರಚನೆ ಆಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+