ಪಾಕಿಗಳ ಅಮಾನುಷ ಕೃತ್ಯಕ್ಕೆ ವ್ಯಾಪಕ ಖಂಡನೆ

ಎರಡು ದೇಶಗಳು LOC ನಿಮಗಳನ್ನು ಪಾಲಿಸಿ ವ್ಯಾಪಾರ, ವಹಿವಾಟು, ಪ್ರವಾಸಕ್ಕೆ ಆದ್ಯತೆ ನೀಡಿ, ಗುಂಡಿನ ದಾಳಿ ನಿಲ್ಲಿಸಿ, ಕಾಶ್ಮೀರದಲ್ಲಿ ಶಾಂತಿ ನೆಲೆಸುವುದನ್ನು ಅಮೆರಿಕ ಬಯಸುತ್ತದೆ ಎಂದು ಅಮೆರಿಕ ಸರ್ಕಾರ ವಕ್ತಾರೆ ವಿಕ್ಟೋರಿಯಾ ನ್ಯೂಲ್ಯಾಂಡ್ ಅವರು ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಪಾಕ್ ಯೋಧರು ಜಮ್ಮು ಮತ್ತು ಕಾಶ್ಮೀರದೊಳಕ್ಕೆ ನುಗ್ಗಿ ಇಬ್ಬರು ಭಾರತೀಯ ಯೋಧರನ್ನು ಬರ್ಬರವಾಗಿ ಕತ್ತು ಕೊಯ್ದು ಸಾಯಿಸಿದ್ದಾರೆ. ಕದನ ವಿರಾಮ ಒಪ್ಪಂದ ಉಲ್ಲಂಘಿಸಿರುವುದು ಆಘಾತಕಾರಿ, ಪ್ರಚೋದನಕಾರಿ ಎಂದು ಸಚಿವ ಸಲ್ಮಾನ್ ಅಭಿಪ್ರಾಯಪಟ್ಟಿದ್ದಾರೆ.
ಗಡಿ ದಾಟಿ ನಮ್ಮ ನೆಲಕ್ಕೆ ಕಾಲಿರಿಸಿದ ಪಾಕ್ ಯೋಧರು ಪೂಂಛ್ ಜಿಲ್ಲೆ ಗಡಿ ಪ್ರದೇಶದ ಛತ್ರಿ ಮತ್ತು ಆತ್ಮಾ ಸೇನಾ ಪೋಸ್ಟ್ ಬಳಿ ಇಬ್ಬರು ಯೋಧರನ್ನು ಗಂಟಲು ಸೀಳಿ ಹತ್ಯೆಗೈದಿರುವುದನ್ನು ಅಮೆರಿಕ ಸೇರಿದಂತೆ ಹಲವಾರು ದೇಶದ ರಾಯಭಾರಿಗಳು ಖಂಡಿಸಿದ್ದಾರೆ.
ಪಾಕಿಗಳ ಪೈಶಾಚಿಕ ಕೃತ್ಯ : ಒಬ್ಬ ಸೈನಿಕನ ರುಂಡ ಕತ್ತರಿಸಿ ಹೊತ್ತೊಯ್ದಿದ್ದಾರೆ. ಅಲ್ಲದೆ, ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕದ್ದೊಯ್ದಿದ್ದಾರೆ. ಪಾಕಿಗಳು ಗಡಿ ಪ್ರದೇಶದ ಆರೇಳು ಕಡೆ ಗುಂಡಿನ ದಾಳಿ ನಡೆಸಿದ್ದಾರೆ.
ಮೃತ ಯೋಧರನ್ನು ಹೇಮರಾಜ್ ಮತ್ತು ಸುಧಾಕರ್ ಸಿಂಗ್ ಗುರುತಿಸಿಲಾಗಿದೆ. ಕದನ ವಿರಾಮ ಉಲ್ಲಂಘಿಸಿ ಗಡಿ ನುಸುಳಿ ಬಂದ ಪಾಕ್ನ ಬಲೂಚ್ 29ನೇ ರೆಜಿಮೆಂಟ್ನ ಯೋಧರು.
ನಮ್ಮ 13ನೇ ರಜಪೂತ್ ಪಠಾಣ್ ರೆಜಿಮೆಂಟ್ಗೆ ಸೇರಿದ ಹೇಮ್ರಾಜ್, ಸುಧಾಕರ್ ಸಿಂಗ್ ಅವರ ಕುತ್ತಿಗೆ ಸೀಳಿ ಹತ್ಯೆ, ಮತ್ತೆ ಮೂವರು ಯೋಧರಿಗೆ ಗಾಯ ಮಾಡಲಾಗಿದೆ. ಹಳೆ ದ್ವೇಷವನ್ನು ಸಾಧಿಸಿದ ಪಾಕಿಗಳ ಕೃತ್ಯಕ್ಕೆ ಎಲ್ಲೆಡೆಯಿಂದ ವ್ಯಾಪಕ ಟೀಕೆಗಳ ಸುರಿಮಳೆ ಹರಿದಿದೆ.
ಹಾಜಿ ಪಿರ್ ಗಡಿಯಲ್ಲಿ ಪಾಕ್ ಯೋಧರ ಕ್ಯಾತೆ ಖಂಡಿಸಿ ಇಸ್ಲಾಮಾಬಾದ್ಗೆ ಕರೆ ಮಾಡಿದ್ದ ಭಾರತೀಯ ಉಪ ಹೈಕಮೀಷನರ್ ಗೋಪಾಲ್ ಬಾಗ್ಲೈ ಸೋಮವಾರವಷ್ಟೇ ಪಾಕ್ ಯೋಧರ ಕೃತ್ಯ ಕುರಿತು ಚರ್ಚೆ ನಡೆಸಿದ್ದರು. ಆದರೆ, ಪಾಕಿಸ್ತಾನದ ಈ ಕೃತ್ಯದಿಂದ ಶಾಂತಿ ಮಾತುಕತೆ ಮುಂದುವರೆಸುವುದು ದುಸ್ತರವಾಗಲಿದೆ.
ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಂದ ಪ್ರತಿಕ್ರಿಯೆಗಳು:
Tarek Fatah @TarekFatah : Pakistan Army playing a dangerous game in attempt to thwart democratic process in Islamabad by a border war with India.
Smriti Z Irani @smritiirani : Crossing of LOC, mutilation of Indian soldiers-- aman ki asha anyone???
MediaCrooks @mediacrooks : Dear @ndtv @ibnlive @thenewshour @rahulkanwal .. Did you locate and check the feelings of the family whose men were killed at the #LOC??
Sunanda Vashisht @sunandavashisht : 2 ArmyJawans killed on LOC in major cease fire violation.. GOI should immediately demand for more Indo-Pak cricket matches to be played
Avinash Bhat @avinashbhat01 : Even jihadis infiltrating across LoC into J&K hav better night vision devices thn lavishly funded Indian Army..Shame!
Shiv Aroor @ShivAroor : Thriller at Kotla. Killer at LoC. Good day for Indo-Pak confidence building.
ಈ ಹಿಂದಿನ ಕದನ ವಿರಾಮ ಉಲ್ಲಂಘನೆ:
* 1999ರಲ್ಲಿ ಕಾರ್ಗಿಲ್ ಯುದಟಛಿದ ವೇಳೆಯೂ ಪಾಕ್ ಸೈನಿಕರು ಮಾನವೀಯತೆಯನ್ನೇ ಮರೆತಿದ್ದರು. ಅಂದಿನ
ಘರ್ಷಣೆಯಲ್ಲಿ ಕ್ಯಾಪ್ಟನ್ ಸೌರಭ್ ಕಾಲಿಯಾ ಮತ್ತವರ ತಂಡದ ಮೇಲೆ ಪಾಕ್ನ ಕಾಕ್ಸಾರ್ ವಿಭಾಗದ ಸೈನಿಕರು ಹೇಯ ದಾಳಿ ನಡೆಸಿದ್ದರು.
* 2009 ರಲ್ಲಿ 51 ಕದನ ವಿರಾಮ ಉಲ್ಲಂಘನೆ
* 2010ರಲ್ಲಿ 28 ಬಾರಿ ಪಾಕ್ ಸೈನಿಕರ ಉಪಟಳ
* 2011ರಲ್ಲಿ 44 ಬಾರಿ ಪಾಕಿಗಳು ಶಾಂತಿ ಕದಡಿದ್ದಾರೆ.
* 2012ರಲ್ಲಿ ಉತ್ತರ ಕಾಶ್ಮೀರದ ಚುರುಂಡಾ ಪ್ರದೇಶದ ಉರಿ ವಿಭಾಗದಲ್ಲಿ ಪಾಕಿಸ್ಥಾನ ಸೈನಿಕರ ಗುಂಡಿಗೆ
ಮೂವರು ನಾಗರಿಕರು ಬಲಿಯಾಗಿದ್ದರು.
* ಕಳೆದ ಒಂದು ವರ್ಷದಲ್ಲಿ ಪಾಕಿಸ್ಥಾನ 71 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಉಭಯ ಸೈನಿಕರ ಮಧ್ಯೆ
71 ಬಾರಿ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ನಾಲ್ವರು ಸೇನಾಧಿಕಾರಿಗಳು ಸೇರಿದಂತೆ 7 ಮಂದಿ
ಅಸುನೀಗಿದ್ದು, 15 ಮಂದಿ ಗಾಯಗೊಂಡಿದ್ದರು.
ಆದರೆ, ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ಕದನ ವಿರಾಮ ಉಲ್ಲಂಘಿಸಿಲ್ಲ. ಗಡಿ ದಾಟಿಲ್ಲ. ನಾವುದೇ ಪ್ರಚೋದನಕಾರಿ ದಾಳಿ ನಡೆಸಿಲ್ಲ ಎಂದು ಪ್ರತಿಕ್ರಿಯಿಸಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications