ಹೀನಾ-ಬಿಲಾವಲ್ ಪ್ರಣಯ: ಕೊನೆಗೂ ಸಂಪಾದಕ ಸೆರೆ

ಪಾಕ್ ಅಧ್ಯಕ್ಷ ಜರ್ದಾರಿಯ ಪುತ್ರ ಬಿಲಾವಲ್ ಭುಟ್ಟೋ ಜತೆಗಿನ external affairs ಜಗಜ್ಜಾಹೀರಾಗಿದೆ. ಅದರ ವಿರುದ್ಧ ಫತ್ವಾ ಹೊರಡಿಸಲು ಕರ್ಮಠ ಮನಸ್ಸಿನ ಇಸ್ಲಾಮಿಕ್ ಸಂಘಟನೆಗಳು ಆಲೋಚಿಸುತ್ತಿವೆ ಎಂದೂ ಎಂದು ಬಾಂಗ್ಲಾ ವಾರಪತ್ರಿಕೆ ವರದಿ ಮಾಡಿತ್ತು. ಇದೇ ಸುದ್ದಿ ಇಡೀ ಜಗತ್ತಿನ ಮಾಧ್ಯಮಗಳಿಗೆ ಆಹಾರವಾಗಿತ್ತು.
ಸಚಿವೆ ಹೀನಾ ರಬ್ಬಾನಿ ಬಾಂಗ್ಲಾ ಪ್ರವಾಸಕ್ಕೂ ಮುನ್ನ:
ಹಣಕಾಸು ದುರ್ವವ್ಯವಹಾರದ ಆರೋಪ ಹೊರಿಸಿ, Blitz ಸಂಪಾದಕನನ್ನು ಜೈಲಿಗಟ್ಟಲಾಗಿದೆ ಎಂದು ಬಾಂಗ್ಲಾ ಮಾಧ್ಯಮಗಳು ಇಂದು ವರದಿ ಮಾಡಿವೆ. ಅಂದಹಾಗೆ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಪ್ರಸ್ತುತ ಬಾಂಗ್ಲಾ ಪ್ರವಾಸದಲ್ಲಿದ್ದಾರೆ. ಶುಕ್ರವಾರ ಅವರು ಬಾಂಗ್ಲಾ ತಲುಪುವುದಕ್ಕೂ ಮುನ್ನ ಸಂಪಾದಕ ಸಲಾಹುದ್ದೀನ್ ಶೋಯೆಬ್ ನನ್ನು ಬಂಧಿಸಲಾಗಿದೆ.
ಹಣಕಾಸು ವಂಚನೆಯ ಆರೋಪದ ಮೇಲೆ ಕೋರ್ಟ್ ನಿರ್ದೇಶನದಂತೆ ವಿವಾದಿತ ಸಂಪಾದಕ ಸಲಾಹುದ್ದೀನ್ ಶೋಯೆಬ್ ಚೌಧರಿಯನ್ನು 2 ದಿನಗಳ ಹಿಂದೆಯೇ ಬಂಧಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಮಸೂದೂರ್ ರಹಮಾನ್ ತಿಳಿಸಿದ್ದಾರೆ. ಸಾಜದ್ ಹುಸೇನ್ ಎಂಬ ಉದ್ಯಮಿಯು ಸಂಪಾದಕ ಸಲಾಹುದ್ದೀನ್ ಶೋಯೆಬ್ ತನಗೆ ಹಣಕಾಸು ವಂಚನೆ (6.7 ದಶಲಕ್ಷ ಟಾಕಾ ಹಣ) ಮಾಡಿದ್ದಾನೆ ಎಂದು ದೂರಿದ್ದರು.
ಗಮನಾರ್ಹವೆಂದರೆ ವಿವಾದಿತ ಸಂಪಾದಕ ಸಲಾಹುದ್ದೀನ್ ಶೋಯೆಬ್ ನನ್ನು 2003ರಲ್ಲಿಯೂ ಬಂಧಿಸಲಾಗಿತ್ತು. ಬಾಂಗ್ಲಾ ಮತ್ತು ಇಸ್ರೇಲ್ ನಡುವೆ ಯಾವುದೇ ರಾಜತಾಂತ್ರಿಕ ಬಾಂಧವ್ಯ ಇಲ್ಲ. ಆದರೆ ಸದರಿ ಸಂಪಾದಕ ಇಸ್ರೇಲ್ ಜತೆ ಕೈಜೋಡಿಸಿ, ಬೇಹುಗಾರಿಕೆಯಲ್ಲಿ ತೊಡಗಿದ್ದ ಎಂದು ಆಗ ಆರೋಪಿಸಲಾಗಿತ್ತು. 2 ತಿಂಗಳ ಹಿಂದೆ ಸಚಿವೆ ಹೀನಾ ರಬ್ಬಾನಿ ಮತ್ತು ಬಿಲಾವಲ್ ಭುಟ್ಟೋ ನಡುವೆ 'ಎಕ್ಸಟರ್ನಲ್ ಅಫೇರ್ಸ್' ಚಾಲ್ತಿಯಲ್ಲಿದೆ ಎಂದು ಸುಖಾಸುಮ್ಮನೆ ಬರೆದು ವಿವಾದಕ್ಕೀಡಾಗಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications