ಭಾರತ್ ಬಂದ್: ಈ ಚಿತ್ರಗಳನ್ನು ಮಿಸ್ ಮಾಡ್ಕೋಬೇಡಿ
ನವದೆಹಲಿ, ಫೆ.21: ಅನೇಕ ಕಾರ್ಮಿಕ ಸಂಘಟನೆಗಳು ನಿನ್ನೆ ಮತ್ತು ಇಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದವು. ಅದರ ಕಾವು ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡುಬಂದಿತು. ನಿನ್ನೆ ಬುಧವಾರ ಭಾರತ್ ಬಂದ್ ವೇಳೆ ಪಿಟಿಐ ಸುದ್ದಿಸಂಸ್ಥೆಯ ಛಾಯಾಗ್ರಾಹಕರು ಕ್ಲಿಕ್ಕಿಸಿದ ಚಿತ್ರಾವಳಿಗಳು ಇವು. ದೇಶದ ಉದ್ದಗಲಕ್ಕೂ ಭಾರತ ಹೇಗೆ ಕಂಡುಬರುತ್ತದೆ ಎಂಬುದಕ್ಕೆ ಇದು ನಿದರ್ಶನಪ್ರಾಯವಾಗಿದೆ.
ಸ್ವಯಂಭು ಎನ್ನುವಂತೆ ಈ ಚಿತ್ರಗಳೇ ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳುವಂತಿವೆ. ತಡವೇಕೆ... ನಿಮ್ಮ ಚಿತ್ರ ವಿಹಾರ ಸಾಗಲಿ!

ಭುವನೇಶ್ವರದಲ್ಲಿ ಐಟಕ್ ರೋಷಾವೇಶ
ಭುವನೇಶ್ವರದಲ್ಲಿ ಐಟಕ್ ಸಂಘಟನೆಯ ಮಹಿಳಾ ಸದಸ್ಯರು ಬಸ್ ಮೇಲೆ ಮುಗಿಬಿದ್ದಿರುವುದು.

ಭುವನೇಶ್ವರದಲ್ಲಿ ಐಟಕ್ ರೋಷಾವೇಶ
AITUC ಕಾರ್ಯಕರ್ತರು ಕರೆ ನೀಡಿದ್ದ ಬಂದ್ ವೇಳೆ ಕಂಡುಬಂದ ದೃಶ್ಯ

ಮಕ್ಕಳ ಮಿನಿ ವರ್ಲ್ಡ್ ಕಪ್ ಕ್ರಿಕೆಟ್
ಸಿಲಿಗುರಿಯಲ್ಲಿ ಪ್ರದರ್ಶನ ಬಂದ್ ಮಾಡಿದ್ದ ಚಿತ್ರಮಂದಿರ ಎದಿರು ಮಕ್ಕಳ ವರ್ಲ್ಡ್ ಕಪ್ ಕ್ರಿಕೆಟ್!

ಬಾಲ ಕಾರ್ಮಿಕರಿಗೆ ಯಾವ ಯೂನಿಯನ್?
ಕೋಲ್ಕೊತ್ತಾದಲ್ಲಿ ರಸ್ತೆ ಬದಿಯ ಚಹಾ ಅಂಗಡಿಯಲ್ಲಿ ಮಕ್ಕಳ ದುಡಿತ ಅಬಾಧಿತ.

ಕಾರ್ಮಿಕರ ಮನದಲ್ಲಿನ ಅಗ್ನಿ ಶಮನ?
ನೋಯ್ಡಾದ ಫೇಸ್-2 ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕದಳದ ವಾಹನವೇ ಅಗ್ನಿಗಾಹುತಿ.

ನೋಯ್ಡಾದಲ್ಲಿ ಬಂದ್ ಎಫೆಕ್ಟ್ ಜೋರು
ನೋಯ್ಡಾದ ಫೇಸ್-2 ಕೈಗಾರಿಕಾ ಪ್ರದೇಶದಲ್ಲಿ ಬಂದ್ ಎಫೆಕ್ಟ್ ಜೋರಾಗಿತ್ತು.

ವಿಮಾನಯಾನ ಅಬಾಧಿತ ಆದರೂ
ಕೋಲ್ಕೊತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕರ ದುಃಸ್ಥಿತಿ.

ಸಿನಿಮಾ ಸ್ಟಂಟ್ ಅಲ್ಲ ಮಾರಾಯ್ರೆ!
ಭುವನೇಶ್ವವರದಲ್ಲಿ ಕಾರ್ಮಿಕ ನಾಯಕರು ಹಚ್ಚಿದ್ದ ಬೆಂಕಿಯಿಂದ ಪಾರಾಗುತ್ತಿರುವ ವಾಹನ ಸವಾರರು.

ನೋಯ್ಡಾದಲ್ಲಿ ಕಾರುಗಳು ಭಸ್ಮ
ನೋಯ್ಡಾದ ಫೇಸ್-2 ಕೈಗಾರಿಕಾ ಪ್ರದೇಶದಲ್ಲಿ ಬಂದ್ ಎಫೆಕ್ಟ್ ನ ಒಂದು ಝಲಕ್.

Array
ಕೋಲ್ಕೊತ್ತಾದಲ್ಲಿ Reserve Bank of India ಎದುರು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಬಂದ್ ಆಚರಿಸಿದ್ದು ಹೀಗೆ.

ಭುವನೇಶ್ವರ ಐಟಕ್ ಕಾರ್ಯಕರ್ತರ ರೋಷಾವೇಶ
ಭುವನೇಶ್ವರ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ಬಸ್ ನಿಲ್ಲಿಸಲು ಐಟಕ್ ಕಾರ್ಯಕರ್ತರು ರೋಷಾವೇಶ ಪ್ರದರ್ಶಿಸಿದ್ದು ಹೀಗೆ.

ಭುವನೇಶ್ವರ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ
ಭುವನೇಶ್ವರ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ಬಸ್ ನಿಲ್ಲಿಸಲು ಐಟಕ್ ಕಾರ್ಯಕರ್ತರು ರೋಷಾವೇಶ ಪ್ರದರ್ಶಿಸಿದ್ದು ಹೀಗೆ (ಸಮೀಪ ದೃಶ್ಯ)

ನೋಯ್ಡಾದಲ್ಲಿ ಬಂದ್ ಎಫೆಕ್ಟ್ ಜೋರು:
ನೋಯ್ಡಾದ ಫೇಸ್-2 ಕೈಗಾರಿಕಾ ಪ್ರದೇಶದಲ್ಲಿ ಬಂದ್ ಎಫೆಕ್ಟ್ ಜೋರಾಗಿತ್ತು

ಸ್ಟೇಟ್ ಮೆಂಟ್ ಕೊಡೋರು ಇವರೇ:
ನವದೆಹಲಿಯಲ್ಲಿ RBI ಕಚೇರಿ ಎದುರು ಬಂದ್ ವೇಳೆ ಭರಪೂರ್ ಶಕ್ತಿ ಪ್ರದರ್ಶನ. ಬಂದ್ ನಿಂದ ಸಾವಿರಾರು ಕೋಟಿ ರೂಪಾಯಿ ಲಾಸಾಯಿತು ಎಂದು ನಾಳೆ ಇವರೇ ಸ್ಟೇಟ್ ಮೆಂಟ್ ಕೊಡೋದು.

ಹೌರಾ ಸೇತುವೆ ಖಾಲಿ ಖಾಲಿ:
ಕೋಲ್ಕೊತ್ತಾದಲ್ಲಿ ಹೌರಾ ಸೇತುವೆಯನ್ನು ಇಷ್ಟೊಂದು ಪೂರ್ಣ ಪ್ರಮಾಣದಲ್ಲಿ ನೋಡಲು ಸಾಧ್ಯವಾಗದು. ಏಕೆಂದರೆ ಅದು ವಾಹನಗಳಿಂದ ಸದಾ ಗಿಜಿಗುಡುತ್ತಿರುತ್ತದೆ.

ವಿಮಾನಯಾನ ಅಬಾಧಿತ ಆದರೂ:
ಕೋಲ್ಕೊತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕರ ದುಃಸ್ಥಿತಿ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications