ಅಜಂತಾ ಗಡಿಯಾರ ನಿಂತಿದೆ, ಎರಡು ನಿಮಿಷ ಮೌನ

ಜಗತ್ತಿನ ಅತಿ ದೊಡ್ಡ ಗೋಡೆ ಗಡಿಯಾರ ನಿರ್ಮಾಣ ಕಂಪನಿ ಅಜಂತಾ ಗ್ರೂಪ್ನ ಸಂಸ್ಥಾಪಕ ಓಧವಜಿ ರಾಘವಜಿ ಪಟೇಲ್ (87) ಅವರು ಮೋರ್ಬಿಯಲ್ಲಿ ಕಾಲವಶವಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ಗುಜರಾತ್ನ ಸೌರಾಷ್ಟ್ರದ ತಮ್ಮ ನಿವಾಸದಲ್ಲಿ ಕಳೆದೆರಡು ತಿಂಗಳುಗಳಿಂದ ಕೃತಕ ಉಸಿರಾಟದ ಸಾಧನ ಅಳವಡಿಸಲಾಗಿತ್ತು.
ಭಾರತದ ಗೋಡೆ ಗಡಿಯಾರದ ಜನಕ ಎಂದೇ ಖ್ಯಾತರಾಗಿದ್ದ ಓಧವಜಿ ಪಟೇಲ್ ಅವರು ಭಾರತದಲ್ಲಿ ಮಾತ್ರವಲ್ಲ ಸುಮಾರು 45 ರಾಷ್ಟ್ರಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿದ್ದಾರೆ. ಅಜಂತಾ, ಆರ್ಪಟ್ ಮತ್ತು ಒರೆವಾ ಬ್ರಾಂಡ್ ಇರುವ ಗೋಡೆಗಡಿಯಾರ, ಸ್ವಿಚ್, ಟೈಲ್ಸ್, ಎಲೆಕ್ಟ್ರಿಕ್ ಬೈಕ್, ಟ್ಯೂಬ್ಲೈಟ್, ದೂರವಾಣಿ, ಕ್ಯಾಲ್ಕ್ಯುಲೇಟರ್ ಮುಂತಾದ ಉತ್ಪನ್ನಗಳು ವಿಶ್ವದಾದ್ಯಂತ ಮಾರಾಟವಾಗುತ್ತಿವೆ.
ಇಂಥ ಬೃಹತ್ ಉದ್ಯಮ ಸ್ಥಾಪಿಸಿದ್ದರೂ ಪಟೇಲ್ ಅವರು ತಮ್ಮನ್ನು 'ಉದ್ಯಮಿ ಎಂದು ಕರೆಯಬೇಡಿ, ಮೇಷ್ಟ್ರೇ ಎಂದೇ ಕರೆಯಿರಿ' ಎಂದು ವಿನಮ್ರವಾಗಿ ಹೇಳುತ್ತಿದ್ದರು. ಅವರು ಎಷ್ಟೇ ಎತ್ತರಕ್ಕೆ ಏರಿದ್ದರೂ, ತಮ್ಮ ಮೂಲ ವೃತ್ತಿಯನ್ನು ಮಾತ್ರ ಮರೆತಿರಲಿಲ್ಲ. ಇಂಥ ವ್ಯಕ್ತಿತ್ವವೇ ಅವರನ್ನು ಮತ್ತಷ್ಟು ಮೇಲಕ್ಕೆ ಏರುವಂತೆ ಮಾಡುತ್ತಿತ್ತು.
ವೃತ್ತಿಯಿಂದ ಮೊರ್ಬಿಯ ವಿ.ಸಿ. ಹೈಸ್ಕೂಲಿನಲ್ಲಿ ವಿಜ್ಞಾನ ಮತ್ತು ಗಣಿತವನ್ನು ಕಲಿಸುತ್ತಿದ್ದ ಪಟೇಲ್ ಅವರಿಗೆ ತಿಂಗಳಿಗೆ ಬರುತ್ತಿದ್ದ 55 ರು.ನಿಂದ 4 ಗಂಡು ಮಕ್ಕಳು, 2 ಹೆಣ್ಣು ಮಕ್ಕಳಿದ ಬೃಹತ್ ಸಂಸಾರವನ್ನು ಮುನ್ನಡೆಸುವುದು ದುಸ್ತರವಾಗಿತ್ತು. ಆಗ ಅವರ ತಲೆಯಲ್ಲಿ ಹೊಳೆದದ್ದೇ ಗಡಿಯಾರ ನಿರ್ಮಿಸುವ ಕಾರ್ಖಾನೆ ಸ್ಥಾಪಿಸಬೇಕೆಂಬ ತೀರ್ಮಾನ.
ಬಾಡಿಗೆ ಮನೆಯಲ್ಲಿಯೇ ಅಜಂತಾ ಟ್ರಾನ್ಸಿಸ್ಟರ್ ಕ್ಲಾಕ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿಯನ್ನು 1971ರಲ್ಲಿ ಸ್ಥಾಪಿಸಿಯೇಬಿಟ್ಟರು. ಆದರೆ, ಸಾಂಪ್ರದಾಯಿಕ ಗೋಡೆಗಡಿಯಾರಗಳ ಸ್ಥಾನವನ್ನು ಕ್ವಾರ್ಟ್ಜ್ ಗಡಿಯಾರಗಳು ಆಕ್ರಮಿಸಿದ್ದು 1980ರಲ್ಲಿ. ಅಜಂತಾ ಕ್ವಾರ್ಟ್ಜ್ ಹೆಸರು ಬಂದಿದ್ದು ಅಂದಿನಿಂದಲೇ. ಈ ಗಡಿಯಾರಗಳು ಸರಳವಾಗಿದ್ದವು, ಸಮಯವನ್ನು ಅತ್ಯಂತ ನಿಖರವಾಗಿ ತೋರಿಸುತ್ತಿದ್ದವು ಮತ್ತು ಕೈಗೆಟಕುವ ದರಕ್ಕೆ ಸಿಗುತ್ತಿದ್ದವು. ಜನಪ್ರಿಯತೆ ಪಡೆಯಲು ಇನ್ನೇನು ಬೇಕಿತ್ತು?
ಉದ್ಯಮ ಜಗತ್ತಿನಾದ್ಯಂತ ವಿಸ್ತರಿಸಿದ್ದರಿಂದ ಶ್ರೀಮಂತಿಕೆಯ ಮದದಿಂದ ಪಟೇಲ್ ಅವರು ಬೀಗಲಿಲ್ಲ. ಬದಲಿಗೆ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಲಾಭದಿಂದ ಬಂದ ಹಣವನ್ನು ಮತ್ತೆ ಉದ್ಯಮದಲ್ಲಿಯೇ ತೊಡಗಿಸಿದರು. ಅಜಂತಾ ಕ್ವಾರ್ಟ್ಜ್ನ ಜನಪ್ರಿಯತೆ ತುಸು ಕುಸಿಯುತ್ತಿದ್ದಂತೆ ಬೇರೆ ಉತ್ಪನ್ನಗಳಲ್ಲಿ ತೊಡಗಿಸಿದರು.
ಅಜಂತಾದಲ್ಲಿ 7 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ 5 ಸಾವಿರಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಪಟೇಲ್ ಅವರ ಯಶಸ್ಸಿನ ಗುಟ್ಟು ಕೂಡ ಇದೇ. ಅವರು ಯಾವಾಗಲೂ ಇದೇ ಮಾತನ್ನು ಹೇಳುತ್ತಿದ್ದರು. ಅದೇನೆಂದರೆ, ಪುರುಷರಿಗಿಂತ ಸ್ತ್ರೀಯರೇ ಹೆಚ್ಚು ಸಾಮರ್ಥ್ಯವುಳ್ಳವರು. [Photo : Mint]
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications