ಮರಣದಂಡನೆ : ಗಲ್ಲಿಗೇರಿಕೆ ಎಂಬ ಡೆಡ್ಲಿ ಪ್ರೊಸಿಜರ್
ಬೆಂಗಳೂರು, ನ. 21 : 2008ರ ನವೆಂಬರ್ 26ರಂದು ಮುಂಬೈನಲ್ಲಿ ನೂರಾರು ಅಮಾಯಕ ಜನರನ್ನು ನಿರ್ದಯವಾಗಿ ಗುಂಡಿಕ್ಕಿ ಕೊಂದ ಪಾಪಿ ಅಜ್ಮಲ್ ಕಸಬ್ನ ಕುತ್ತಿಗೆಗೆ 21ನೇ ನವೆಂಬರ್ 2012 ಬೆಳಿಗ್ಗೆ ಕುಣಿಕೆ ಬಿದ್ದ ಕ್ಷಣದಿಂದ ಗೆಲುವಿನ ಕೇಕೆ ಹಾಕಿದ ದನಿಗಳೆಷ್ಟೋ, ಪಟಾಕಿ ಹಾರಿಸಿ ಸಂಭ್ರಮಿಸಿದ ಜನರೆಷ್ಟೋ, ಆನಂದಭಾಷ್ಪ ಹರಿಸಿದ ಕಣ್ಣುಗಳೆಷ್ಟೋ, ಮಿಡಿದ ಹೃದಯಗಳೆಷ್ಟೋ.
ಆದರೆ, ಉಗ್ರ ಪಾತಕಿಯನ್ನು ಗಲ್ಲಿಗೇರಿಸಿದ ಆ ಕ್ಷಣ ಆ ಸ್ಥಳದಲ್ಲಿದ್ದ ಜೈಲಿನ ಅಧಿಕಾರಿಗಳು, ಕೆಲವೇ ಸಿಬ್ಬಂದಿಗಳು, ಸ್ಥಳೀಯ ಮ್ಯಾಜಿಸ್ಟ್ರೇಟ್, ನೇಣಿನ ಕುಣಿಕೆ ಎಳೆದ ಗಟ್ಟಿಗುಂಡಿಗೆಯ ಅಧಿಕಾರಿ, ಹಾಗು ಕಡೆಗೆ ನೇಣಿಗೇರಿದ ಅಜ್ಮಲ್ ಕಸಬ್ ಹೃದಯ ಯಾವ ರೀತಿ ಬಡಿಯುತ್ತಿತ್ತು ಬಲ್ಲವರಾರು? ವಿರಳಾತಿ ವಿರಳ ಅಪರಾಧವನ್ನು ಎಸಗಿದ ಅಪರಾಧಿಯನ್ನು ಗಲ್ಲಿಗೇರಿಸುವ ವಿಧಿವಿಧಾನವೇ ಅಂತಹುದು.

ಗಲ್ಲಿಗೇರಿಸುವ ವಿಧಾನ ಹೀಗಿದೆ
* ಗಲ್ಲಿಗೇರಿಸುವುದು ಖಚಿತವಾದ ಮೇಲೆ ನ್ಯಾಯಾಲಯದ ಆದೇಶದ ಪ್ರತಿ ಅಪರಾಧಿಯ ಕುಟುಂಬದವರಿಗೆ ತಿಳಿಸಲಾಗುವುದು
* ಹ್ಯಾಂಗ್ಮನ್ಗೆ ಕೂಡ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಜೈಲರ್ ತಿಳಿಸುತ್ತಾರೆ.
* ನೇಣಿಗೆ ಹಾಕುವ ದಿನ ಅಪರಾಧಿ ಆರೋಗ್ಯದಿಂದಿರುವಂತೆ ನೋಡಿಕೊಳ್ಳಲಾಗುತ್ತದೆ.
* ಗಲ್ಲಿಗೇರಿಸುವ ಹಿಂದಿನ ದಿನವೇ ಹ್ಯಾಂಗ್ಮನ್ ವರ್ಷಗಳಿಂದ ಜಡ್ಡುಗಟ್ಟಿದ ಸಾಧನಕ್ಕೆ ಆರೈಕೆ ಮಾಡಿ ಎಲ್ಲ ಸರಿಯಾಗಿರುವಂತೆ ನೋಡಿಕೊಳ್ಳುತ್ತಾನೆ.
* ಮರಳಿನ ಚೀಲವನ್ನು ಬಳಸಿ ನೇಣುಗಂಬ ಗಟ್ಟಿಯಾಗಿದೆಯಾ ಇಲ್ಲವಾ ಎಂಬುದನ್ನು ಪರೀಕ್ಷಿಸುತ್ತಾನೆ.
* ಮನಿಲಾ ರೋಪ್ ಎನ್ನುವ ಮೇಣಬಳಿದ ವಿಶೇಷವಾದ ನೇಣುಹಗ್ಗವನ್ನು ಬಿಹಾರದ ಬಕ್ಸಾರ್ ಜೈಲಿನಿಂದ ತರಿಸಲಾಗುತ್ತದೆ.
* ಅಪರಾಧಿಯ ಎತ್ತರ, ಕತ್ತಿನ ಸುತ್ತಳತೆ, ಆತನ ತೂಕಕ್ಕೆ ತಕ್ಕಂತೆ ನೇಣುಹಗ್ಗವನ್ನು ಕೂಡ ಅಡ್ಜಸ್ಟ್ ಮಾಡಲಾಗುತ್ತದೆ.
* ನೇಣಿಗೇರಿಸುವ ದಿನ ಮ್ಯಾಜಿಸ್ಟ್ರೇಟ್, ಜೈಲಿನ ಹಿರಿಯ ಅಧಿಕಾರಿಗಳು, ವೈದ್ಯರು ಮತ್ತು ಅಪರಾಧಿಯ ಕುಟುಂಬದವರು ಹಾಜರಿರುತ್ತಾರೆ. ಸಮಾಜದ ಗಣ್ಯರು ಕೂಡ ಹಾಜರಿರಬಹುದು.
* ಗಲ್ಲಿಗೇರಿಸುವ ಕೆಲ ತಾಸುಗಳ ಮೊದಲು ಅಪರಾಧಿಗೆ ಆತ ಮಾಡಿರುವ ಅಪರಾಧದ ಬಗ್ಗೆ ಮತ್ತೆ ಮತ್ತು ಕಡೆಯ ಇಚ್ಛೆ ಏನೆಂದು ಹೇಳಲಾಗುವುದು
* ಅಪರಾಧಿಯನ್ನು ಗಲ್ಲುಗಂಬದ ಮೇಲೆ ನಿಲ್ಲಿಸಿ ಕೈಗಳನ್ನು ಹಿಂದೆ ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಲಾಗುವುದು.
* ಆತನ ಕುತ್ತಿಗೆಗೆ ಕಪ್ಪುಬಟ್ಟೆ ತೊಡಿಸಿ ಕುತ್ತಿಗೆಗೆ ನೇಣುಹಗ್ಗವನ್ನು ಹಾಕಲಾಗುವುದು.
* ನೇಣು ಬೀಳುವ ಕೆಲ ಕ್ಷಣ ಮೊದಲು ಹ್ಯಾಂಗ್ಮನ್ ಅಪರಾಧಿಯ ಕಿವಿಯಲ್ಲಿ 'ನಾನು ಆಜ್ಞಾಧಾರಕ ಅಷ್ಟೆ. ದಯವಿಟ್ಟು ನನ್ನ ಕ್ಷಮಿಸು. ನಾನು ಹುಕುಂ ಪಾಲಿಸುವ ಗುಲಾಮನಷ್ಟೆ' ಎಂದು ಉಸುರುತ್ತಾನೆ.
* ಮ್ಯಾಜಿಸ್ಟ್ರೇಟ್ ಆಜ್ಞೆ ನೀಡುತ್ತಿದ್ದಂತೆ ಹ್ಯಾಂಗ್ಮನ್ ಕಬ್ಬಿಣದ ಲಿವರ್ ಆಪರೇಟ್ ಮಾಡುತ್ತಾನೆ.
* ಅಪರಾಧಿಯ ಜೀವ ಹೋಗುವವರೆಗೆ ಕುಣಿಕೆಯಲ್ಲಿಯೇ ಇಡಲಾಗುವುದು. ಆತ ನಿಶ್ಚೇಷ್ಟಿತನಾಗುತ್ತಿದ್ದಂತೆ ಕೆಳಗಿಳಿಸಿ, ಪ್ರಾಣ ಹೋಗಿದೆಯೋ ಇಲ್ಲವೋ ಎಂಬ ಕುರಿತು ವೈದ್ಯರಿಂದ ಪರೀಕ್ಷೆ ಮಾಡಲಾಗುವುದು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications