ಎಚ್ ಡಿ ರೇವಣ್ಣ ಮೊದಲ ಪತ್ನಿ ನಾನಲ್ಲ: ಭವಾನಿ
ಹಾಸನ, ಜ.31: ದೊಡ್ಡ ಗೌಡ್ರ ಕುಟುಂಬದಲ್ಲಿ ದೊಡ್ಡ ಕೋಲಾಹಲ ಎದ್ದಿದೆಯಾ? ಏಕೆಂದರೆ ದೇವೇಗೌಡರ ಚೊಚ್ಚಲ ಮಗ ಎಚ್ ಡಿ ರೇವಣ್ಣ ಅವರ ಧರ್ಮ ಪತ್ನಿ ಭವಾನಿ ಅವರು 'ರೇವಣ್ಣಗೆ ನಾನು ಮೊದಲ ಪತ್ನಿ ಅಲ್ಲ, ಎರಡನೇ ಪತ್ನಿ' ಎಂದಿದ್ದಾರೆ.
ವಸಿ ತಡಕೊಳ್ಳಿ. ಆ ಹೆಣ್ಣುಮಗಳು ಹೇಳಿರುವುದು ನೀವು ಯೋಚಿಸುತ್ತಿರುವ ಭಾವದಲ್ಲಿ ಹೇಳಿಲ್ಲ. ಅಭಾವ ವೈರಾಗ್ಯದಿಂದ ಭವಾನಿ ಮೇಡಂ ಹಾಗೆ ಹೇಳಿದ್ದಾರೆ. ವಿಷಯ ಏನಪ್ಪಾ ಅಂದರೆ ಜೆಡಿಎಸ್ ಶಾಸಕರೂ ಆದ ರೇವಣ್ಣನರು ರಾಜಕೀಯದ ಜತೆಗೆ ಕರ್ನಾಟಕ ಡೇರಿ ಉದ್ಯಮಕ್ಕೆ ಸದಾ ನೀರೆರೆಯುವ ಕಾಯಕದಲ್ಲಿ ತೊಡಗಿರುತ್ತಾರೆ.
ಹಾಗಾಗಿ, ಕೆಎಂಎಫ್ ಅರ್ಥಾತ್ ನಂದಿನಿ ಹಾಲು ಒಕ್ಕೂಟದ ಸೇವೆಗೆ ಅವರು ಕಟಿಬದ್ಧರಾಗಿದ್ದು, ಅದನ್ನೇ ತಮ್ಮ ಮೊದಲ ಪತ್ನಿಯಂತೆ ನೋಡಿಕೊಳ್ಳುತ್ತಾರೆ ಎಂದು ಭವಾನಿ ಮೇಡಂ ತಮ್ಮ ಪತಿಯ ಜನಸೇವೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಬುಧವಾರ ಇಲ್ಲಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಸದಸ್ಯರಿಗೆ ಸ್ವಸಹಾಯ ಸಂಘಗಳ ಮಹತ್ವ ಮತ್ತು ಸ್ವಸಹಾಯ ಸಂಘಗಳ ಮಹಾಮಂಡಳ ರಚನೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಭವಾನಿ ಮಾತನಾಡಿದರು.

ಹಸುವಿನಂತಹ ಮನಸು
ಈ ವೇಳೆ ಎಚ್ ಡಿ ರೇವಣ್ಣನವರಿಗೆ ನಾನು ಎರಡನೇ ಪತ್ನಿ. ಮನೆಗಿಂತಲೂ ಡೇರಿ ಅಭಿವೃದ್ಧಿಗೆ ರೇವಣ್ಣ ಹೆಚ್ಚು ಶ್ರಮಿಸುತ್ತಾರೆ. ದೇಶದ ಕ್ಷೀರ ಕ್ರಾಂತಿಯ ಹರಿಕಾರ ಪಿಜೆ ಕುರಿಯನ್ ಅವರ ಶಕ್ತಿಯನ್ನು ಪಡೆದುಕೊಂಡಿರುವ ರೇವಣ್ಣನವರು ಕರ್ನಾಟಕದಲ್ಲಿ ಡೇರಿ ಉದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಪತಿಯನ್ನು ಭವಾನಿ ಮುಕ್ತ ಕಂಠದಿಂದ, ತುಂಬಿದ ಸಭೆಯಲ್ಲಿ ಹಾಡಿ ಹೊಗಳಿದರು.

ಕಾಮಧೇನು ಆರಾಧಕ ಕುಟುಂಬ
ಇದನ್ನು ಕೇಳಿ ವರ್ಗಿಸ್ ಕುರಿಯನ್ ಸ್ವರ್ಗದಲ್ಲಿ ಸಂತಸದ ಹೊಳೆ ಹರಿಸಿರಲೂಬಹುದು. ಏಕೆಂದರೆ, ಇದ್ದಕ್ಕಿದ್ದಂತೆ ದೇಶದ ಪ್ರಧಾನಿಯಾದ ದೇವೇಗೌಡರು ಕುರಿಯನ್ ಅವರ ಕೈಹಿಡಿದು ಮೊದಲು ಬೆಂಗಳೂರಿಗೆ, ಬಳಿಕ ಹಾಸನ ಮತ್ತಿತರ ಜಿಲ್ಲೆಗಳಲ್ಲಿ ಹಾಲು ಕ್ರಾಂತಿಗೆ ಚಾಲನೆ ನೀಡಿದರು. ಆ ಸಂದರ್ಭದಲ್ಲೇ ಗೌಡರು ತಮ್ಮ ಪುತ್ರ ರೇವಣ್ಣರನ್ನು ಮುಂಚೂಣಿಗೆ ಬಿಟ್ಟಿದ್ದು. ಅಲ್ಲಿಂದ ಮುಂದಕ್ಕೆ ಗೌಡರ ಕುಟುಂಬದವರು ಕೆಎಂಎಫ್, ಎನ್ ಡಿಡಿಬಿ ಸಂಸ್ಥೆಗಳನ್ನು ಅಕ್ಷರಶಃ ಕಾಮಧೇನುವಿನಂತೆ ಆರಾಧಿಸುತ್ತಿದ್ದಾರೆ.

ಭವಾನಿಯಕ್ಕ ಹಾಸನಕ್ಕೇ ಮೊದಲು
ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಮಹಿಳೆ ತಾವಾಗಿದ್ದು, 20 ಹಸುಗಳನ್ನು ಸಾಕಿದ್ದೇನೆ ಎಂದು ಹೇಳಿಕೊಂಡ ಭವಾನಿ, ನನ್ನನ್ನು ವಿದೇಶ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ನಾನು ವಿದೇಶ ಪ್ರವಾಕ್ಕೆ ಹೋಗಲಿಲ್ಲ. ಮುಂದೆಯೂ ಹೋಗುವುದಿಲ್ಲ. ನನಗೆ ಮನೆ ಕೆಲಸ ಮಾಡಿಕೊಂಡಿರುವುದೇ ಖುಷಿ ಎಂದರು. ಪದವಿ ಪಡೆದವರಷ್ಟೇ ಬುದ್ಧಿವಂತರಲ್ಲ. ನಾನು SSLCವರೆಗೆ ಮಾತ್ರ ಓದಿದ್ದರೂ ನನ್ನ ಶಕ್ತಿ ಏನು ಎಂಬುದನ್ನು ನಾನು ಕಂಡುಕೊಂಡಿದ್ದೇನೆ ಎಂದರು.

ನಮಗೆ ಇಂದಿರಾಗಾಂಧಿ ಮಾದರಿಯಾಗಲಿ
ಮಹಿಳೆಯರಿಗೆ ಮನೆ ಮುನ್ನೆಡೆಸುವುದೂ ಗೊತ್ತು. ಮನೆ ಮುಳುಗಿಸುವುದೂ ಗೊತ್ತು. ಇಂದಿರಾಗಾಂಧಿ ದೇಶ ಮುನ್ನೆಡೆಸಿದ ಉದಾಹರಣೆ ನಮ್ಮ ಮುಂದಿದೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಹೆಣ್ಣು ಮಕ್ಕಳ ಮನಸ್ಸನ್ನು ಹಾಳು ಮಾಡುತ್ತಿವೆ. ಎಂತಹ ಸಂದರ್ಭ ಬಂದರೂ ಮಹಿಳೆಯರು ಸಂಸಾರದ ಚೌಕಟ್ಟು ಬಿಟ್ಟು ಹೋಗಬಾರದು ಎಂದೂ ಭವಾನಿ ರೇವಣ್ಣ ಸಲಹೆ ನೀಡಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications