ಮಠಗಳಿಗೆ ಮತ್ತೆ 25 ಕೋಟಿ ರೂ. ಕೊಟ್ರು ಶೆಟ್ರು
ಬೆಂಗಳೂರು,
ಫೆ. 15 : ಮುಖ್ಯಮಂತ್ರಿಯಾಗಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಜಗದೀಶ್ ಶೆಟ್ಟರ್ ಮಠಗಳಿಗೆ 135 ಕೋಟಿ ಅನುದಾನ ಬಿಡುಗಡೆ ಮಾಡಿ ಔದಾರ್ಯ ಮರೆದಿದ್ದರು. ಗುರುವಾರ ಸದನದಲ್ಲಿ ನೂತನ ಯೋಜನೆಗಳನ್ನು ಘೋಷಿಸಿದ ಶೆಟ್ಟರ್ ಮತ್ತೊಮ್ಮೆ ಮಠಗಳಿಗೆ 25 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ನೀಡಿದ್ದಾರೆ. ಶೆಟ್ಟರ್ ಹಣ ಕೊಟ್ಟ ಮಠಗಳು ಯಾವುವು ಬನ್ನಿ ತಿಳಿಯೋಣ.... id="toptextpromo">*
ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮಿ ಟ್ರಸ್ಟ್ ಶಾಲೆ ಮತ್ತು ವಿದ್ಯಾರ್ಥಿ ನಿಲಯಕ್ಕೆ 2 ಕೋಟಿ* ಉತ್ತರಾಧಿ ಮಠದ ಗುರುಕುಲ ಮತ್ತು ಗೋಶಾಲೆ ಅಭಿವೃದ್ಧಿಗೆ 2 ಕೋಟಿ
* ತಿಪಟೂರುಕಾಡು ಸಿದ್ದೇಶ್ವರ ಮಠ
* ಧಾರವಾಡದ ಉಪ್ಪಿನ ಬೆಟಗೇರಿ ಶ್ರೀ ಕುಮಾರ ವಿರೂಪಾಕ್ಷೇಶ್ವರ ಮಠ
* ಬೆಳಗಾವಿಯ ಶ್ರೀ ಮೋಟಗಿ ಮಠ
* ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣರ ಸಂಘ
* ಚಿಕ್ಕಬಳ್ಳಾಪುರ ನಿಡುಮಾಮಿಡಿ ಜಗದ್ಗುರು ಮಠ
* ಕೊಪ್ಪಳ ಗವಿ ಸಿದ್ದೇಶ್ವರ ಮಠದ ವಿದ್ಯಾರ್ಥಿ ಭವನ ಅಭಿವೃದ್ಧಿಗೆ ಅನುದಾನ
* ಮಾಗಡಿಯ ಚಕ್ರಭಾವಿ ಜಂಗಮ ಮಹಾ ಸಂಸ್ಥಾನಕ್ಕೆ ಅನುದಾನ
* ಕನಕಪುರದ ಮಮ್ಮಡಿ ಶಿವರುದ್ರ ಮಹಾಸಂಸ್ಥಾನಕ್ಕೆ ನೆರವು
* ಬೀದರ್ ಬಾಲ್ಕಿ ಮಠದ ಅಭಿವೃದ್ದಿಗೆ ನೆರವು
* ಹುಬ್ಬಳ್ಳಿ ನೆಟ್ಟಪ್ಪಜ್ಜನ ಮಠಕ್ಕೆ ಅನುದಾನ
* ಹಿರೇಕಲ್ಮಠ ಚನ್ನಪ್ಪ ಸ್ವಾಮೀ ಮಠಕ್ಕೆ ಅನುದಾನ
* ಹಾಲ ಸ್ವಾಮಿಜಿ ಮಠದ ಅಭಿವೃದ್ಧಿಗೆ ಅನುದಾನ
* ಶಿರಹಟ್ಟಿಯ ಬಾಳೇಹೊಸೂರು ಬಿಂಗಾಲೇಶ್ವರ ಮಠಕ್ಕೆ ಅನುದಾನ id='are-slot-1' class='oiad oi-axt oiadv'> id='top-searched-articles'>
ಪ್ರತಿ
ಪಕ್ಷಗಳು ಬಜೆಟ್ ನಲ್ಲಿ ಮಠಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಆರೋಪಿಸುತ್ತಿರುವಾಗಲೇ ಮತ್ತೊಮ್ಮೆ ಮಠಗಳಿಗೆ ಶೆಟ್ಟರ್ 35 ಕೋಟಿ ರೂ.ಗಳನ್ನು ನೀಡಿದ್ದಾರೆ. ಬಜೆಟ್ ಅಧಿವೇಶನ ಶುಕ್ರವಾರ ಫೆ.15ರಂದು ಕೊನೆಗೊಳ್ಳಲಿದ್ದು, ಚುನಾವಣಾ ಬಜೆಟ್ ಮಂಡಿಸಿದ್ದಾರೆ ಎಂದು ವಿಪಕ್ಷಗಳು ಲೇವಡಿ ಮಾಡುತ್ತಿವೆ. (ಕರ್ನಾಟಕ ಬಜೆಟ್ 2013 ಮುಖ್ಯಾಂಶಗಳು)











Click it and Unblock the Notifications