ಒಬಾಮಾ ಪುನರಾಯ್ಕೆ: ಔಟ್ ಸೋರ್ಸಿಂಗ್ ಗತಿಯೇನು?

ಕುತೂಹಲಕಾರಿ ಸಂಗತಿಯೆಂದರೆ ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಬರಾಕ್ ಒಬಾಮಾ ಅವರು ಅಮೆರಿಕದ ಅಧ್ಯಕ್ಷರಾಗಿ ಮರುಆಯ್ಕೆಯಾಗಿರುವುದನ್ನು ಸ್ವಾಗತಿಸಿದೆ. ಹಾಗಂತ ಇದೇನೂ ಔಪಚಾರಿಕ ಶಿಷ್ಟಾಚಾರದಂತೆ ಕಾಣುತ್ತಿಲ್ಲ. ಬದಲಿಗೆ ನಿಜಕ್ಕೂ ಒಬಾಮಾ ಪುನರಾಯ್ಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದೆ.
ಎರಡು ಬಲಿಷ್ಠ ಆರ್ಥ ವ್ಯವಸ್ಥೆಗಳ ನಡುವೆ ಕೆಲವು ಆತಂಕದ ವಿಚಾರಗಳು ನುಸುಳುವುದು ಸಹಜ. ಆದರೆ ಮರು ಆಯ್ಕೆಯಾಗಿರುವುದರಿಂದ ಒಬಾಮಾ ಅವರು ನೆಮ್ಮದಿಯಿಂದ ದೂರದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಇದು ಭಾರತದ ಐಟಿ ಪರವಾಗಲಿದೆ ಎಂಬ ಆಶಯ/ಭರವಸೆ ಇದೆ ಎಂದು ಗೋದ್ರೇಜ್ ಗ್ರೂಪ್ ಅಧ್ಯಕ್ಷ ಆದಿ ಗೋದ್ರೇಜ್ ಅಭಿಪ್ರಾಯಪಟ್ಟಿದ್ದಾರೆ.
ಭಾರ್ತಿ ಗ್ರೂಪ್ ಅಧ್ಯಕ್ಷ ಸುನಿಲ್ ಭಾರ್ತಿ ಅವರದ್ದೂ ಇದೇ ಆಶಾಭಾವ. 'ಒಬಾಮಾ ಗೆಲುವು ಮತ್ತು ಭಾರತದ ಔಟ್ ಸೋರ್ಸಿಂಗ್ ಭವಿಷ್ಯ ಏನಾಗಲಿದೆ ಎನ್ನುವುದರ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆದಿವೆ. ಆದರೆ ಅವರು ಪುನರಾಯ್ಕೆ ಆಗಿರುವುದರಿಂದ ಅದಕ್ಕೊಂದು ಸ್ಪಷ್ಟ ರೂಪ ಸಿಗುವುದು ನಿಶ್ಚಿತ. ಈ ಹಿಂದೆ ಬಿಲ್ ಕ್ಲಿಂಟನ್ ವಿಷಯದಲ್ಲೂ ಇಂತಹುದೇ ಆತಂಕ ವ್ಯಕ್ತವಾಗಿತ್ತು. ಆದರೆ ಅಮೆರಿಕದಲ್ಲಿ ಭಾರತೀಯ ಐಟಿ ಕಂಪನಿಗಳ outsourcing ಅಬಾಧಿತವಾಗಿ ನಡೆಯಿತು. ಆದ್ದರಿಂದ ಈ ಬಾರಿಯೂ ಅಷ್ಟೇ...' ಎಂದು ಸುನಿಲ್ ಆಶಿಸಿದ್ದಾರೆ.
ಚುನಾವಣೆ ಪ್ರಚಾರದ ವೇಳೆ ಬರಾಕ್ ಒಬಾಮಾ ಭಾರತಕ್ಕೆ outsourcing ಕೆಲಸ ಒಪ್ಪಿಸುವುದಕ್ಕೆ ಹಿಂದೇಟು ಹಾಕಿದ್ದರು. ಸ್ಥಳೀಯರಿಗೇ ಉದ್ಯೋಗಾವಕಾಶ ಕಲ್ಪಿಸುವುದನ್ನು ಬಿಟ್ಟು ವಿದೇಶಗಳಿಗೆ ಏಕೆ ಮಣೆ ಹಾಕಬೇಕು ಎಂದು ಒಬಾಮಾ ಗುಡುಗಿದ್ದರು.
ಗಮನಾರ್ಹವೆಂದರೆ ಭಾರತೀಯ ಐಟಿ ಉದ್ಯಮದ (outsourcing) ಶೇ. 80ರಷ್ಟು ಆದಾಯ ಬರುತ್ತಿರುವುದು ಅಮೆರಿಕ ಮತ್ತು ಯುರೋಪ್ ದೇಶಗಳಿಂದಲೇ.
ಕೊನೆಯ ಮಾತು: ಅಯ್ಯೋ ಅದೊಂದು ಚುನಾವಣೆ ಗಿಮಿಕ್ ಅಷ್ಟೆ. ಆ ವೇಳೆ, ಒಬಾಮಾಗೆ ಹಾಗೆ ಮಾತನಾಡುವುದು ಅನಿವಾರ್ಯವಾಗಿತ್ತು. ಈಗ ಚುನಾವಣೆ ಮುಗಿದಿದೆ. ಫಲಿತಾಂಶವೂ ಹೊರಬಿದ್ದಿದೆ. ಇನ್ನೇನಿದ್ದರೂ ಎಂದಿನಂತೆ/ಹಿಂದಿನಂತೆ ಐಟಿ ಕೆಲಸಗಳು ಅಬಾಧಿತವಾಗಿ ಮುನ್ನಡೆಯಲಿದೆ ಎಂದು ವಾಸ್ತವಕ್ಕೆ ಕನ್ನಡಿ ಹಿಡಿದವರು ಟೆಕ್ಕಿ ರಮೇಶ್.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications