ಪಬ್ಲಿಕ್ ಟಿವಿಯಲ್ಲಿ ಕಾಳಿ ಸ್ವಾಮಿಯ ಡೀಲ್ - ಶೊ

ಏನಿದು ಡೀಲ್ ಕಾಳಿ? : ಅದೊಂದು ಸ್ಟಿಂಗ್ ಆಪರೇಷನ್. ಬಿಡದಿ ಆಶ್ರಮದ ಪರಮಹಂಸ ನಿತ್ಯಾನಂದ ಸ್ವಾಮಿಯ ಇಂಟರ್ ನ್ಯಾಷನಲ್ ಲೆವೆಲ್ ಪಾಪ ಕೃತ್ಯಗಳನ್ನು ರಾಜಾರೋಷದಿಂದ, ಆವೇಶದಿಂದ ಲೋಕಲ್ ಮಟ್ಟದಲ್ಲಿ ವಿರೋಧಿಸುತ್ತಿದ್ದ ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿ ಎಂಬಾತ ಹಣದ ಆಸೆಗೆ ಬಿದ್ದು ತಾನೇ ನೇಯ್ದ ಜೇಡರ ಬಲೆಯಲ್ಲಿ ತಾನೇ ಸಿಕ್ಕಿಬಿದ್ದ ಕಥೆ.
ವಿಷಯ ಇಷ್ಟು : ಕಾಳಿ ಸ್ವಾಮಿ ಮೇಲುನೋಟಕ್ಕೆ ಸಮಾಜದ ಕೊಳೆ ತೊಳೆಯಲು ಹೊರಟ ವೀರ ಸನ್ಯಾಸಿಯಂತೆ ಕಂಡರೂ ಆತನೊಬ್ಬ ಭಯಂಕರ ಡೀಲ್ ಮಾಸ್ಟರ್ ಎನ್ನುವುದು ಟಿವಿ ಪ್ರಸಾರ ಮಾಡಿದ ವಿಡಿಯೊ ಫುಟೇಜುಗಳಲ್ಲಿ ಬಹಿರಂಗವಾಯಿತು. ನಿತ್ಯಾನಂದನ ರಾಸಲೀಲೆಗಳು, ಆತನ ಆಶ್ರಮದ ಚಟುವಟಿಕೆಗಳ ವಿರುದ್ಧ ಹರಿಹಾಯುತ್ತಿದ್ದ ಕಾಳಿಸ್ವಾಮಿ, ಅದೇ ನಿತ್ಯಾನಂದನ ಸನ್ನಿಧಿಯಿಂದ 10 ಕೋಟಿ ರೂಪಾಯಿ ಕಪ್ಪ ಮತ್ತು ಒಂದು ಫಾರ್ಚೂನರ್ ಕಾರಿನ ಮೋಹಕ್ಕೆ ಸಿಲುಕಿದ್ದು ಕೋಟಿಗಟ್ಟಲೆ ಕನ್ನಡಿಗರ ಮುಂದೆ ಬೆತ್ತಲೆ ಆಯಿತು.
ಸ್ಟಿಂಗ್ ಆಪರೇಷನ್ನಿನಲ್ಲಿ ಇದ್ದವರು ಕಾಳಿ ಸ್ವಾಮಿಯ ಮೂರು ಮಂದಿ ಮಾಜಿ ಶಿಷ್ಯರು. ಈ ಮೊದಲು ಸ್ವಾಮಿಯ ವಾಕ್ ಚಾತುರ್ಯಕ್ಕೆ, ಪ್ರಭಾವಳಿಗೆ ಅವರು ಮನಸೋತಿರುತ್ತಾರೆ. ಆದರೆ, ಆತನಿಗೆ ಅಂಟಿದ ಕೀರ್ತಿ ಶನಿ, ಧನದಾಹ, ಪ್ರಚಾರ ಪ್ರಿಯತೆ ಕ್ರಮೇಣ ಗೊತ್ತಾಗಿ ಸ್ವಾಮಿಯನ್ನು ಖೆಡ್ಡದಲ್ಲಿ ಕೆಡವಲು ಪ್ಲಾನ್ ಮಾಡುತ್ತಾರೆ. ಅಂತಿಮವಾಗಿ ಬಲೆಗೆ ಬಿದ್ದ ಕಾಳಿ ಹಗರಣ ಪ್ರಸಾರ ಮಾಡುವುದಕ್ಕೆ ಪಬ್ಲಿಕ್ ಟಿವಿ ವೇದಿಕೆ ಆಗುತ್ತದೆ.
ಡೀಲ್ ಏನೆಂದರೆ: ನಿತ್ಯಾನಂದನ ವಿರುದ್ಧದ ಹೋರಾಟವನ್ನು ಕಾಳಿ ಸ್ವಾಮಿ ತುಳಿಯುವುದು. ನಿತ್ಯಾ ವಿರುದ್ಧ ಚಳವಳಿ ನಡೆಸುತ್ತಿರುವ ಕನ್ನಡಪರ, ಮಹಿಳಾಪರ ಸಂಘಟನೆಗಳ ಬಾಯಿ ಮುಚ್ಚಿಸುವುದು. ನಿತ್ಯಾನಂದನಿಂದ ಶೋಷಣೆಗೊಳಗಾಗಿರುವ (ಅತ್ಯಾಚಾರ ) ಅನಿವಾಸಿ ಭಾರತೀಯ ಆರತಿ ರಾವ್ ಅವರ ಹೋರಾಟ ಹಳ್ಳ ಹಿಡಿಸುವುದು. ಆದರೆ, ಈ ಪ್ರಾಜೆಕ್ಟಿಗೆ ನಿತ್ಯಾನಂದ ಆಶ್ರಮದಿಂದ ಪೇಮೆಂಟ್ ರೂಪದಲ್ಲಿ 10 ಕೋಟಿ ರೂ ಹಶ್ ಮನಿ ಹಾಗೂ ಒಂದು 4WD ಫಾರ್ಚೂನ್ ಕಾರ್ ( ಬೆಲೆ 28 ಲಕ್ಷ ) ಕೊಡಬೇಕು. ಇದನ್ನೆಲ್ಲ ಕಾಳಿಸ್ವಾಮಿಗೆ ಕೊಡಿಸುವ ಕ್ಯಾರಟ್ಟೇ ಪಬ್ಲಿಕ್ ಟಿವಿಯ ಸ್ಟಿಂಗ್ ಆಪರೇಷನ್.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications