ಮೋದಿದು ಹಿಂಸೆಯಲ್ಲ, ಶೂದ್ರ ಮೀನು ತಿಂದರೆ ಹಿಂಸೆಯಾ?

ಇನ್ನು, ನೀವು(ಪೇಜಾವರ ಶ್ರೀ) ಬ್ರಾಹ್ಮಣ ಸಮಾವೇಶಗಳಿಗೆ ಹೋಗಿ ಅಂತರ್ಜಾತಿ ವಿವಾಹ ಆಗಬೇಡಿ, ಸಂಸ್ಕೃತಿ ಹಾಳಾಗುತ್ತದೆ. ಮಾಂಸಾಹಾರ ಸೇವನೆ ಮಾಡಬೇಡಿ ಎನ್ನುತ್ತೀರಿ. ನಿಮಗೆ ನನ್ನದೊಂದು ಸವಾಲು - 'ದಲಿತರ ಕೇರಿಗಳಿಗೆ ಹೋಗುವ ನೀವು ಅಲ್ಲಿಂದ ಬಂದು ಸ್ನಾನ ಮಾಡಿ, ಹಸುವಿನ ಗಂಜಲದಿಂದ ಶುದ್ಧಿ ಮಾಡಿಕೊಳ್ಳುತ್ತೀರಿ. ಒಂದು ವೇಳೆ, ನೀವು ಈ ರೀತಿ ಮಾಡುತ್ತಿಲ್ಲ ಎಂದು ಹೇಳಿದರೆ ಖಂಡಿತ ನಿಮ್ಮ ಕಾಲಿಗೆ ಬೀಳುತ್ತೇನೆ' ಎಂದೂ ಪ್ರೊ. ರಾವ್ ಹೇಳಿದ್ದಾರೆ.
ಪ್ರೊ. ರಾವ್ ಇನ್ನೂ ಏನೆಲ್ಲ ಹೇಳಿದರು?:
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (DSS) ವತಿಯಿಂದ ಭಾನುವಾರ ಐವರ್ನಾಡು ಕಾಲೇಜಿನಲ್ಲಿ 'ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಶಕ್ತಿಗಳ ಐಕ್ಯತೆಗಾಗಿ' ನಡೆದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ, ಮಾತನಾಡಿದ ಪ್ರೊ. ರಾವ್ ಇನ್ನೂ ಏನೆಲ್ಲ ಹೇಳಿದರೆಂದರೆ...
* ಜಾತಿ ವಿನಾಶ ಪ್ರಕ್ರಿಯೆ ಆರಂಭಗೊಳ್ಳಬೇಕಿರುವುದು ಮೇಲ್ವರ್ಗ ಎನಿಸಿಕೊಂಡ ಬ್ರಾಹ್ಮಣರಿಂದಲೇ ಹೊರತು ದಲಿತರಿಂದಲ್ಲ. ಸಮಾಜದ ಸುಳ್ಳುಗಳನ್ನು, ಸ್ವಾರ್ಥಗಳನ್ನು ಮೀರಿದ ಬದುಕು ದಲಿತರದ್ದಾಗಬೇಕು. ತಮ್ಮ ಮನಸ್ಸಿನ ನೋವು, ಕಹಿ ಬಿಟ್ಟು ಸ್ವಾಭಿಮಾನದಿಂದ ಬದುಕುವುದನ್ನು ದಲಿತರು ಕಲಿಯಬೇಕು.
* ದೇಶದ ಪರಮೋಚ್ಚ ಸಾರ್ವಜನಿಕ ಧರ್ಮವೆಂದರೆ ಪ್ರಜಾಪ್ರಭುತ್ವ. ಮಿಕ್ಕೆಲ್ಲವೂ ವೈಯಕ್ತಿಕವಾದ ಧರ್ಮಗಳು. ಅವು ಮನೆಗೆ ಮಾತ್ರ ಸೀಮಿತವಾಗಬೇಕು. ಅದಕ್ಕೂ ಪ್ರಜಾಪ್ರಭುತ್ವಕ್ಕೂ ತಳುಕು ಹಾಕಬಾರದು. ಪ್ರಜಾಪ್ರಭುತ್ವದ ಧರ್ಮ ಗ್ರಂಥವೇ ಸಂವಿಧಾನ. ಇವೆರಡೂ ಚಲನಶೀಲವಾಗಿರುವುದರಿಂದ ವೌಲ್ಯ ಉಳಿದಿದೆ.
* ಸಾರ್ವಜನಿಕ ಬದುಕಿನಲ್ಲಿ ಜಾತಿ ಧರ್ಮದ ಪ್ರಭಾವ ಕುಗ್ಗದಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ನಮ್ಮ ನಾಳಿನ ಚಿಂತನೆಗೆ, ಪ್ರಗತಿಯ ಚಿಂತನೆಗೆ ಶಕ್ತಿ ಕೊಡಲಾರದ ಯಾವುದೇ ಧರ್ಮವನ್ನು ತಿರಸ್ಕರಿಸುವ ಶಕ್ತಿ ನಮಗೆ ಬರಬೇಕು. ಶೇ. 95 ರಷ್ಟು ಮಠಗಳು ಸಮಾಜಮುಖಿಯಾಗಿಲ್ಲ. ಅವುಗಳನ್ನು ತಿರಸ್ಕರಿಸದಿದ್ದರೆ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತದೆ.
* ಪ್ರಜಾಪ್ರಭುತ್ವ ಮತ್ತು ಧರ್ಮ ಒಂದಾಗಬೇಕು. ಆದರೆ ಪ್ರಜಾಪ್ರಭುತ್ವವೆಂದರೆ ವಿಧಾನಸಭಾ ರಾಜಕಾರಣವಾಗಲೀ, ಧರ್ಮವೆಂದರೆ ಮಠ ಧರ್ಮವಾಗಲೀ ಅಲ್ಲ. ಚುನಾವಣೆಯಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವ ಮುಖ್ಯವಾಗಬೇಕೇ ಹೊರತು ಜಾತಿ, ಧರ್ಮ ಅಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications