35 ಶಾಸಕರಿಗೆ ವಿದೇಶದಲ್ಲಿ ನ್ಯೂ ಇಯರ್ ಪಾರ್ಟಿ

ಇದೇ ಡಿಸೆಂಬರ್ 19ರಿಂದ ಆರಂಭವಾಗಲಿದೆ ಇವರ 'ಕೊಲಂಬಸ್ ಡಿಸ್ಕವರಿ'. ಇದು ಜನವರಿ 5ರವರೆಗೂ ನಿಗದಿಯಾಗಿದೆ. ಆಸ್ಟ್ರೇಲಿಯಾ, ಹಾಂಗ್ಕಾಂಗ್, ಮಲೇಷಿಯಾ ಮತ್ತು ಮಕಾವ್ ದೇಶಗಳನ್ನು ಸುತ್ತಾಡಲಿದ್ದಾರೆ ನಮ್ಮೀ ಜನನಾಯಕರು. ಈ ಪ್ರವಾಸದ ಬಾಬತ್ತಿಗೆ ಸರಕಾರ ಈಗಾಗಲೇ ಹಣ ಬಿಡುಗಡೆ ಮಾಡಿದ್ದು, ವಿಮಾನ ಯಾನದ ಟಿಕೆಟ್ಗಳು ಸಹ ಬುಕ್ ಆಗಿವೆ ಎನ್ನಲಾಗಿದೆ.
ಪುಟ್ಟಣ್ಣ, ಪ್ರತಾಪ ಚಂದ್ರ ಶೆಟ್ಟಿ, ಶಶಿಲ್ ನಮೋಶಿ, ಎಸ್ ಆರ್ ಪಾಟೀಲ್, ಕೆಬಿ ಶಾಣಪ್ಪ, ಅಶ್ವತ್ಥನಾರಾಯಣ, ವೈಎ ನಾರಾಯಣಸ್ವಾಮಿ ಹಾಗೂ ಮರಿತಿಬ್ಬೇಗೌಡ, ಟಿ. ಜಾನ್, ನಾರಾಯಣ ಬಾಂಡಗೆ, ಮಹಾಂತೇಶ ಕೌಜಲಗಿ, ಭಾರತಿ ಶೆಟ್ಟಿ, ಅರುಣ್ ಶಹಾಪೂರ್ ಹೀಗೆ ಒಟ್ಟು 35 ಜನರು ವಿದೇಶ ಪ್ರವಾಸ ಕೈಗೊಳ್ಳಲು ಸಜ್ಜಾಗಿದ್ದಾರೆ ಎಂದು ವಿಧಾನ ಪರಿಷತ್ತಿನ ಸಚಿವಾಲಯದ ಮೂಲಗಳು ಖಚಿತ ಪಡಿಸಿವೆ.
ಪ್ರತಿಯೊಬ್ಬ ಜನನಾಯಕ(ಕಿ)ಗೂ ಪ್ರವಾಸ ಸಂದರ್ಭದಲ್ಲಿ ಸರಕಾರ ಕೇವಲ 5.5 ಲಕ್ಷ ರೂಪಾಯಿ ಖರ್ಚು ಮಾಡಲಿದೆ. ಅಂದರೆ 5.5 x 35 ~ 2 ಕೋಟಿ ರೂ.
ಇನ್ನು ನಮ್ಮೀ ಮೇಲ್ಮನೆ ಸದಸ್ಯರು ಖಂಡಿತಾ ಒಬ್ಬೊಬ್ಬರೇ ಹೋಗೊಲ್ಲ. ತಮ್ಮ ಕುಟುಂಬ ಸದಸ್ಯರನ್ನೂ ಕರೆದೊಯ್ಯುವುದು ಖಂಡಿತಾ. ಆದರೆ ಅವರ ಖರ್ಚು-ವೆಚ್ಚವನ್ನು ಅವರವರೇ ಹೊರಬೇಕು ಎಂದು ಎಲ್ಲ ಸದಸ್ಯರಿಗೆ ಸಚಿವಾಲಯ ಸೂಚಿಸಿದೆ. ಅಷ್ಟೇ ಅಲ್ಲ.
ಇಷ್ಟಕ್ಕೂ ಯಾಕೀ ಪ್ರವಾಸ?:
ಅಂದರೆ ಈ ಹಿಂದೆ ವಿಧಾನಸಭೆ ಸದಸ್ಯರು ಪ್ರವಾಸ ಕೈಗೊಂಡಾಗ ಅಲ್ಲಿ, ಕೃಷಿ, ಅಭಿವೃದ್ಧಿ ಚಟುವಟಿಕೆಗಳನ್ನು ವೀಕ್ಷಿಸಲು ಪ್ರವಾಸ ಕೈಗೊಂಡಿದ್ದಾಗಿ ತಿಳಿಸಿದ್ದರು. ಇದೀಗ ಈ ಎರಡು ಸಮಿತಿ ಸದಸ್ಯರು ಕೂಡ ಪ್ರವಾಸದಲ್ಲಿ ಅಭಿವೃದ್ಧಿ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರಂತೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications