ಸಚಿನ್ ಕೋಕಾಕೋಲಾ ಹಿಡಿದಿದ್ದೆ ಭರ್ಜರಿ ಹಿಟ್

ಕಳೆದ ತ್ರೈಮಾಸಿಕದಲ್ಲಿ ಭಾರತದಲ್ಲಿ ಕೋಕಾಕೋಲಾ ಮಾರಾಟದಲ್ಲಿ ಶೇ 15 ರಷ್ಟು ಪ್ರಗತಿ ಕಾಣಲಾಗಿದೆ. ಸೆಪ್ಟೆಂಬರ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಆದಾಯದಲ್ಲಿ ಶೇ 4 ರಷ್ಟು ಹೆಚ್ಚಿದ್ದು 2.31 ಬಿಲಿಯನ್ ಡಾಲರ್ ಗಳಿಸಲಾಗಿದೆ. ಈ ಅವಧಿಯಲ್ಲಿ ಭಾರತದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ ಎಂದು ಸಂಸ್ಥೆ ಪ್ರಕಟಿಸಿದೆ.
ಭಾರತದ ನಂತರ ಮಧ್ಯ ಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದಲ್ಲಿ ಶೇ 22 ರಷ್ಟು ಏರಿಕೆ ಕಂಡಿದೆ, ರಷ್ಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಶೇ 7 ರಷ್ಟು ಮಾರಾಟ ಪ್ರಗತಿ ಕಾಣಲಾಗಿದೆ.
ಭಾರತದಲ್ಲಿ ಕೋಕಾಕೋಲಾಗಿಂತ ಜ್ಯೂಸ್ ಮಾದರಿ ತಂಪು ಪಾನೀಯಗಳೇ ಹೆಚ್ಚು ಬೇಡಿಕೆ ಉಳಿಸಿಕೊಂಡಿದೆ. ಮಿನಿಟ್ ಮೇಡ್ ಪಲ್ಪಿ ಹಾಗೂ ಮ್ಯಾಂಗೋ ಮಾಜಾ ಜ್ಯೂಸ್ ಬೇಡಿಕೆ ಹೆಚ್ಚುತ್ತಿದೆ ಎಂದು ಕೋಕಾಕೋಲಾ ಸಂಸ್ಥೆ ಹೇಳಿದೆ.
ಒಟ್ಟಾರೆ ಭಾರತದಲ್ಲಿ ಈ ತ್ರೈಮಾಸಿಕದಲ್ಲಿ ಕೋಕಾಕೋಲಾ ಶೇ 34 ಹಾಗೂ ಸ್ಪ್ರೈಟ್ ಶೇ 15 ನಷ್ಟು ಬೇಡಿಕೆ ಹೆಚ್ಚಿಸಿಕೊಂಡಿದೆ.
ಮೂರನೇ ತ್ರೈಮಾಸಿಕದ ಕೊನೆಗೆ ಕಂಪನಿಯ ನಿವ್ವಳ ಆದಾಯ 12.34 ಬಿಲಿಯನ್ ಡಾಲರ್ ನಷ್ಟಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾರತದಲ್ಲಿ ಹೆಚ್ಚಿನ ಹಣ ತೊಡಗಿಸಿ ಕೋಕಾಕೋಲಾ ಹೆಚ್ಚಿನ ಗಳಿಕೆ ಎತ್ತಿದೆ.
ಜಾಗತಿಕವಾಗಿ ತಂಪು ಪಾನೀಯ ಮಾರುಕಟ್ಟೆಯಲ್ಲಿ ಶೇ 52 ರಷ್ಟು ಪಾಲು ಹೊಂದಿದ್ದು, ಶೇ 21.4 ರಷ್ಟು ಪಾಲು ಹೊಂದಿರುವ ಪೆಪ್ಸಿಕೋ ಗಿಂತ ಮುಂದಿದೆ. ಆದರೆ, ಭಾರತದ ಮಾರುಕಟ್ಟೆಯಲ್ಲಿ ಕೋಕಾ ಕೋಲಾಗೆ ಕಠಿಣ ಪೈಪೋಟಿ ಎದುರಿಸುತ್ತಿದೆ.
ಭಾರತದಲ್ಲಿ ಕೋಕಾ ಕೋಲಾ ಶೇ 56 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಶೇ 40 ರಷ್ಟು ಪಾಲು ಪೆಪ್ಸಿಕೋ ಬಳಿ ಇದೆ.
1993ರಲ್ಲಿ ಥಮ್ಸ್ ಅಪ್, ಸ್ಥಳೀಯ ಸೋಡಾ ಬ್ರಾಂಡ್ ಗಳನ್ನು ಖರೀದಿಸಿದ ಕೋಕಾ ಕೋಲಾ ಮತ್ತೆ ಹಿಂತಿರುಗಿ ನೋಡಿಲ್ಲ, ಸ್ಪ್ರೈಟ್ ಅತಿ ಹೆಚ್ಚು ಮಾರಾಟವಾಗುವ ಬ್ರಾಂಡ್ ಆಗಿದೆ. ಶೇ 16.5ರಷ್ಟು ಪಾಲು ಹೊಂದಿದೆ. ಮಾಜಾ ಜ್ಯೂಸ್ ಕೆಟಗೆರಿಯಲ್ಲಿ ಮುಂಚೂಣಿಯಲ್ಲಿದೆ.
ಸೋಡಾ ಮಾರುಕಟ್ಟೆಯಲ್ಲಿ ಪೆಪ್ಸಿಕೋ ಶೇ 15ರಷ್ಟು ಪಾಲು ಹೊಂದಿದ್ದರೆ ಕೋಕ್ ಶೇ 8.8 ರಷ್ಟು ಮಾತ್ರ ಹೊಂದಿದ್ದು ಹಿಂದೆ ಬಿದ್ದಿದೆ.
ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಆರ್ಥಿಕ ಏರಿಳಿತಕ್ಕೂ ಉತ್ತರ ನೀಡಲಾಗುವುದು. ಲಾಭ ವನ್ನು ದ್ವಿಗುಣಗೊಳಿಸಲಾಗುವುದು.
ಸಚಿನ್ ತೆಂಡೂಲ್ಕರ್ ಅವರಂಥ ಬ್ರಾಂಡ್ ಅಂಬಾಸಿಡರ್ ಮೂಲಕ ಇನ್ನಷ್ಟು ಪ್ರಗತಿ ಕಾಣಲು ಕೋಕಾ ಕೋಲಾ ಯೋಜಿಸಿದೆ ಎಂದು ಸಂಸ್ಥೆಯ ಭಾರತದ ಪ್ರತಿನಿಧಿಗಳು ಹೇಳಿದ್ದಾರೆ. ಗುರುವಾರ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಶೇ 0.42 ರಷ್ಟು ಷೇರುಗಳು ಕುಸಿದಿದೆ
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications