ಶಿರಡಿ ಮಂದಿರದಲ್ಲಿ 50 ಕೋಟಿಗೂ ಅಧಿಕ ಆಭರಣ

50,53,17 473 ರು ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳು ಹಾಗೂ ಕಿಸಾನ್ ವಿಕಾಸ್ ಪತ್ರಗಳಲ್ಲಿ ಹೂಡಿಕೆಗಳು ಸೇರಿದಂತೆ ಒಟ್ಟು 6,27,56,97488 ರು.ಗಳ ನಿಖರು ಠೇವಣಿಗಳನ್ನು ಹೊಂದಿದೆ.
ಚಿನ್ನ ಮತ್ತು ವಜ್ರಾಭರಣಗಳ ಮೌಲ್ಯ 2011 ಮಾರ್ಚ್ 31ಕ್ಕೆ ಇದ್ದ 39,48,67,138 ರು.ಗಳಿಗೆ ಹೋಲಿಸಿದರೆ 11,04,50,335 ರೂ.ಗಳಷ್ಟು ಏರಿಕೆಯನ್ನು ಕಂಡಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗಿದ್ದ ಶಿರಡಿಯ ಸಾಯಿಬಾಬಾ ಟ್ರಸ್ಟ್ನ ವಾರ್ಷಿಕ ವರದಿಯಂತೆ 2011, ಮಾ.31ರಂದು ಕಿಸಾನ್ ವಿಕಾಸ್ ಪತ್ರಗಳಲ್ಲಿ 40,84,00,000 ರೂಗಳನ್ನು ಹೂಡಿಕೆಯಿದ್ದರೆ 2012 ಮಾ.31ರಂದು ಅದು 23,34,00,000 ರೂ.ಗಳಷ್ಟಿದೆ.
ಮಂದಿರದ ಸುಗಮ ಆಡಳಿತಕ್ಕಾಗಿ ಮಹಾರಾಷ್ಟ್ರ ಸರಕಾರವು 2004ರಲ್ಲಿ ಈ ಟ್ರಸ್ಟ್ನ್ನು ರಚಿಸಿತ್ತು. 2011-12ನೇ ಹಣಕಾಸು ವರ್ಷದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯ ನಿರಖು ಠೇವಣಿಗಳ ಮೊತ್ತದಲ್ಲಿ 1,38,06,28,921 ರೂ.ಗಳ ಏರಿಕೆಯಾಗಿದೆ.
ಇದೇ ಅವಧಿಯಲ್ಲಿ ಮಂದಿರದ ಖಜಾನೆಗೆ 9,20,55,539 ರೂ. ಮೌಲ್ಯದ ಚಿನ್ನ ಸೇರಿಕೊಂಡಿದೆ. 2011 ಮಾ.31ಕ್ಕೆ ಖಜಾನೆಯಲ್ಲಿನ ಚಿನ್ನದ ಮೌಲ್ಯ 27,95,27,935 ರೂ.ಗಳಾಗಿದ್ದವು.
ಆದರೆ 2011-12ನೇ ಸಾಲಿನಲ್ಲಿ ಚಿನ್ನದ ನಾಣ್ಯಗಳು ಮತ್ತು ಚಿನ್ನದ ಪದಕಗಳು ಹೊಸದಾಗಿ ಸೇರಿಲ್ಲ. ಟ್ರಸ್ಟ್ನ ಬಳಿ 17,05,137 ರೂ ಮೌಲ್ಯದ ವಿದೇಶಿ ವಿನಿಮಯ ದಾಸ್ತಾನು ಇದೆ.
ಶಿರಡಿಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ 45 ಕೋ.ರೂ. ಮತ್ತು 24,69,239 ರೂ.ವೆಚ್ಚದಲ್ಲಿ ಲಂಡನ್ನಿನಲ್ಲಿ ಸಾಯಿ ಭಜನ್ ಸಂಧ್ಯಾ ಸೇರಿದಂತೆ ಒಟ್ಟು 76,74,26,961 ರೂ.ಗಳನ್ನು ಟ್ರಸ್ಟ್ ವಿವಿಧ ದತ್ತಿಕಾರ್ಯಗಳಿಗಾಗಿ ವ್ಯಯಿಸುತ್ತಿದೆ ಎಂದು ವರದಿ ಹೇಳಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಹುಂಡಿ ಕಾಸಿನ ಮೊತ್ತ, ದಾನ ಧರ್ಮದಿಂದ ಬಂದ ಹಣ 1,60,45,78,233 ರು ನಷ್ಟಿದ್ದರೆ, ಒಟ್ಟಾರೆ ದಾನದ ಮೊತ್ತ 2,06,14,96,152 ನಷ್ಟು ಸಿಕ್ಕಿದೆ.
2010ರಲ್ಲಿ 320 ಕೆಜಿ ಬೆಳ್ಳಿ ಅರ್ಪಿಸಿದ್ದ ಭಕ್ತರು ಈ ವರ್ಷ 440 ಕೆಜಿ ಬೆಳ್ಳಿ ಹುಂಡಿಗೆ ಹಾಕಿದ್ದಾರೆ. ವಿದೇಶಿ ಹಣಗಳ ಮೊತ್ತದಲ್ಲೂ ಏರಿಕೆ ಕಂಡಿದ್ದು, 2010ರಲ್ಲಿ 5.43 ಕೋಟಿ ರು ಬಂದಿತ್ತು, ಈ ಬಾರಿ 6.28 ಕೋಟಿ ರು ಸಿಕ್ಕಿದೆ ಎಂದು ಟ್ರಸ್ಟಿ ಎಂ ಕಿಶೋರ್ ವಿವರಿಸಿದ್ದಾರೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications