ಬೆಂಗಳೂರು ವಿವಿಗೆ ತಿಮ್ಮೇಗೌಡ ಹೊಸ ಸಾರಥಿ

ಪ್ರೊ.ತಿಮ್ಮೇಗೌಡ ಅವರು ಬೆಂಗಳೂರು ವಿವಿಯ ನೂತನ ಉಪ ಕುಲಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಆದೇಶ ಹೊರಡಿಸಿದ್ದಾರೆ. ತಿಮ್ಮೇಗೌಡ ಅವರು ಬುಧವಾರ (ಫೆ.6) ಬೆಂಗಳೂರು ವಿವಿಯ ಉಪ ಕುಲಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಈ ಹಿಂದೆ ಇದ್ದ ರಿಜಿಸ್ಟ್ರಾರ್ ಪ್ರೊಫೆಸರ್ ಮೈಲಾರಪ್ಪ ಅವರ ನೇಮಕಾತಿ ರದ್ದುಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ಕಳೆದ ವರ್ಷ ನ.21ರಂದು ಮಹತ್ವದ ಆದೇಶ ಹೊರಡಿಸಿತ್ತು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಮೈಲಾರಪ್ಪ ಅವರನ್ನು ನೂತನ ಕುಲಸಚಿವರಾಗಿ ನ.2, 2011ರಂದು ಕರ್ನಾಟಕ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ಮೂಲಕ ಕುಲಸಚಿವರಾಗಿ ನೇಮಕಗೊಂಡ ಮೊದಲ ದಲಿತ ಪ್ರೊಫೆಸರ್ ಎಂಬ ಕೀರ್ತಿಗೆ ಮೈಲಾರಪ್ಪ ಪಾತ್ರರಾಗಿದ್ದರು. ಅಲ್ಲದೆ 46 ವರ್ಷಕ್ಕೆ ವಿವಿ ರಿಜಿಸ್ಟ್ರಾರ್ ಆಗಿ ನೇಮಕಗೊಂಡು ಹೊಸ ಸಾಧನೆ ಮಾಡಿದ್ದರು.
ಉಪ ಕುಲಪತಿ ಸ್ಥಾನಕ್ಕೆ ಭಾರಿ ಲಾಬಿ: ಉಪ ಕುಲಪತಿ ಸ್ಥಾನದ ಆಕಾಂಕ್ಷಿಗಳಾದ ತಿಮ್ಮೇಗೌಡ ಹಾಗೂ ಜಿ.ಕೆ ಕಾರಂತ ಅವರು ಕಳೆದ ವಾರ ಉನ್ನತ ಶಿಕ್ಷಣ ಸಚಿವ ಸಿ.ಟಿ ರವಿ ಅವರನ್ನು ಕುಮಾರ ಕೃಪಾ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು.
ಉತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳ ತಿಮ್ಮೇಗೌಡ ಅವರು ಈ ಹಿಂದೆ ಮಂಗಳೂರು ವಿವಿಗೆ ಉಪ ಕುಲಪತಿಯಾಗಬೇಕಿತ್ತು. ಆದರೆ, ನಂತರ ನೇಮಕಾತಿ ರದ್ದಾಗಿತ್ತು. ಬೆಂಗಳೂರು ವಿವಿಗೆ ತಿಮ್ಮೇಗೌಡ ಅವರು ಪ್ರಬಲ ಅಭ್ಯರ್ಥಿಯಾಗಿದ್ದರು. ಇವರಿಗೆ ಆರೆಸ್ಸೆಸ್ ಹಾಗೂ ಎಬಿವಿಪಿ ಬೆಂಬಲಿತ ಜಿ.ಕೆ ಕಾರಂತ್ ಹಾಗೂ ಶಾಸಕ ವೈ.ಎ ನಾರಾಯಣ ಸ್ವಾಮಿ ಬೆಂಬಲಿತ ರಾಮಚಂದ್ರ ಸ್ವಾಮಿ ಪೈಪೋಟಿ ನೀಡಿದ್ದರು.
ಜೊತೆಗೆ ಬೆಂಗಳೂರು ವಿವಿ ಹಂಗಾಮಿ ಉಪ ಕುಲಪತಿ ಪ್ರೊ. ಎನ್. ರಂಗಸ್ವಾಮಿ, ಬೆಂಗಳೂರು ವಿವಿ ಭೌತಶಾಸ್ತ್ರ ವಿಭಾಗದ ಪ್ರೊ. ಎಂ.ಸಿ. ರಾಧಾಕೃಷ್ಣ, ಧಾರವಾಡದ ಕರ್ನಾಟಕ ವಿವಿಯ ಡಾ.ಎಸ್.ಬಿ. ಹಿಂಚಿಗೇರಿ ಅವರು ಹೆಸರು ಕೂಡಾ ಬೆಂಗಳೂರು ವಿವಿ ನೂತನ ಉಪ ಕುಲಪತಿ ಸ್ಥಾನಕ್ಕೆ ಪ್ರಸ್ತಾಪವಾಗಿತ್ತು.
ಕುವೆಂಪು ವಿವಿ ಮಾಜಿ ಉಪ ಕುಲಪತಿ ಎಸ್.ಪಿ ಹಿರೇಮಠ, ಕರ್ನಾಟಕ ವಿವಿ ಉಪ ಕುಲಪತಿ ಎಸ್ .ಕೆ ಸೈದಾಪುರ, ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಇನ್ಸ್ ಸ್ಟಿಟ್ಯೂಟ್(ISEC) ನಿರ್ದೇಶಕ ದೇಶಪಾಂಡೆ ಅವರು ಹೊಸ ಕುಲಪತಿ ಹುಡುಕುವ ಸಮಿತಿಯ ಸದಸ್ಯರಾಗಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications