ಹೊಸ ವರ್ಷಾಚರಣೆ ಅಪಘಾತಕ್ಕೆ ಮಹಿಳಾ ಟೆಕ್ಕಿ ಬಲಿ

ITPL ಬಳಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಜಯಶ್ರೀ, ಪತಿ ಪ್ರಸನ್ನ ರಾವ್ ಜತೆ ಬನಶಂಕರಿಯ ಕತ್ರಿಗುಪ್ಪೆಯಲ್ಲಿರುವ ಅಪಾರ್ಟ್ ಮೆಂಟಿನಲ್ಲಿ ವಾಸವಿದ್ದರು. ಹೊಸ ವರ್ಷಕ್ಕೆ ರಜೆ ಇದ್ದ ಕಾರಣ ಬಸವೇಶ್ವರ ನಗರದಲ್ಲಿ ಮಾವ ಚಂದ್ರಶೇಖರ್ ಅವರನ್ನು ನೋಡಲು ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು.
ನಾಗರಬಾವಿ ನ್ಯೂ ಬಿಡಿಎ ರಿಂಗ್ ರಸ್ತೆ, ಐಟಿಐ ಲೇ ಔಟ್ ಜಂಕ್ಷನ್ ಸಮೀಪ ಮಂಗಳವಾರ ಮಧ್ಯಾಹ್ನ 1 ಗಂಟೆಯಲ್ಲಿ ಹಿಂದಿನಿಂದ ಬಂದ ಕ್ಯಾಂಟರ್, ಜಯಶ್ರೀ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಜಯಶ್ರೀ ಅವರ ಮೇಲೆ ಕ್ಯಾಂಟರ್ ಹಿಂದಿನ ಚಕ್ರ ಹರಿದಿದೆ. ಮತ್ತೊಂದು ಕಡೆ ಬಿದ್ದ ನಿಖಿಲ್ ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸಂಚಾರ ಪೊಲೀಸರು ತಿಳಿಸಿದರು.
ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಅಪಘಾತಕ್ಕೆ ಕಾರಣವಾಗಿದೆ. ಅಪಘಾತ ಮಾಡಿದ ಚಾಲಕ ಆಂಧ್ರ ಪ್ರದೇಶ ನೋಂದಣಿಯ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಬ್ಯಾಟರಾಯನಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications