ಭಾರತ್ ಬಂದ್: ಈ ಚಿತ್ರಗಳನ್ನು ಮಿಸ್ ಮಾಡ್ಕೋಬೇಡಿ
ನವದೆಹಲಿ, ಫೆ.21: ಅನೇಕ ಕಾರ್ಮಿಕ ಸಂಘಟನೆಗಳು ನಿನ್ನೆ ಮತ್ತು ಇಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದವು. ಅದರ ಕಾವು ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡುಬಂದಿತು. ನಿನ್ನೆ ಬುಧವಾರ ಭಾರತ್ ಬಂದ್ ವೇಳೆ ಪಿಟಿಐ ಸುದ್ದಿಸಂಸ್ಥೆಯ ಛಾಯಾಗ್ರಾಹಕರು ಕ್ಲಿಕ್ಕಿಸಿದ ಚಿತ್ರಾವಳಿಗಳು ಇವು. ದೇಶದ ಉದ್ದಗಲಕ್ಕೂ ಭಾರತ ಹೇಗೆ ಕಂಡುಬರುತ್ತದೆ ಎಂಬುದಕ್ಕೆ ಇದು ನಿದರ್ಶನಪ್ರಾಯವಾಗಿದೆ.
ಸ್ವಯಂಭು ಎನ್ನುವಂತೆ ಈ ಚಿತ್ರಗಳೇ ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳುವಂತಿವೆ. ತಡವೇಕೆ... ನಿಮ್ಮ ಚಿತ್ರ ವಿಹಾರ ಸಾಗಲಿ!

ಭುವನೇಶ್ವರದಲ್ಲಿ ಐಟಕ್ ರೋಷಾವೇಶ
ಭುವನೇಶ್ವರದಲ್ಲಿ ಐಟಕ್ ಸಂಘಟನೆಯ ಮಹಿಳಾ ಸದಸ್ಯರು ಬಸ್ ಮೇಲೆ ಮುಗಿಬಿದ್ದಿರುವುದು.

ಭುವನೇಶ್ವರದಲ್ಲಿ ಐಟಕ್ ರೋಷಾವೇಶ
AITUC ಕಾರ್ಯಕರ್ತರು ಕರೆ ನೀಡಿದ್ದ ಬಂದ್ ವೇಳೆ ಕಂಡುಬಂದ ದೃಶ್ಯ

ಮಕ್ಕಳ ಮಿನಿ ವರ್ಲ್ಡ್ ಕಪ್ ಕ್ರಿಕೆಟ್
ಸಿಲಿಗುರಿಯಲ್ಲಿ ಪ್ರದರ್ಶನ ಬಂದ್ ಮಾಡಿದ್ದ ಚಿತ್ರಮಂದಿರ ಎದಿರು ಮಕ್ಕಳ ವರ್ಲ್ಡ್ ಕಪ್ ಕ್ರಿಕೆಟ್!

ಬಾಲ ಕಾರ್ಮಿಕರಿಗೆ ಯಾವ ಯೂನಿಯನ್?
ಕೋಲ್ಕೊತ್ತಾದಲ್ಲಿ ರಸ್ತೆ ಬದಿಯ ಚಹಾ ಅಂಗಡಿಯಲ್ಲಿ ಮಕ್ಕಳ ದುಡಿತ ಅಬಾಧಿತ.

ಕಾರ್ಮಿಕರ ಮನದಲ್ಲಿನ ಅಗ್ನಿ ಶಮನ?
ನೋಯ್ಡಾದ ಫೇಸ್-2 ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕದಳದ ವಾಹನವೇ ಅಗ್ನಿಗಾಹುತಿ.

ನೋಯ್ಡಾದಲ್ಲಿ ಬಂದ್ ಎಫೆಕ್ಟ್ ಜೋರು
ನೋಯ್ಡಾದ ಫೇಸ್-2 ಕೈಗಾರಿಕಾ ಪ್ರದೇಶದಲ್ಲಿ ಬಂದ್ ಎಫೆಕ್ಟ್ ಜೋರಾಗಿತ್ತು.

ವಿಮಾನಯಾನ ಅಬಾಧಿತ ಆದರೂ
ಕೋಲ್ಕೊತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕರ ದುಃಸ್ಥಿತಿ.

ಸಿನಿಮಾ ಸ್ಟಂಟ್ ಅಲ್ಲ ಮಾರಾಯ್ರೆ!
ಭುವನೇಶ್ವವರದಲ್ಲಿ ಕಾರ್ಮಿಕ ನಾಯಕರು ಹಚ್ಚಿದ್ದ ಬೆಂಕಿಯಿಂದ ಪಾರಾಗುತ್ತಿರುವ ವಾಹನ ಸವಾರರು.

ನೋಯ್ಡಾದಲ್ಲಿ ಕಾರುಗಳು ಭಸ್ಮ
ನೋಯ್ಡಾದ ಫೇಸ್-2 ಕೈಗಾರಿಕಾ ಪ್ರದೇಶದಲ್ಲಿ ಬಂದ್ ಎಫೆಕ್ಟ್ ನ ಒಂದು ಝಲಕ್.

Array
ಕೋಲ್ಕೊತ್ತಾದಲ್ಲಿ Reserve Bank of India ಎದುರು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಬಂದ್ ಆಚರಿಸಿದ್ದು ಹೀಗೆ.

ಭುವನೇಶ್ವರ ಐಟಕ್ ಕಾರ್ಯಕರ್ತರ ರೋಷಾವೇಶ
ಭುವನೇಶ್ವರ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ಬಸ್ ನಿಲ್ಲಿಸಲು ಐಟಕ್ ಕಾರ್ಯಕರ್ತರು ರೋಷಾವೇಶ ಪ್ರದರ್ಶಿಸಿದ್ದು ಹೀಗೆ.

ಭುವನೇಶ್ವರ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ
ಭುವನೇಶ್ವರ ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿ ಬಸ್ ನಿಲ್ಲಿಸಲು ಐಟಕ್ ಕಾರ್ಯಕರ್ತರು ರೋಷಾವೇಶ ಪ್ರದರ್ಶಿಸಿದ್ದು ಹೀಗೆ (ಸಮೀಪ ದೃಶ್ಯ)

ನೋಯ್ಡಾದಲ್ಲಿ ಬಂದ್ ಎಫೆಕ್ಟ್ ಜೋರು:
ನೋಯ್ಡಾದ ಫೇಸ್-2 ಕೈಗಾರಿಕಾ ಪ್ರದೇಶದಲ್ಲಿ ಬಂದ್ ಎಫೆಕ್ಟ್ ಜೋರಾಗಿತ್ತು

ಸ್ಟೇಟ್ ಮೆಂಟ್ ಕೊಡೋರು ಇವರೇ:
ನವದೆಹಲಿಯಲ್ಲಿ RBI ಕಚೇರಿ ಎದುರು ಬಂದ್ ವೇಳೆ ಭರಪೂರ್ ಶಕ್ತಿ ಪ್ರದರ್ಶನ. ಬಂದ್ ನಿಂದ ಸಾವಿರಾರು ಕೋಟಿ ರೂಪಾಯಿ ಲಾಸಾಯಿತು ಎಂದು ನಾಳೆ ಇವರೇ ಸ್ಟೇಟ್ ಮೆಂಟ್ ಕೊಡೋದು.

ಹೌರಾ ಸೇತುವೆ ಖಾಲಿ ಖಾಲಿ:
ಕೋಲ್ಕೊತ್ತಾದಲ್ಲಿ ಹೌರಾ ಸೇತುವೆಯನ್ನು ಇಷ್ಟೊಂದು ಪೂರ್ಣ ಪ್ರಮಾಣದಲ್ಲಿ ನೋಡಲು ಸಾಧ್ಯವಾಗದು. ಏಕೆಂದರೆ ಅದು ವಾಹನಗಳಿಂದ ಸದಾ ಗಿಜಿಗುಡುತ್ತಿರುತ್ತದೆ.

ವಿಮಾನಯಾನ ಅಬಾಧಿತ ಆದರೂ:
ಕೋಲ್ಕೊತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕರ ದುಃಸ್ಥಿತಿ.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications