ಸಬ್ಸಿಡಿ ಸಿಲಿಂಡರ್: ಹಣಕಾಸು ಸಚಿವಾಲಯದ ಬಾಂಬ್

'ಸ್ವಲ್ಪ ತಡೆದುಕೊಳ್ಳಿ, ಗುಜರಾತ್ ಚುನಾವಣೆ ಮುಗಿಯಲಿ 6/12 ಅನ್ನು 9/12ಕ್ಕೆ ಏರಿಸುತ್ತೇವೆ' ಎಂದು ಕರ್ನಾಟಕದವರೇ ಆದ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರು ಹೇಳಿದ್ದೇ ಹೇಳಿದ್ದು. ಆದರೆ ಹಣಕಾಸು ಸಚಿವಾಲಯ ಮಾತ್ರ ಅಂಥಾದ್ದೇನೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದೆ.
ಆತಂಕಕಾರಿಯೆಂದರೆ ಹಣಕಾಸು ಸಚಿವಾಲಯದ 'ಇಂಥದ್ದೊಂದು ಕಠಿಣ ನಿಲುವನ್ನು ತೆಗೆದುಕೊಳ್ಳುತ್ತೆದೆ' ಎಂದು ಪರಿಭಾವಿಸಿ, ಮೊಯ್ಲಿ ಸಾರಥ್ಯದ ಪೆಟ್ರೋಲಿಯಂ ಸಚಿವಾಲಯ ಇದುವರೆಗೆ ಎಲ್ಪಿಜಿ ಮಿತಿಯನ್ನು 9ಕ್ಕೆ ಏರಿಸುವ ಸಂಬಂಧ ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸುವ ಗೋಜಿಗೂ ಹೋಗಿಲ್ಲ ಎನ್ನಲಾಗಿದೆ.
'ಈಗಾಗಲೇ ಕೇಂದ್ರ ಸರಕಾರದ ಹಣಕಾಸು ಪರಿಸ್ಥಿತಿ ಶೋಚನೀಯವಾಗಿದೆ. ಅಂಥಾದ್ಧರಲ್ಲಿ LPG ಮಿತಿಯನ್ನು 9ಕ್ಕೆ ಏರಿಸಿದರೆ ಅದರಿಂದ 3,000 ಕೋಟಿ ರೂ. ಹೊರೆ ಹೊರಬೇಕಾಗುತ್ತದೆ. ಅದು ಅಸಾಧ್ಯ' ಎಂದು ಹಣಕಾಸು ಸಚಿವಾಲಯ ವಾದಿಸುತ್ತಿದೆ.
ಜತೆಗೆ 'ಸಬ್ಸಿಡಿ ಹೊರೆ ಕಡಿಮೆ ಮಾಡುವ ಕಾರಣಕ್ಕಾಗಿಯೇ 6 ಸಿಲಿಂಡರ್ಗಳ ಮಿರಿ ಹೇರಿರುವಾಗ ಆ ಮಿತಿಯನ್ನು ಸಡಿಲಿಕೆ ಮಾಡುವುದರಿಂದ ಅದರ ಆಶಯಕ್ಕೇ ಭಂಗಬರುವುದಿಲ್ವೇ?' ಎಂದು ಸಚಿವವಾಲಯ ಪ್ರಶ್ನಿಸಿದೆ. ಅಲ್ಲಿಗೆ 9/12 ಕನಸಿಗೆ ಎಳ್ಳುನೀರು ಬಿಟ್ಟಂತೆಯೇ ಸರಿ.
ಆದರೂ ಕೇಂದ್ರ ಸಚಿವಾಲಯ ಜನಸಾಮಾನ್ಯನನ್ನು ನಿರಾಶೆಗೊಳಿಸಲು ಸಿದ್ಧವಿಲ್ಲ. ಆತನ ಕನಸುಕಾಣುವಿಕೆ ಸದಾ ಜಾರಿಯಲ್ಲಿರಲಿ ಎಂದು 'ಮುಂದಿನ ಬಜೆಟ್ ಬಳಿಕ, ಯಾವುದಾದರೂ ಹೊಸ ಮೂಲದಿಂದ ಹಣ ಹೊಂದಾಣಿಕೆ ಮಾಡಿ ಈಗಿನ ಮಿತಿಯನ್ನು ಸಡಿಲಿಸುತ್ತೇವೆ, ಏನೂ ವರಿ ಮಾಡ್ಕೋಬೇಡಿ' ಎಂದು ಹಣಕಾಸು ಸಚಿವಾಲಯ ಭರವಸೆ ನೀಡಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications