ಸಲ್ಮಾನ್ ರಶ್ದಿಯನ್ನು ದ್ವೇಷಿಸಲು ನಾನಾ ಕಾರಣ

ಅವರು ಬರೆದಿರುವ ಕಾದಂಬರಿಗಳನ್ನು ಓದುವುದು ಬಲು ಕಷ್ಟ. ಈ ಮಾತನ್ನು ಅವರನ್ನು ಆರಾಧಿಸುವ ಅನೇಕರು ಒಪ್ಪದಿದ್ದರೂ, ಅವರ ಕಾದಂಬರಿಗಳನ್ನು ಓದಿ ಅರಗಿಸಿಕೊಳ್ಳಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಮೊದಲ ಬಾರಿ ಓದುತ್ತಿರುವವರಂತೂ ಓದನ್ನು ಅರ್ಧಕ್ಕೇ ನಿಲ್ಲಿಸಿದರೆ ಆಶ್ಚರ್ಯವಿಲ್ಲ. ಇದರರ್ಥ, ರಶ್ದೀಯ ಬರವಣಿಗೆಯ ಆಳ, ಅಗಲ, ಸಾಹಿತ್ಯಿಕ ಸಾರವನ್ನು ಸವಿಯಲು ಓದುಗರು ಸೋತಿದ್ದಾರೆ ಎಂದರ್ಥವೆ? ಇದ್ದರೂ ಇರಬಹುದು. ಆದರೆ, ರಶ್ದಿ ಕಾದಂಬರಿಗಳನ್ನು ಓದದೆ ಸೋತ ಓದುಗರಲ್ಲಿ ನಾನೂ ಒಬ್ಬ.
ಇಂದಿನ ಗಂಭೀರ ಬರವಣಿಗೆಗಳು ಓದುಗರಲ್ಲಿ ಅಸಹನೀಯತೆ ಹೆಚ್ಚಿಸುತ್ತಿವೆ. ಓದುಗರನ್ನು ತೀವ್ರ ಗೊಂದಲಕ್ಕೆ ದೂಡಿ, ಅರ್ಥಮಾಡಿಕೊಳ್ಳಲು ಎರಡೆರಡು ಬಾರಿ ಓದುವಂಥವು ಅತ್ಯುತ್ತಮ ಕಾದಂಬರಿಗಳು ಎಂಬಂತಹ ಅಭಿಪ್ರಾಯ ಮೂಡಿದೆ. ಭಾರತದ ಬಗ್ಗೆ ಬರೆದಂಥ ಪುಸ್ತಕಗಳು ಪಾಶ್ಚಾಮಾತ್ಯರಿಗಾಗಿಯೇ ಬರೆದಂತಿರುವುದರಿಂದ ಇಲ್ಲಿನ ಸರಳ ಮಧ್ಯಮ ವರ್ಗದ ಓದುಗರಿಗಾಗಿ ಇರುವ ಸರಳ ಕಥೆಗಳು, ಕಾದಂಬರಿಗಳು ಧೂಳು ತಿನ್ನುತ್ತಿವೆ.
ನಮ್ಮ ಆಂಗ್ಲ ಲೇಖಕರು ಬರೆದು ಬರೆದು ಬಿಸಾಕುತ್ತಿದ್ದಾರೆ. ಆದರೆ, ಓದುವವರೇ ಇಲ್ಲವಾಗಿದ್ದಾರೆ. ಭಾರತೀಯ ಪುಸ್ತಕಗಳಿಗೆ ಮಾರುಕಟ್ಟೆ ಇಲ್ಲದಂತಾಗಿದೆ. ಇದಕ್ಕೆ ಕಾರಣ ಭಾರತೀಯರು ಪುಸ್ತಕಗಳನ್ನು ಓದುವುದಿಲ್ಲ ಅಂತಲ್ಲ, ಇಲ್ಲಿ ಬರೆಯಲಾದ ಪುಸ್ತಕಗಳು ಭಾರತೀಯರಿಗಾಗಿ ಇರುವುದಿಲ್ಲ, ಅಷ್ಟೆ. ಇಂಥವರಲ್ಲಿ ಅಪರೂಪದ ಲೇಖಕ ಅಂದರೆ, ಅವರು ಚೇತನ್ ಭಗತ್. ಅವರು ಭಾರತೀಯರ ಕಥೆಗಳನ್ನು ಭಾರತೀಯರಿಗಾಗಿ ನೀಡಿದ್ದಾರೆ. ಈ ಚಿಂತನೆಯನ್ನು ಇನ್ನಷ್ಟು ಆಳವಾಗಿ ತಿಳಿಯಬೇಕಿದ್ದರೆ ನಿಟಿ ಸೆಂಟ್ರಲ್ನಲ್ಲಿ ಈ ಲೇಖನವನ್ನು ಓದಿರಿ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications