Get Updates
Get notified of breaking news, exclusive insights, and must-see stories!

ಅಧಿಕಾರ ಪೀಠ : ಅತಂತ್ರದಲ್ಲಿ ಕುರುಬ ಮತದಾರ

Siddu and Ugrappa, Kuruba leaders
ಹಿಂದುಳಿದವರು ಅಂದ ತಕ್ಷಣ ನಮಗೆ ನೆನಪಾಗೋದು ಕುರುಬ ಸಮುದಾಯ ಅಥವಾ ಈಡಿಗ ಸಮುದಾಯ ಮಾತ್ರ. ಆದರೆ, ಕುರುಬ ಸಮುದಾಯ ನಾಯಕ ಆಯ್ಕೆಯಲ್ಲಿ ಎಡವುತ್ತಿರುವುದು ಏಕೆ? ಕುರುಬ ಮತದಾರನ ಅತಂತ್ರ ಸ್ಥಿತಿಗೆ ಏನು ಕಾರಣ? ಮುಂದೆ ಓದಿ...

ಕೆಲ ತಿಂಗಳ ಹಿಂದೆ ಹಾಲುಮತ (ಕುರುಬ)ಸಮುದಾಯದವರು ದಾವಣಗೆರೆಯಲ್ಲಿ ದೊಡ್ಡ ಸಮಾವೇಶ ನಡೆಸುವ ಮೂಲಕ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಬೇಕಾದ ಒಂದು ಎನರ್ಜಿ ತುಂಬುವ ಕೆಲಸ ಮಾಡಿದ್ದರು. ಸಿದ್ದರಾಮಯ್ಯನವರು ಕೂಡ ಆಗಾಗ ಮುಖ್ಯಮಂತ್ರಿ ಸ್ಥಾನದ ಆಕ್ಷಾಂಕಿ ಎಂದು ಹೇಳಿಕೆ ಕೊಡುತ್ತಲ್ಲೆ ಬಂದಿದ್ದಾರೆ.

ಆದರೆ ಸಿದ್ದರಾಮಯ್ಯನವರಿಗೆ ಪ್ರಸ್ತಕ ರಾಜಕಾರಣದಲ್ಲಿ ಅಂತಹ ಅವಕಾಶಗಳು ಎಷ್ಟರಮಟ್ಟಿಗೆ ಇದೆ ಎಂದು ಪರಿಶೀಲಿಸಬೇಕಾಗಿರುತ್ತದೆ. ಲಿಂಗಾಯಿತ ಸಮುದಾಯದಲ್ಲಿ ಯಡಿಯೂರಪ್ಪನವರಿಗೆ ಇರುವ ಜನಪ್ರಿಯತೆ, ಒಕ್ಕಲಿಗ ಸಮುದಾಯದಲ್ಲಿ ದೇವೇಗೌಡರಿಗಿರುವ ಹಿಡಿತ ಕುರುಬ ಸಮುದಾಯದ ಮೇಲೆ ಮೇಲುನೋಟಕ್ಕೆ ಸಿದ್ದರಾಮಯ್ಯನವರಿಗೆ ಇರೋದು ಕಂಡುಬಂದರು ಇದನ್ನು ಮತಗಳಲ್ಲಿ ಬದಲಾಯಿಸುವ ವಿಷಯದಲ್ಲಿ ಮಾತ್ರ ಅದು ಸಾಧ್ಯವಾಗುತ್ತಿಲ್ಲ.

ಇದಕ್ಕೆ ಒಂದೆರಡು ತಾಜಾ ಉದಹಾರಣೆಗಳು ಅಂದರೆ ಕಡೂರು ಮತ್ತು ಕೊಪ್ಪಳ ಉಪಚುನಾವಣೆಗಳು. ಈ ಎರಡು ಕ್ಷೇತ್ರಗಳಲ್ಲಿ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿರುವ ಕುರುಬ ಸಮುದಾಯದಕ್ಕೆ ಸಿದ್ದರಾಮಯ್ಯನವರ ಮೇಲೆ ದೊಡ್ಡ ಅಭಿಮಾನ ಕೂಡ ಕಂಡು ಬರುತ್ತದೆ. ಆದರೆ ಚುನಾವಣೆಯಲ್ಲಿ ಮಾತ್ರ ಹೆಚ್ಚಿನ ಸಂಖ್ಯೆ ಕುರುಬರು ಎರಡು ಕಡೆ ಬಿಜೆಪಿಗೆ ಬೆಂಬಲಿಸಿದರು. ಇದು ಯಾಕೆ?

ಸಿದ್ದರಾಮಯ್ಯನವರು ಒಂದು ನಿಲುವಿಗೆ ಅಂಟಿಕೊಳ್ಳದೆ ಇರೋದೇ ಸಮುದಾಯದ ಮತದಾರರಿಗೆ ಯಾರ ಪರ ಮತ ಚಲಾಯಿಸಬೇಕೆಂಬ ಗೊಂದಲ ಆಗಾಗ ಉಂಟು ಮಾಡುತ್ತಿರುವುದು. ಆಗಾಗ ಬಿಜೆಪಿಯಲ್ಲಿ ಯಡಿಯೂರಪ್ಪನವರು ಅಸಮಾಧಾನಗೊಳ್ಳುವಂತೆ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಸಿದ್ದರಾಮಯ್ಯನವರು ಅಸಮಾಧಾನಗೊಳ್ಳುತ್ತಲ್ಲೆ ಇರ್‍ತಾರೆ.

ಆದರೆ ವ್ಯತ್ಯಾಸ ಅಂದರೆ ಯಡಿಯೂರಪ್ಪನವರ ಬೆಲೆ ಚೆನ್ನಾಗಿ ಗೊತ್ತಿರುವ ಬಿಜೆಪಿ ಹೈಕಮಾಂಡ್ ತಕ್ಕಮಟ್ಟಿಗೆ ಅವರ ಬೇಡಿಕೆಗಳನ್ನು ಈಡೇರಿಸುತ್ತಲ್ಲೆ ಬಂದಿದೆ. ಇದೇ ಕಾರಣಕ್ಕೆ ಅವರ ಬೆಂಬಲಿಗರು ಈಗಲೂ ಸಚಿವ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.

ಇದನ್ನೆ ನೆಪವಾಗಿಟ್ಟುಕೊಂಡು ಸಿದ್ದರಾಮಯ್ಯನವರು ಅನೇಕ ಸಲ ಬಿಜೆಪಿ ಹೈಕಮಾಂಡ್‌ನ ಲೋ ಕಮಾಂಡ್ ಅನ್ನುತ್ತ ಜರೆಯುತ್ತಲ್ಲೆ ಬಂದಿದ್ದಾರೆ. ಆದರೆ ತುಂಬಾ ಪವರ್‌ಪುಲ್ ಆದ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರ ಎಷ್ಟು ಬೇಡಿಕೆಗಳಿಗೆ ಸ್ಪಂದಿಸಿದೆ?

ಕನಿಷ್ಟ ಸಿದ್ದರಾಮಯ್ಯನವರು ಸೂಚಿಸಿದ ಸಿ.ಎಂ.ಇಬ್ರಾಹಿಂರಂತ ಒಂದೇ ಒಂದು ಅಭ್ಯರ್ಥಿಗೂ ಕೂಡ ಹೈಕಮಾಂಡ್ ಪರಿಷತ್ ಚುನಾವಣೆಯಲ್ಲಿ ಟಿಕೇಟ್ ನೀಡೋದಿಲ್ಲ. ಸಿದ್ದರಾಮಯ್ಯನವರಿಗೆ ಆಗಾಗ ಇಂತಹ ಅವಮಾನಗಳು ಕಾಂಗ್ರೆಸ್‌ನಿಂದ ಆಗುತ್ತಿದ್ದರು ಸಹಿಸಿಕೊಂಡು ಇರಬೇಕಾದ ಪರಸ್ಥಿತಿಯಲ್ಲಿದ್ದಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯನವರ ಸ್ವಯಂಕೃತ ಅಪರಾಧ.

ಜೆಡಿಎಸ್‌ನಿಂದ ಹೊರಬಂದಾಗ ಈ ರಾಜ್ಯದ ಪ್ರಗತಿಪರರು, ಅಹಿಂದ ಸಮಾಜ ಪೂರ್ತಿಯಾಗಿ ಸಿದ್ದರಾಮಯ್ಯನವರ ಪರವಾಗಿ ನಿಂತಿತ್ತು. ಆ ದಿನ ಲಿಂಗಾಯಿತ-ಒಕ್ಕಲಿಗ ಸಮಾಜಗಳಿಗೆ ಹೊರತಾದ ಒಂದು ನಾಯಕತ್ವಕ್ಕಾಗಿ ಅಹಿಂದ ಸಮುದಾಯ ಎದುರು ನೋಡುತ್ತಿತ್ತು,

ಅವರ ಕಣ್ಣಲ್ಲಿ ಸಿದ್ದರಾಮಯ್ಯನವರೇ ಇದಕ್ಕೆ ಸಮರ್ಥನಾಗಿ ಕಂಡು ಬಂದರು. ಆದರೆ ಹೊಸಪಕ್ಷ ಕಟ್ಟಿ ಧೈರ್‍ಯವಾಗಿ ಮುನ್ನುಗ್ಗುವ ಬದಲು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಅವರನ್ನು ಪಕ್ಷಕ್ಕೆ ಕರೆತರುವ ಮುನ್ನ ಇಂದ್ರ-ಚಂದ್ರ ಅಂತೆಲ್ಲಾ ಗುಣಗಾನ ಮಾಡಿದವರೆ ಪಕ್ಷಕ್ಕೆ ಸೇರಿದ ಮೇಲೆ ಮೂಲೆಗುಂಪು ಮಾಡಬಿಟ್ಟರು. ವಿರೋಧಪಕ್ಷ ನಾಯಕನ ಸ್ಥಾನಕ್ಕಾಗಿ ಅವರು ಎಷ್ಟು ಹರಸಾಹಸ ಮಾಡಬೇಕಾಗಿ ಬಂತು ಅಂತ ಬಿಡಿಸಿ ಹೇಳಬೇಕಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+