ತಾಕತ್ತಿದ್ರೆ ಯಡಿಯೂರಪ್ಪಗೆ ನೋಟಿಸ್ ಕೊಡ್ರಿ

ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿ ಮೊದಲ ಬಾರಿ ಕೆಜೆಪಿ ಮುಖಂಡರ ಸಭೆ ನಡೆಸಿದ ಧನಂಜಯ್ ಕುಮಾರ್ ಅವರು ಈ ರೀತಿ ಸವಾಲು ಹಾಕಿದರು.
ಯಡಿಯೂರಪ್ಪ ಅವರು ಪಕ್ಷ ತೊರೆಯುವುದು ಖಾತ್ರಿಯಾಗುತ್ತಿದ್ದಂತೆ ಬಿಜೆಪಿ ನಾಯಕರು ಬಿಎಸ್ ವೈ ಅವರ ಕೈಕಾಲು ಹಿಡಿದು ಕೊಂಡು ಬೇಡಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅವರ ಮನ ನೊಂದಿದೆ. ಅವರು ಮತ್ತೆ ಹಿಂತಿರುಗಿ ನೋಡುವುದಿಲ್ಲ ಎಂದು ಧನಂಜಯ್ ಕುಮಾರ್ ಹೇಳಿದರು.
ಯಡಿಯೂರಪ್ಪ ಅವರನ್ನು ಕಿತ್ತೊಗೆಯುವ ಧೈರ್ಯ ಬಿಜೆಪಿಗೆ ಇಲ್ಲ. ಹೀಗಾಗಿ ಒಬ್ಬೊಬ್ಬರಾಗಿ ಸಂಧಾನ ನಡೆಸುತ್ತಲೇ ಇದ್ದಾರೆ. ಆದರೆ, ಇದೆಲ್ಲವೂ ವಿಫಲವಾಗುತ್ತದೆ. ಕೆಜೆಪಿ ಕಟ್ಟುವುದು ಖಾತ್ರಿಯಾಗಿದೆ. ಆದರೂ ಬಿಜೆಪಿ ಅವರು ಯಡಿಯೂರಪ್ಪ ಅವರ ಹಿಂದೆ ಬಿದ್ದಿರುವುದು ನಗು ತರಿಸುತ್ತದೆ ಎಂದರು.
ಮೈಸೂರು ಉಸ್ತುವಾರಿ ಸಚಿವ ರಾಮದಾಸ್ ಅವರು ಒಂದು ಕಾಲದಲ್ಲಿ ಯಡಿಯೂರಪ್ಪ ಅವರ ಕಾಲು ಹಿಡಿದು ಗೋಗೆರದು ಸಚಿವ ಸ್ಥಾನ ಗಿಟ್ಟಿಸಿಕೊಂಡರು. ಈಗ ಅವರ ವಿರುದ್ಧವೇ ದನಿ ಎತ್ತುತ್ತಿದ್ದಾರೆ. ರಾಮದಾಸ್ ಗೆ ಕೇಡುಗಾಲ ಬಂದಿದೆ. ಮುಂದಿನ ಚುನಾವಣೆಯಲ್ಲಿ ಮೈಸೂರು ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಧನಂಜಯ್ ಹೇಳಿದರು.
ಯಡಿಯೂರಪ್ಪ ಬೆಂಬಲಿಗರ ವಿರುದ್ದ ಬಿಜೆಪಿ ಕ್ರಮ ಕೈಗೊಂಡರೆ ಸರ್ಕಾರ ಆತ್ಮಹತ್ಯೆ ಮಾಡಿಕೊಂಡಂತೆ. ಹಾವೇರಿಯಲ್ಲಿ ಡಿ.9 ರಂದು ನಡೆಯುವ ಸಮಾರಂಭಕ್ಕೆ ಬಿಜೆಪಿ ಸರ್ಕಾರದ ಸುಮಾರು 45 ಶಾಸಕರು, ಸಚಿವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ನಾವು ಯಾರ ಮೇಲೂ ಒತ್ತಡ ಹಾಕಿಲ್ಲ ಎಂದು ಧನಂಜಯ್ ಕುಮಾರ್ ತಿಳಿಸಿದರು.
ಡಿವಿ ಸದಾನಂದ ಗೌಡ ಉಂಡಮನೆಗೆ ದ್ರೋಹ ಬಗೆದ ವ್ಯಕ್ತಿ. ಅವರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಧನಂಜಯ್ ಕುಮಾರ್ ಸುಮ್ಮನಾದರು. ಧನಂಜಯ್ ಕುಮಾರ್ ಅವರು ಸೆಕೆಂಡ್ ಹ್ಯಾಂಡ್ ರಾಜಕಾರಣಿ ಎಂದು ಸದಾನಂದ ಗೌಡ ಲೇವಡಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
'ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ಅನವಶ್ಯಕವಾಗಿ ಜೈಲಿಗೆ ಕಳುಹಿಸಿದರು ಅಂಥವರಿಗೆ ತಕ್ಕ ಪಾಠ ಕಲಿಸಬೇಕಿದೆ' ಎಂದು ಯಡಿಯೂರಪ್ಪ ಅವರು ಗುಬ್ಬಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದಾಗ ಹೇಳಿದ್ದಾರೆ.












Click it and Unblock the Notifications