ಎಚ್ ಪಿಯಲ್ಲಿ 8.8 ಬಿಲಿಯನ್ ಡಾಲರ್ ವಂಚನೆ

ಕಾರ್ಪೋರೇಟ್ ವಲಯದ ಅತಿ ದೊಡ್ಡ ವಂಚನೆ ಇದಾಗಿದ್ದು, ಮಾಜಿ ಉದ್ಯೋಗಿಗಳಿಂದ ಎಚ್ ಪಿ ಸಂಸ್ಥೆಗೆ ಭಾರಿ ನಷ್ಟ ಉಂಟಾಗಿದೆ. ಕಂಪನಿ ಸ್ವಾಯುತ್ತತೆ ನೀಡುವ ಮ್ಯಾನೇಜ್ಮೆಂಟ್ ಸಮಿತಿಯಲ್ಲಿದ್ದ ಸದಸ್ಯರು autonomy ಕಂಪನಿ ಲೆಕ್ಕಾಚಾರ ದಾಖಲೆಗಳನ್ನು ತಪ್ಪಾಗಿ ನೀಡಿದ್ದು ಭಾರಿ ವಂಚನೆಗೆ ದಾರಿ ಮಾಡಿದೆ ಎಂದು ಎಚ್ ಪಿ ಹೇಳಿದೆ.
2012ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಈ ವಂಚನೆ ಬಗ್ಗೆ ಎಚ್ ಪಿ ಸಂಸ್ಥೆಗೆ ಗೊತ್ತಾಗಿದೆ. autonomy ಸಂಸ್ಥೆ ವಿರುದ್ಧ ತನಿಖೆಗೆ ಎಚ್ ಪಿ ಸಂಸ್ಥೆ ಆಗ್ರಹಿಸಿದೆ.
ಸುದ್ದಿ ಹಬ್ಬುತ್ತಿದ್ದಂತೆ ಎಚ್ ಪಿ ಸಂಸ್ಥೆ ಷೇರುಗಳು ಶೇ 12 ರಷ್ಟು ಕುಸಿತ ಕಂಡಿದ್ದು, ಇನ್ನಷ್ಟು ಕುಸಿಯುವ ಭೀತಿ ಎದುರಿಸುತ್ತಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಹೊರಹಾಕಲು ಎಚ್ ಪಿ ವಿಫಲವಾಗಿತ್ತು.
ಅಕ್ಟೋಬರ್ 31ಕ್ಕೆ ಅನ್ವಯವಾಗುವಂತೆ 6.9 ಬಿಲಿಯನ್ ಡಾಲರ್ ನಷ್ಟು ನಿವ್ವಳ ನಷ್ಟ ಅನುಭವಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 0.2 ಬಿಲಿಯನ್ ಡಾಲರ್ ನಷ್ಟ ಉಂಟಾಗಿತ್ತು.
ಯುಎಸ್ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಕಮೀಷನ್ ಎನ್ ಫೋರ್ಸ್ ಮೆಂಟ್ ಡಿವಿಷನ್ ಹಾಗೂ ಯುಕೆಯ ಸೀರಿಯಸ್ ಫ್ರಾಡ್ ಆಫೀಸ್ -ಸಿವಿಲ್ ಹಾಗೂ ಕ್ರಿಮಿನಲ್ ವಿಭಾಗಕ್ಕೆ ದೂರು ನೀಡಿರುವುದಾಗಿ ಎಚ್ ಪಿ ಸಂಸ್ಥೆ ಹೇಳಿದೆ. ಅಲ್ಲದೆ, ಆಂತರಿಕ ತನಿಖೆ ಕೂಡಾ ಮುಂದುವರೆದಿದೆ.
ನೆಲಕಚ್ಚಿದ ಎಂಫಾಸಿಸ್ ಷೇರು: ಎಚ್ ಪಿ ಹಿಡಿತದಲ್ಲಿರುವ ಎಂಫಾಸಿಸ್ ಸಂಸ್ಥೆ ಷೇರುಗಳು ಶೇ 2.8ರಷ್ಟು ಕುಸಿತ ಕಂಡಿದೆ. ಬ್ರಿಟಿಷ್ ಮೂಲದ ಸಾಫ್ಟ್ ವೇರ್ ಸಂಸ್ಥೆ ಅಟಾನಮಿ ಸಂಸ್ಥೆ ಮಾಡಿದ ವಂಚನೆ ಪರಿಣಾಮ ಎಂಫಾಸಿಸ್ ಮೇಲೂ ಆಗಿದೆ.
ಬಿಎಸ್ ಇನಲ್ಲಿ 386 ರು ನಂತೆ ಮಂಗಳವಾರ ತನ್ನ ವಹಿವಾಟು ನಿಲ್ಲಿಸಿತ್ತು. ಬುಧವಾರ(ನ.21) ಮಧ್ಯಾಹ್ನದ 3.25ರ ವೇಳೆಗೆ 395 ರು ನಂತೆ ಶೇ 3 ರಷ್ಟು ಇಳಿಕೆ ಕಂಡಿದೆ ಎಂಫಾಸಿಸ್ ಸಂಸ್ಥೆ ಅಪ್ಲಿಕೇಷನ್ ಸರ್ವೀಸಸ್, ಮೂಲಸೌಕರ್ಯ ಸೇವೆ, ಬಿಪಿಒ ಹೊರಗುತ್ತಿಗೆ ಸೇವೆಗಳನ್ನು ಜಾಗತಿಕವಾಗಿ ನೀಡುತ್ತಿದೆ.
(ಪಿಟಿಐ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications