ಬೇರೆ ಪಕ್ಷ ಸೇರಲ್ಲ, ಬೇಕಾದರೆ ರಾಜಕೀಯ ನಿವೃತ್ತಿ

'ನಾನು ಏನು ಅನ್ನ ಸಿದ್ಧಾಂತ ಎಲ್ಲರಿಗೂ ಗೊತ್ತಿದೆ. ನನಗೆ ಯಾರ ಸರ್ಟಿಫಿಕೇಟ್ ಬೇಡ. ಯಾವುದೇ ಕಾರಣಕ್ಕೂ ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಪಕ್ಷ ಬಿಡುವ ಸಂದರ್ಭದ ಬಂದರೂ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಹೊರತೂ ಪಕ್ಷ ದ್ರೋಹ ಮಾಡುವುದಿಲ್ಲ' ಎಂದು ಡಿವಿ ಸದಾನಂದ ಗೌಡರು ಪ್ರತಿಕ್ರಿಯಿಸಿದ್ದಾರೆ.
ಧನಂಜಯ್ ಕುಮಾರ್ ಅವರು ಇಲ್ಲ ಸಲ್ಲದ ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಲಿ. ಬಿಜೆಪಿ ಈಗ ಸದೃಢವಾಗಿದ್ದು, ಯಾವುದೇ ಆಂತರಿಕ ಕಲಹ ನಮ್ಮಲ್ಲಿಲ್ಲ. ನನ್ನನ್ನು ಯಾರೂ ಕಡೆಗಣಿಸಿಲ್ಲ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ ಇದನ್ನು ಧನಂಜಯ್ ಕುಮಾರ್ ಹೇಳಬೇಕಾದಿಲ್ಲ ಎಂದು ಡಿವಿಎಸ್ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಎದುರಿಸು ಕಾರ್ಯತಂತ್ರ ರೂಪಿಸುವ ಸಲುವಾಗಿ ರಾಜ್ಯ ಬಿಜೆಪಿ ಅರಮನೆ ಮೈದಾನದಲ್ಲಿ ಮಂತ್ರಾಲೋಚನೆ ಸಭೆಗೆ ಸರಿಯಾದ ಆಹ್ವಾನ ಸಿಗದ ಕಾರಣ, ಮುನಿಸಿಕೊಂಡ ಸದಾನಂದ ಗೌಡರು ದಕ್ಷಿಣ ಕನ್ನಡದತ್ತ ಪ್ರವಾಸ ಕೈಗೊಂಡಿದ್ದರು.
ಸದಾನಂದ ಗೌಡ ಅವರಂಥ ಉತ್ತಮ ನಾಯಕರನ್ನು ಕಳೆದುಕೊಂಡ ಮೇಲೆ ಬಿಜೆಪಿ ಇನ್ನಷ್ಟು ಬಡವಾಗಲಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಪರಿಣಾಮ ಬೀರಲಿದೆ. ಇದು ಕರ್ನಾಟಕ ಜನತಾ ಪಕ್ಷಕ್ಕೆ ವರದಾನವಾಗಲಿದೆ ಎಂದು ಧನಂಜಯ್ ಕುಮಾರ್ ಹೇಳಿದ್ದಾರೆ.
ಬಿಜೆಪಿ ನಾಯಕರ ವರ್ತನೆಯಿಂದ ಸದಾನಂದ ಗೌಡರು ತುಂಬಾ ಬೇಸರಗೊಂಡಿದ್ದಾರೆ. ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡಿರುವ ಗೌಡರು ಬಿಜೆಪಿ ತೊರೆಯುವುದು ಬಹುತೇಕ ಖಚಿತ.ಪಕ್ಷದ ಶಿಸ್ತಿನ ಸಿಪಾಯಿಯಂತಿರುವ ಸದಾನಂದ ಗೌಡರು ಪಕ್ಷ ತೊರೆಯುವ ಸ್ಥಿತಿಗೆ ಬಂದಿರುವುದು ಬಿಜೆಪಿಯ ಆಂತರಿಕ ಕಲಹಕ್ಕೆ ಸಾಕ್ಷಿಯಾಗಿದೆ ಎಂದರು.












Click it and Unblock the Notifications