ದೀಪಾವಳಿಗೆ ಮೊಯ್ಲಿ ಕೊಡುಗೆ: ಸಿಲಿಂಡರ್ ಸಂಖ್ಯೆ ಹೆಚ್ಚಳ?

'ಇದು ತೈಲ ಕಂಪನಿಗಳ ಅಂಕ ತಪ್ಪಿದ ಅಂಕಗಣಿತ. ವರ್ಷಕ್ಕೆ ಸರಾಸರಿ 6 ಸಾಕಾದೀತು ಎಂದು ತಪ್ಪು ಲೆಕ್ಕಾಚಾರ ಹಾಕಿರಬಹುದು. ಇಲ್ಲಿ ರಸಾಯನ ಶಾಸ್ತ್ರ ಕೆಲಸ ಮಾಡಿಲ್ಲ' ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಮೊಯ್ಲಿ ವಿಶ್ಲೇಷಿಸಿದ್ದಾರೆ.
AICC ವಕ್ತಾರರೂ ಆದ ಮೊಯ್ಲಿ ಸುಳಿವು ನೀಡಿರುವಂತೆ LPG ಸಿಲಿಂಡರ್ ಮಿತಿಯನ್ನು 9ಕ್ಕೆ ಏರಿಸುವ ವಿಷಯವು ಇದೇ 9ರಂದು ಸೂರಜ್ಕುಂಡ್ನಲ್ಲಿ ನಡೆಯಲಿರುವ ಕಾಂಗ್ರೆಸ್ ಪ್ರಮುಖರ ಸಮಾವೇಶದಲ್ಲಿಯೂ ಚರ್ಚೆಯಾಗುವ ನಿರೀಕ್ಷೆ ಇದೆ.
'ವಾಸ್ತವವಾಗಿ, LPG ಮಿತಿ ಏರಿಕೆ ನಿರ್ಧಾರವು ಸಂಪೂರ್ಣವಾಗಿ ತೈಲ ಕಂಪನಿಗಳಿಗೆ ಬಿಟ್ಟಿದ್ದು. ಆದಾಗ್ಯೂ ಇದರಿಂದ ಕೇಂದ್ರ ಸರ್ಕಾರ ಭಾರಿ ಟೀಕೆಗೆ ಒಳಗಾಗಿದೆ. ಆದ್ದರಿಂದ ಸಬ್ಸಿಡಿಸಹಿತ ಗೃಹ ಬಳಕೆ LPG ಸಿಲಿಂಡರುಗಳ ಮಿತಿಯನ್ನು 9ಕ್ಕೆ ಹೆಚ್ಚಿಸಲು ಗಂಭೀರ ಚಿಂತನೆ ನಡೆಸಿದೆ' ಎಂದು ಅವರು ತಿಳಿಸಿದ್ದಾರೆ.
ಮುಖ್ಯವಾಗಿ, ಗುಜರಾತ್ ಚುನಾವಣೆಗಳೂ ಸೇರಿದಂತೆ ದೇಶದಲ್ಲಿ ಹಲವಾರು ವಿಧಾನಸಭೆಗಳಿಗೆ ಚುನಾವಣೆಗಳು ನಡೆಯಲಿದೆ. ಇದಲ್ಲದೆ, 2014ರ ಸಾರ್ವತ್ರಿಕ ಚುನಾವಣೆಯೂ ಎದುರಿಗೇ ಧುತ್ತನೆ ನಿಂತಿದೆ. ಈ ಸಂದರ್ಭದಲ್ಲಿ ಸಿಲಿಂಡರ್ ವಿಷಯ ಹೊಡೆತ ನೀಡಬಹುದು ಎಂದು ಕಾಂಗ್ರೆಸ್ ಪಕ್ಷದಲ್ಲೇ ಆತಂಕ ವ್ಯಕ್ತವಾಗುತ್ತಿದೆ. ದೆಹಲಿಯಲ್ಲಿ ಈ ಹಿಂದೆ ಈರುಳ್ಳಿ ಬೆಲೆಯೇರಿಕೆಯೇ ಚುನಾವಣೆಯಲ್ಲಿ ಪ್ರಧಾನ ವಿಷಯವಾಗಿ ಬಿಜೆಪಿ ಪೆಟ್ಟು ತಿಂದಿತ್ತು.
ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರೋರಾತ್ರಿ ಸಬ್ಸಿಡಿರಹಿತ ಸಿಲಿಂಡರಿನ ದರವನ್ನು 26 ರೂ. ಹೆಚ್ಚಿಸಲು ಮುಂದಾಗಿದ್ದ ಕೇಂದ್ರ ಸರ್ಕಾರ, ಈಗ ಸಿಲಿಂಡರ್ ಮಿತಿಯನ್ನು 9 ಕ್ಕೆ ಹೆಚ್ಚಿಸಿ, ಜನಪರ ಎನಿಸಿಕೊಳ್ಳಲು ಹವಣಿಸುತ್ತಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ನಲ್ಲಿ ಸಬ್ಸಿಡಿ ದರದ ಸಿಲಿಂಡರ್ಗಳನ್ನು 2 ತಿಂಗಳಿಗೆ ಒಂದರಂತೆ ವರ್ಷಕ್ಕೆ ಆರು ಮಾತ್ರ ಪೂರೈಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತ್ತು. ಹೆಚ್ಚುವರಿಯಾಗಿ ಸಿಲಿಂಡರ್ ಬೇಕಿದ್ದರೆ ಸಬ್ಸಿಡಿ ರಹಿತ ದರ ನೀಡಿ ಖರೀದಿಸುವಂತೆಯೂ ಹೇಳಿತ್ತು. ಸದ್ಯ ನವದೆಹಲಿಯಲ್ಲಿ ಸಬ್ಸಿಡಿ ದರದ ಸಿಲಿಂಡರ್ ದರ ರೂ 410.12 ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ದರ ರೂ 895.50 ರೂಪಾಯಿ ಇದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications